ಆರು ಮಂದಿ ಸರ್ಕಾರಿ ಅಧಿಕಾರಿಗಳ ಮೇಲೆ ಎಸಿಬಿ ದಾಳಿ
Team Udayavani, Apr 13, 2018, 12:08 PM IST
ಬೆಂಗಳೂರು: ಆದಾಯ ಮೀರಿ ಆಸ್ತಿಗಳಿಸಿದ ಆರೋಪದ ಮೇಲೆ ಆರು ಸರ್ಕಾರಿ ಅಧಿಕಾರಿಗಳ ನಿವಾಸ ಮತ್ತು ಕಚೇರಿಗಳ ಮೇಲೆ ಎರಡು ದಿನಗಳ ಹಿಂದೆ ದಾಳಿ ನಡೆಸಿದ್ದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಇದೀಗ ಆ ಅಧಿಕಾರಿಗಳ ದಾಖಲೆಗಳ ಪರಿಶೀಲನೆ ವೇಳೆ ಪತ್ತೆಯಾದ ಸ್ಥಿರ ಮತ್ತು ಚರ ಆಸ್ತಿಗಳ ವಿವರ ಬಿಡುಗಡೆ ಮಾಡಿದೆ.
ಎಸಿಬಿ ದಾಳಿಗೊಳಗಾದ ಹುಬ್ಬಳ್ಳಿಯ ಕೆಪಿಟಿಸಿಎಲ್ ಕಚೇರಿಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮಲ್ಲಿಕಾರ್ಜುನ್ ಎನ್.ಸವಣೂರ ಬಳಿ ಹುಬ್ಬಳ್ಳಿಯ ಶಿರೂರು ಪಾರ್ಕ್ನಲ್ಲಿ ಒಂದು ವಾಸದ ಮನೆ, 4 ಖಾಲಿ ಫ್ಲಾಟ್ಗಳು, ಶಿರಹಟ್ಟಿಯ ನವೆಬಾವನೂರು ಗ್ರಾಮದಲ್ಲಿ 8 ಎಕರೆ ಕೃಷಿ ಜಮೀನು, 300 ಗ್ರಾಂ ಚಿನ್ನ, 432 ಗ್ರಾಂ ಬೆಳ್ಳಿ, 1 ಬೈಕ್ ಮತ್ತು 6 ಮೊಬೈಲ್ಗಳು ಇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅದೇರೀತಿ ಧಾರವಾಢ ಅರಣ್ಯ ಇಲಾಖೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಾರ್ಶ್ವನಾಥ್ ವರೂರ ಅವರಲ್ಲಿ ದೊಡ್ಡನಾಯಕನ ಕೊಪ್ಪ ವಾಸದ 1 ಮನೆ, ಹು-ಧಾ ನಗರದಲ್ಲಿ 5 ಖಾಲಿ ಫ್ಲಾಟ್ಗಳು, ಮಾರಕಟ್ಟಿ ಗ್ರಾಮದಲ್ಲಿ 1.20 ಎಕರೆ ಮತ್ತು ಛಟ್ಟಿ ಗ್ರಾಮದಲ್ಲಿ 1.05 ಎಕರೆ ಕೃಷಿ ಜಮೀನು, 377 ಗ್ರಾಂ ಚಿನ್ನ, 2 ಕೆ.ಜಿ. 290 ಗ್ರಾಂ ಬೆಳ್ಳಿ, 1 ಮಾರುತಿ ಆಲ್ಟೋ ಕಾರು, 1 ಬೈಕ್, 66 ಸಾವಿರ ನಗದು ಹಾಗೂ ವಿವಿಧ ಬ್ಯಾಂಕ್ ಖಾತೆಗಳಲ್ಲಿ 13.50 ಲಕ್ಷ ನಗದು ಪತ್ತೆಯಾಗಿದೆ.
ಕುಂದಾಪುರ ತಾಲೂಕು ಪಂಚಾಯಿತಿ ಜೂನಿಯರ್ ಎಂಜಿನಿಯರ್ ರವಿ ಶಂಕರ್ ಬಳಿ ಕುಂದಾಪುರದ 3 ಮನೆಗಳು, 4 ನಿವೇಶನಗಳು, 1.113 ಕೆ.ಜಿ. ಚಿನ್ನ, 1.074 ಕೆ.ಜಿ. ಬೆಳ್ಳಿ, 1 ಮಾರುತಿ ಸ್ವಿಫ್ಟ್ ಕಾರು, 1 ಬೈಕ್, 18.79 ಲಕ್ಷ ನಗದು ಹಾಗೂ 2 ಐಪೋನ್, 2 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ವಸ್ತುಗಳು ಇವೆ.
