ದಾಖಲೆ ಸಹಿತ ಪ್ರತಿಪಾದನೆ


Team Udayavani, Jan 12, 2020, 3:09 AM IST

dakale

ಬೆಂಗಳೂರು: “ಬಸವಣ್ಣ ಶೈವನಾಗಿದ್ದವನು ವೀರಶೈವನಾದ. ಆದರೆ, ಅವನ ಮಲ ಸೋದರ ದೇವರಾಜನೂ ವೀರಶೈವನಾಗಿರಲಾರ. ಅವನು ಬ್ರಾಹ್ಮಣನಾಗಿದ್ದೂ ವೀರಶೈವಾ ಭಿಮಾನಿ ಆಗಿರಬೇಕು. ಆ ದೇವರಾಜನ ವಂಶಸ್ಥರು ಈಗಲೂ ಇದ್ದಾರೆ. ಖುದ್ದು ನಾನು ಅಲ್ಲಿಗೆ ಹೋಗಿ, ಮಾತನಾಡಿ ಖಚಿತಪಡಿಸಿಕೊಂಡಿದ್ದೇನೆ…’

-ಹೀಗಂತ ಹಿರಿಯ ಸಂಶೋಧಕ ಡಾ.ಚಿದಾನಂದಮೂರ್ತಿ ತಮ್ಮ “ಹೊಸ ಬೆಳಕಿನಲ್ಲಿ ಬಸವಣ್ಣ’ ಕೃತಿಯಲ್ಲಿ ಬರೆದುಕೊಂಡಿದ್ದಾರೆ. ಇದು ಅವರ ಕ್ಷೇತ್ರಾಧ್ಯಯನ ಅದರಲ್ಲೂ ವೀರಶೈವ-ಲಿಂಗಾಯತ ವಿಚಾರಕ್ಕೆ ಸಂಬಂಧಿ ಸಿದ ಸಂಶೋಧನೆ ಎಷ್ಟರಮಟ್ಟಿಗೆ ಆಳವಾಗಿತ್ತು ಎಂಬುದಕ್ಕೆ ಇದೊಂದು ಸಣ್ಣ ಉದಾಹರಣೆ.

ಗುರುಪೀಠಗಳು ಇರುವುದು ಧಾರ್ಮಿಕ ವ್ಯವಸ್ಥೆಗೆ ಹಾಗೂ ವಿರಕ್ತ ಪೀಠಗಳು ಇರುವುದು ಜ್ಞಾನ ವ್ಯವಸ್ಥೆಗೆ. ರೂಪ ಬೇರೆ ಯಾಗಿದ್ದರೂ ಸ್ವರೂಪ ಒಂದೇ. ವಿರಕ್ತಪೀಠಗಳು ವಚನವಾಯಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಟ್ಟರೂ ಸಿದ್ಧಾಂತ ಶಿಖಾಮಣಿಗೆ ಸಂಸ್ಕೃತಕ್ಕೆ ಕಡಿಮೆ ಸ್ಥಾನ ನೀಡಿಲ್ಲ. ಹಾಗಾಗಿ, ವೀರಶೈವ-ಲಿಂಗಾಯತ ಎರಡೂ ಸಮಾನ ಎಂಬುದು ಚಿದಾನಂದ ಮೂರ್ತಿ ಅವರ ಗಟ್ಟಿ ನಿಲುವು ಆಗಿತ್ತು.

ವೀರಶೈವ-ಲಿಂಗಾಯತ ಕುರಿತ ಸಂಶೋ ಧನಾ ಫ‌ಲಿತಗಳನ್ನು ನೀಡುವುದರಲ್ಲಿ ಚಿದಾ ನಂದಮೂರ್ತಿ (ಚಿಮೂ) ಅವರ ನಿಲುವು ಒಪ್ಪಿತ ಆಗಿರಬಹುದು ಅಥವಾ ಆಗಿಲ್ಲ ದಿರಬ ಹುದು. ಆದರೆ, ಅವರು ಒದಗಿಸುವ ಸಾಕ್ಷ್ಯಾ ಧಾರ ,ವ್ಯಾಪಕ ಕ್ಷೇತ್ರಾಧ್ಯಯ ನವನ್ನು ಪ್ರತಿಯೊ ಬ್ಬರೂ ಗೌರವಿಸುವಂತ ಹದ್ದಾಗಿತ್ತು. ಈ ನಿಟ್ಟಿನಲ್ಲಿ ಹೇಳುವುದಾದರೆ ಫ‌.ಗು.ಹಳಕಟ್ಟಿ, ಭೂಸನೂರ ಮಠ ಅವರ ಪರಂಪರೆ ಮುಂದುವರಿಸಿದವರು ಚಿಮೂ ಎಂದು ವಿಶ್ಲೇಷಿಸಲಾಗುತ್ತದೆ.

