ಪಪಂ ಆಡಳಿತ ವ್ಯವಸ್ಥೆ ವಿರುದ್ಧ ಮಹಿಳೆಯರ ಪ್ರತಿಭಟನೆ


Team Udayavani, Nov 14, 2020, 3:19 PM IST

bk-tdy-2

ಬೀಳಗಿ: ಕುಡಿಯುವ ನೀರಿನ ಅವ್ಯವಸ್ಥೆ, ಸರಿಯಾದ ನಿರ್ವಹಣೆಯಿಲ್ಲದೆ ಇದ್ದು ಇಲ್ಲದಂತಿರುವ ಮಹಿಳಾ ಶೌಚಾಲಯಗಳ ಹದಗೆಟ್ಟ ವ್ಯವಸ್ಥೆ ಮತ್ತು ಕಸಗೂಡಿಸದೆ ಅಶುಚಿತ್ವ ರಸ್ತೆಗಳ ದುಸ್ಥಿತಿ ಖಂಡಿಸಿ ಪಟ್ಟಣದ ಕಾಟಕರ ಓಣಿಯ ಮಹಿಳೆಯರು ಸ್ಥಳೀಯ ಪಪಂ ಆಡಳಿತ ವ್ಯವಸ್ಥೆಯ ವಿರುದ್ಧ ಶುಕ್ರವಾರ ಪ್ರತಿಭಟಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಕಾಟಕರ ಓಣಿಯ ಕೌಲಗಿಯವರ ಹಿಟ್ಟಿನ ಗಿರಣಿ ಹತ್ತಿರದ ಅವ್ಯವಸ್ಥೆಯ ಆಗರವಾಗಿರುವ ಮಹಿಳೆಯರ ಶೌಚಾಲಯ ಎದುರು ಕೆಲಕಾಲ ಪ್ರತಿಭಟಿಸಿದ ಮಹಿಳೆಯರು, 24 ಆಸನಗಳಮತ್ತು 10 ಆಸನಗಳ ಪ್ರತ್ಯೇಕ ಎರಡುಶೌಚಾಲಯ ಕಟ್ಟಡಗಳಿವೆ. ನೂತನವಾಗಿ ನಿರ್ಮಿಸಿದ 10 ಆಸನಗಳ ಶೌಚಾಲಯ ಅನುದಾನ ಬಳಕೆ ಮಾಡಲು ಮಾತ್ರ ಸೀಮಿತವಾಗಿದೆ. ಕಟ್ಟಡ ಕಟ್ಟಿದ ನಂತರ ಒಂದೇ ಒಂದು ದಿವಸ ಉಪಯೋಗಿಸಿಲ್ಲ. ಇಲ್ಲಿ ನೀರಿನ,ದೀಪದ ವ್ಯವಸ್ಥೆಯಿಲ್ಲ. ಹೊಸ ಶೌಚಾಲಯ ಕಟ್ಟಡ ನಿರುಪಯುಕ್ತವಾದ ಪರಿಣಾಮ, ಶೌಚಾಲಯದ ಸಂಪರ್ಕ ಪೈಪ್‌ಗ್ಳು ಕೂಡ ಕಿತ್ತು ಹೋಗಿವೆ.