ಬೆಂಗಳೂರಿನ ತಲಘಟ್ಟಪುರದ ಬಿಬಿಎಂಪಿ ಕಂದಾಯ ನಿರೀಕ್ಷಕ ಜಿ.ಎಂ.ಶಿವಕುಮಾರ್ ಅವರಿಗೆ ವಾಜರಹಳ್ಳಿಯಲ್ಲಿ 2 ವಸತಿ ಸಂಕೀರ್ಣ, 4 ನಿವೇಶನಗಳು, 880 ಗ್ರಾಂ ಚಿನ್ನ, 4.148 ಕೆ.ಜಿ. ಬೆಳ್ಳಿ, 1 ಟೋಯೋಟಾ ಕ್ರಿಸ್ಟಾ ಕಾರು, 2 ಮಾರುತಿ ಆಲ್ಟೋ ಕಾರು, 1 ಬೈಕ್, 4.23 ಲಕ್ಷ ನಗದು, 2 ಲಕ್ಷ ರೂ.ನ ಎಲ್ಐಸಿ ಪಾಲಿಸಿಗಳು, 16.69 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.
ಮೈಸೂರು ಕಾರ್ಪೊರೇಷನ್ ವಾಟರ್ ಇನ್ಸ್ಪೆಕ್ಟರ್ ಟಿ.ಎಸ್.ಕೃಷ್ಣೇಗೌಡ ಅವರಿಗೆ ಮೈಸೂರಿನಲ್ಲಿ 2 ವಾಸದ ಮನೆ, 1 ನಿವೇಶನ, ತಿಪ್ಪೂರು ಗ್ರಾಮದಲ್ಲಿ 20 ಗುಂಟೆ ಜಮೀನು, 532 ಗ್ರಾಂ ಚಿನ್ನ, 750 ಗ್ರಾಂ ಬೆಳ್ಳಿ, 1 ಸ್ಯಾಂಟ್ರೋ ಕಾರು ಹಾಗೂ 3 ಬೈಕ್ಗಳು ಮತ್ತು 1 ಲಕ್ಷ ರೂ. ನಗದು ಸಿಕ್ಕಿದೆ.
ದಾವಣಗೆರೆಯ ಗುರುಸಿದ್ದಾಪುರ ಗ್ರಾಮದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗರಾಜ್ ಬಳಿ ದಾವಣಗೆರೆಯ ಎಸ್ಎಸ್ ಲೇಔಟ್ನಲ್ಲಿ 1 ವಾಸದ ಮನೆ, ವೆಂಕಾಟಪುರದ ವಿವಿಧ ಸರ್ವೆ ನಂಬರ್ಗಳಲ್ಲಿ 33.21 ಎಕರೆ ಕೃಷಿ ಜಮೀನು, 586 ಗ್ರಾಂ ಚಿನ್ನ, 250 ಗ್ರಾಂ ಬೆಳ್ಳಿ, 2 ಕಾರು, 4 ಬೈಕ್ಗಳು, 2 ಮೊಬೈಲ್ ಮತ್ತು 3 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿತ ಆರು ಮಂದಿ ಸರ್ಕಾರಿ ಅಧಿಕಾರಿಗಳ ವಿರುದ್ಧ ತನಿಖೆ ಮುಂದುವರಿದಿದ್ದು, ಇವರು ಹೊಂದಿರುವ ಆಸ್ತಿ-ಪಾಸ್ತಿಗಳ ಮೂಲದ ಬಗ್ಗೆ ತನಿಖೆ ಹಾಗೂ ದಾಖಲೆಗಳ ಪರಿಶೀಲನಾ ಕಾರ್ಯ ಮುಂದುವರಿಸಲಾಗಿದೆ ಎಂದು ಎಸಿಬಿ ಅಧಿಕಾರಿಗಳು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress ವರಿಷ್ಠರ ಸೂಚನೆಯಂತೆ ವರ್ತಿಸಿ: ಎಂಪಿ ಅಧೀರ್ಗೆ ಖರ್ಗೆ ತಾಕೀತು
Patanjali ಸೋನ್ ಪಾಪಡಿ ಪ್ರಕರಣದಲ್ಲಿ ಮೂವರಿಗೆ ಜೈಲು
Lok Sabha Elections ಹಂತ-5: ಇಂದು ಮತ; ರಾಹುಲ್, ರಾಜನಾಥ್,ಸ್ಮೃತಿ ಭವಿಷ್ಯ ನಿರ್ಧಾರ
National Conference ರೋಡ್ ಶೋ ವೇಳೆ ಮೂವರಿಗೆ ಚಾಕು ಇರಿತ
ಸಾವಿರ ವರ್ಷಗಳ ಭಾರತಕ್ಕಾಗಿ ಯೋಜನೆ; ಈಗಿನ ಯೋಜನೆಗಳಿಂದ ಭಾರತದ ಭವಿಷ್ಯ ಉಜ್ವಲ