ಹಿಂದಿನ ಸರ್ಕಾರ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮುಂದಾದಾಗಲೂ ತಮ್ಮ ಇಳಿ ವಯಸ್ಸಿನಲ್ಲಿಯೂ ಸರ್ಕಾರದ ನಿರ್ಧಾರವನ್ನು ಖಂಡಿಸಿದ್ದರು. ವೀರಶೈವ-ಲಿಂಗಾಯತ ಎರಡೂ ಒಂದೇ. ಅವುಗಳನ್ನು ಪ್ರತ್ಯೇಕ ಗೊಳಿಸು ವುದು ಮೂರ್ಖತನದ ನಿರ್ಧಾರ ಎಂದು ಟೀಕಿಸಿದ್ದರು. ಅವರ ಇಂತಹ ಖಂಡ ತುಂಡಾದ ನಿಲುವುಗಳಿಂದ ತಮ್ಮ ಕೆಲವು ಶಿಷ್ಯವೃಂದ ಅಂತರ ಕಾಯ್ದುಕೊಂಡಿದ್ದೂ ಉಂಟು. ಹಾಗಂತ, ಚಿಮೂ ಅವರ ನಿಲುವು ಮಾತ್ರ ಅಚಲವಾಗಿತ್ತು.

“ಚಿದಾನಂದಮೂರ್ತಿ (ಚಿಮೂ) ನಾಡಿನ ಸಂಶೋಧಕರ ಸಾಲಿನಲ್ಲಿ ಅಗ್ರಮಾನ್ಯರ ಸಾಲಿ ನಲ್ಲಿ ನಿಲ್ಲುವ ಸಂಶೋಧಕ. ನಾನು ಅವರ ಪ್ರಿಯ ಶಿಷ್ಯ ಕೂಡ. ಹಾಗೂ ಅವರು ನಡೆಸಿದ ಸಂಶೋಧನೆ ಬಗೆಗೆ ನನಗೆ ದೊಡ್ಡ ಗೌರವ ಇದೆ,’ ಎಂದು ಚಿಮೂ ಅವರ ಶಿಷ್ಯ, ಚಿಂತಕ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ತಿಳಿಸುತ್ತಾರೆ.

ಒಂದೇ ಅಲ್ಲ; ಬೇರೆಯಾಗದಂತೆ ಬೆರೆತಿವೆ!: “ವೀರಶೈವ ಮತ್ತು ಲಿಂಗಾಯತ ಇವೆರಡೂ ಬೇರೆ ಮಾಡಲಾಗದಷ್ಟು ಒಂದರಲ್ಲಿ ಮತ್ತೂಂದು ಬೆರೆತುಹೋಗಿದೆ ಎನ್ನುವುದು ವಾಸ್ತವವಾಗಿರಬಹುದು. ಆದರೆ, ಅವರೆಡೂ ಒಂದೇ ಎಂಬ ಚಿದಾನಂದಮೂರ್ತಿ ಅವರ ವಾದ ವನ್ನು ನಾನು ಒಪ್ಪುವುದಿಲ್ಲ. ಏಕೆಂದರೆ, ಲಿಂಗಾ ಯತ ನಿಜವಾಗಿಯೂ ವೀರಶೈವದ ಒಳಗೂ ಇದ್ದ ವೈದಿಕತೆಯಿಂದ ಬಿಡಿಸಲು ಪ್ರಯತ್ನಿಸಿದ ಒಂದು ಪ್ರಯತ್ನ.

ಅದು ಜನಪರ ಮತ್ತು ಶ್ರಮ ಸಂಸ್ಕೃತಿ ಎತ್ತಿಹಿಡಿಯುವ ಚಳವಳಿ. ವೀರಶೈವ ಎಲ್ಲಾ ವೈದಿಕ ಆಚರಣೆ ಒಳಗೊಂಡಿದ್ದಾಗಿತ್ತು. ಇದನ್ನು ಸ್ವತಃ ಚಿಮೂ 80ರ ದಶಕದ ಕಾಲಘಟ್ಟದಲ್ಲಿ ಲಿಂಗಾ ಯತದಲ್ಲಿನ ಪ್ರಗತಿಪರ ಮತ್ತು ಜನಪರ ನಿಲುವುಗಳನ್ನು ಒಪ್ಪಿಕೊಂಡವರಾಗಿದ್ದರು. ಆದರೆ, ನಂತರದಲ್ಲಿ ಮೂಲಭೂತವಾದದತ್ತ ಚಲಿಸಿದರು ಎಂದು ನನಗೆ ಅನಿಸುತ್ತದೆ ಎಂದು ಮತ್ತೋರ್ವ ಶಿಷ್ಯೆ ಪ್ರೊ.ಎಂ.ಎಸ್‌.ಆಶಾದೇವಿ ಸ್ಪಷ್ಟಪಡಿಸುತ್ತಾರೆ.

ಧರ್ಮಬೇಧ ಬೇಡ: ವೀರಶೈವ-ಲಿಂಗಾಯತ ವಿಚಾರ ಮಾತ್ರವಲ್ಲ; ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಇವರಿಬ್ಬರೂ ಒಂದೇ ಎಂದು ಒಂದು ವರ್ಗ ವಾದಿಸುತ್ತಿರುವಾಗ, ಆ ಬಗ್ಗೆ ದಾಖಲೆಗಳ ಸಹಿತ ಅವರಿಬ್ಬರೂ ಬೇರೆ ಬೇರೆ ಹಾಗೂ ವಚನ ಸಾಹಿತ್ಯದ ಆರಂಭಕಾರ ಜೇಡರ ದಾಸಿಮಯ್ಯ ಎಂದೂ ಚಿಮೂ ಪ್ರತಿಪಾದಿಸಿದ್ದರು.

* ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.