ಅಲ್ಲದೆ, ಈಗಾಗಲೆ ಬಳಕೆಯಲ್ಲಿರುವ 24 ಆಸನಗಳ ಶೌಚಾಲಯದ ಅನೇಕ ಕೋಣೆಗಳ ಬಾಗಿಲುಗಳು ಕಿತ್ತಿಹೋಗಿವೆ. ನೀರಿನಸರಬರಾಜು ನಿರ್ವಹಣೆಯಿಲ್ಲ. ಶೌಚಲಯದ ನಳಗಳಿಗೆ ಚಾವಿಯಿಲ್ಲ. ಶುಚಿತ್ವ ಗಗನ ಕುಸುಮವಾಗಿದೆ. ಶೌಚಾಲಯ ಪ್ರವೇಶಿಸದಷ್ಟು ಗಬ್ಬು ನಾರುತ್ತಿದೆ. ವೃದ್ಧರಿಗೆಂದು ಅಳವಡಿಸಿದ ಎರಡು ಕಮೋಡ್‌ ವ್ಯವಸ್ಥೆಯ ಶೌಚಾಲಯ ನೀರಿನ ಸಂಪರ್ಕವಿಲ್ಲದೆ ಹಾಳಾಗುತ್ತಿವೆ. ಇನ್ನು, ಕುಡಿಯುವ ನೀರಿನ ತೊಂದರೆಯಂತು ದೇವರೇ ಬಲ್ಲ. ಹೇಳುವುದು ಎರಡು ದಿನಕ್ಕೊಮ್ಮೆ, ವಾಸ್ತವವಾಗಿ ನೀರು ಬಿಡುವುದು ಐದಾರು ದಿನಕ್ಕೊಮ್ಮೆ. ಕೇಳಿದರೆ ದಿನಕ್ಕೊಂದು ಸಬೂಬು. ಪರಿಣಾಮ, ನೀರಿಗಾಗಿ ಪರಿತಪಿಸುವಂತಾಗಿದೆ.

ನೀರು ಬಿಡುವ ಸಿಬ್ಬಂದಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಪಪಂ ಅಧಿ ಕಾರಿಗಳು ತಿರುಗಿ ನೋಡುತ್ತಿಲ್ಲ. ಸ್ಥಳಿಯ ಸದಸ್ಯರು ಕೂಡ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ರಸ್ತೆಯಲ್ಲಿ ಹದಿನೈದು ದಿನಗಳವರೆಗೆ ಕಸ ಬಿದ್ದರೂ ಕೇಳುವರಿಲ್ಲ ಎಂದು ಮಹಿಳೆಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೆ ನೀರು, ಶೌಚಾಲಯ, ಶುಚಿತ್ವದ ಕುರಿತು ಪಪಂ ಅಧಿಕಾರಿಗಳು ಗಮನಹರಿಸಬೇಕು. ಇಲ್ಲದಿದ್ದರೆ ಪಪಂ ಎದುರು ಧರಣಿ ಕುಳಿತು ಪ್ರತಿಭಟಿಸುವುದಾಗಿ ಎಚ್ಚರಿಸಿದರು.

ಶಾವಂತ್ರೆವ್ವ ಕುರಿ, ದುಂಡವ್ವ ಹೆಳವರ, ಶೋಭಾ ಬೀಳಗಿ, ಈರವ್ವ ಮಾತಿವಡ್ಡರ, ಚೌಡವ್ವ ಬಂಡಿವಡ್ಡರ, ರೇಣವ್ವ ಹೆಳವರ, ಸಾಬವ್ವ ಮಮದಾಪುರ ಇತರರು ಇದ್ದರು.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿರುವೆ.ಶೌಚಾಲಯ ಅವ್ಯವಸ್ಥೆ ಸರಿಪಡಿಸಲು ಹಾಗೂ ನೀರಿನ ಸಂಪರ್ಕ ಕೊಡಲು ಕ್ರಮ ಕೈಗೊಳ್ಳಲಾಗಿದೆ. ಕುಡಿವ ನೀರಿನ ವ್ಯವಸ್ಥೆ ಸರಿಪಡಿಸುವ ನಿಟ್ಟಿನಲ್ಲಿಯೂ ಶೀಘ್ರ ಕ್ರಮ ಕೈಗೊಳ್ಳುವೆ.ಐ.ಕೆ.ಗುಡದಾರಿ, ಮುಖ್ಯಾಧಿಕಾರಿಗಳು, ಬೀಳಗಿ

ಟಾಪ್ ನ್ಯೂಸ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.