Bangalore: ಆಸಿಡ್ ದಾಳಿ ಬೆದರಿಕೆ; ವ್ಯಕ್ತಿ ವಿರುದ್ಧ ಮಹಿಳೆ ದೂರು
Team Udayavani, Feb 24, 2024, 11:37 AM IST
ಬೆಂಗಳೂರು: ಆಸಿಡ್ ದಾಳಿ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದ ಆರೋಪದಡಿ ವ್ಯಕ್ತಿಯೊ ಬ್ಬರ ಮೇಲೆ ಮಹಿಳೆ ದೂರು ನೀಡಿದ್ದರೆ, ನಿರೀ ಕ್ಷಣಾ ಜಾಮೀನು ಪಡೆದು ಆಕೆಯನ್ನು ತನ್ನ ಮಾಜಿ ಪ್ರೇಯಸಿ ಎಂದಿರುವ ವ್ಯಕ್ತಿ ನೀಡಿದ ದೂರಿನ ಮೇರೆಗೆ ಮಹಿಳೆಯ ಪತಿಯನ್ನು ಪೊಲೀಸರು ಬಂಧಿಸಿರುವ ವಿಚಿತ್ರ ಪ್ರಸಂಗ ನಡೆದಿದೆ.
ತನ್ನೊಂದಿಗೆ ಬಾರದಿದ್ದರೆ ಆ್ಯಸಿಡ್ ದಾಳಿ ಮಾಡುವುದಾಗಿ ಕುಮಾರಸ್ವಾಮಿ (24) ಎಂಬಾತ ಪೀಡಿಸುತ್ತಿರುವುದಾಗಿ 22 ವರ್ಷದ ಮಹಿಳೆಯು ಚಂದ್ರಾಲೇಔಟ್ ಠಾಣೆಗೆ ದೂರು ನೀಡಿದ್ದರು. ತನಗೆ ಪರಿಚಯವಿದ್ದ ಕುಮಾರಸ್ವಾಮಿ ತನ್ನನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ. ಆದರೆ, ನಾನು ಸುಮಂತ್ ಎಂಬಾತನನ್ನು 2-3 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದೆ. ನಾನು ಕೆಲಸಕ್ಕೆ ಹೋಗುವಾಗಲ್ಲೆಲ್ಲಾ ಅಡ್ಡಗಟ್ಟುತ್ತಿದ್ದ ಕುಮಾರಸ್ವಾಮಿ, ತನ್ನನ್ನು ಪ್ರೀತಿಸದಿದ್ದರೆ ಆ್ಯಸಿಡ್ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಫೆ. 3ರಂದು ಚಂದ್ರಲೇಔಟ್ನಲ್ಲಿರುವ ನನ್ನ ಮನೆಗೂ ಬಂದು “ನಿನಗೆ ನಾನೆ ಗತೀ, ನನ್ನ ಜತೆ ಬಾ’ ಎಂದು ನನ್ನ ಮೈ ಕೈ ಮುಟ್ಟಿ ಎಳೆದಾಡಿದ್ದ. ಅದೇ ಸಂದರ್ಭದಲ್ಲಿ ನಮ್ಮ ತಾಯಿ ಬಂದಿದ್ದು,’ಇವತ್ತು ನೀನು ಮಿಸ್ ಆಗಿದ್ದೀಯಾ, ನಿನ್ನ ಮೇಲೆ ಆ್ಯಸಿಡ್ ಹಾಕುತ್ತೇನೆ ಎಂದು ಬೆದರಿಸಿದ್ದಾನೆ. ದೂರು ದಾಖಲಾಗುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದು, ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದಿದ್ದಾನೆ ಎಂದು ಹೇಳಲಾಗಿದೆ.
ದೂರುದಾರ ಮಹಿಳೆ ಪತಿ ಬಂಧನ: ಮತ್ತೂಂ ದೆಡೆ ಆರೋಪಿ ಕುಮಾರಸ್ವಾಮಿ, ದೂರುದಾರ ಮಹಿಳೆಯ ಪತಿ ಸುಮಂತ್ ವಿರುದ್ಧ ಹಲ್ಲೆ ಆರೋಪದಡಿ ಜ.29ರಂದು ಗಿರಿನಗರ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸುಮಂತ್ನನ್ನು ಬಂಧಿಸಲಾಗಿದೆ. ದೂರುದಾರ ಕುಮಾರ ಸ್ವಾಮಿ, ಟಾಟಾ ಏಸ್ ವಾಹನ ಓಡಿಸಿಕೊಂಡು ಜೀವನ ನಿರ್ವಹಿಸುತ್ತಿದ್ದ. ನನಗೆ 2020ರಲ್ಲಿ ಹೊಸಕೆರೆಹಳ್ಳಿಯಲ್ಲಿರುವ ಆಕೆಯ ಅಕ್ಕನ ಮನೆಗೆ ಬರುತ್ತಿದ್ದಾಗ ದೂರುದಾರಳ ಪರಿಚಯವಾಗಿ, ಬಳಿಕ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದೆವು. ಆದರೆ, ನಂತರದ ದಿನಗಳಲ್ಲಿ ಮನಸ್ತಾಪ ಉಂಟಾಗಿದ್ದ ರಿಂದ ತಾನು ಅಂತರ ಕಾಯ್ದುಕೊಂಡಿ¨ªೆ. ಜ.29 ರಂದು ಗಿರಿನಗರ ಬೇಕರಿಯೊಂದರ ಬಳಿ ನಿಂತಿ ದ್ದಾಗ ಸ್ಥಳಕ್ಕೆ ಬಂದ ಸುಮಂತ್ ಹಾಗೂ ಇತರೆ ಆರೋಪಿಗಳು ಹಲ್ಲೆ ನಡೆಸಿದ್ದರೆಂದು ದೂರಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ
Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!