ಆಯೋಗದಿಂದ ರಾಯಭಾರಿ ಹುಡುಕಾಟ
Team Udayavani, Feb 15, 2018, 6:45 AM IST
ಬೆಂಗಳೂರು: ಚುನಾವಣಾ ಸಿದ್ದತೆಗಳಿಗೆ ದಿನಕಳೆದಂತೆ ವೇಗ ನೀಡುತ್ತಿರುವ ಚುನಾವಣಾ ಆಯೋಗ, ಇದೀಗ ಮತದಾರರಲ್ಲಿ ಜಾಗೃತಿ ಮೂಡಿಸಲು “ಚುನಾವಣಾ ರಾಯಭಾರಿ’ಯ ಹುಡುಕಾಟದಲ್ಲಿದ್ದು, ಈ ವಾರದೊಳಗೆ ರಾಯಭಾರಿ ಹೆಸರು ಅಂತಿಮಗೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.
ಚಿತ್ರರಂಗ, ಕ್ರೀಡೆ ಹಾಗೂ ಸೇನೆ ಸೇರಿಕೊಂಡಂತೆ ಈ ಬಾರಿಯ ಚುಣಾವಣಾ ಘೋಷ ವಾಕ್ಯವಾಗಿರುವ “ಆ್ಯಕ್ಸಿಸೆಬಲ್ ಎಲೆಕ್ಷನ್’ಗೆ ಪೂರಕವಾಗಿ ವಿಕಲಚೇತನ ಸಾಧಕರನ್ನು ಚುನಾವಣಾ ರಾಯಭಾರಿಯನ್ನಾಗಿ ಮಾಡುವ ಆಲೋಚನೆ ಚುನಾವಣಾ ಆಯೋಗದ ಮುಂದಿದೆ.
ಈ ಸಂಬಂಧ ಚುನಾವಣಾ ಆಯೋಗದ ಎರಡು ತಂಡಗಳು ಕಾರ್ಯಪ್ರವೃತ್ತವಾಗಿದ್ದು, ಚಿತ್ರರಂಗ, ಕ್ರೀಡೆ, ಸೇನೆ ಹಾಗೂ ವಿಕಲಚೇತನ ಸಾಧಕರನ್ನು ಗುರುತಿಸುವ ಕೆಲಸ ಈ ತಂಡಗಳು ಮಾಡುತ್ತಿವೆ. ಕಳೆದ ವಿಧಾನಸಭೆ ಚುನಾವಣೆಗೆ ನಟ ಪುನಿತ್ ರಾಜ್ಕುಮಾರ್ ರಾಯಭಾರಿಯಾಗಿದ್ದರು. ಈ ಬಾರಿ ಚಿತ್ರರಂಗದಿಂದ ರಕ್ಷಿತ್ ಶೆಟ್ಟಿ, ಯಶ್ ಮತ್ತಿತರರ ಹೆಸರುಗಳು, ಅದೇ ರೀತಿ ಕ್ರೀಡಾ ಕ್ಷೇತ್ರದಿಂದ ಕ್ರಿಕೆಟ್ ಆಟಗಾರರಾದ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಹಾಗೂ ಜಾವಗಲ್ ಶ್ರೀನಾಥ್ ಸೇರಿದಂತೆ ಇತ್ತೀಚಿಗೆ ಕ್ರಿಕೆಟ್ ಹಾಗು ಇತರ ಕ್ರೀಡೆಗಳಲ್ಲಿ ಶ್ರೇಷ್ಠ ಸಾಧನೆ ಮಾಡಿರುವ ಯುವ ಕ್ರೀಡಾಪಟುಗಳ ಹೆಸರುಗಳನ್ನು ಪರಿಗಣಿಸಬಹುದಾ..? ಎಂಬ ಪ್ರಾಥಮಿಕ ಹಂತದ ಆಲೋಚನೆಗಳು ಚುನಾವಣಾ ಆಯೋಗದಲ್ಲಿ ನಡೆದಿವೆ. ಆದರೆ, ಈವರೆಗೆ ಯಾವ ಹೆಸರೂ ಅಂತಿಮಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.
ಅದೇ ರೀತಿ ಈ ಬಾರಿ ಘೋಷವಾಕ್ಯ ಆಕ್ಸಿಸೆಬಲ್ ಎಲೆಕ್ಷನ್ (ಸುಲಭಸಾಧ್ಯ ಚುನಾವಣೆ) ಆಗಿರುವುದರಿಂದ ವಿಕಲಚೇತನ ಸಾಧಕರನ್ನೂ ರಾಯಭಾರಿಯನ್ನಾಗಿ ಮಾಡಬಹುದಾ ಎಂಬ ಚರ್ಚೆಗಳು ನಡೆದಿದೆ. ಇದಕ್ಕಾಗಿ ಕ್ರೀಡಾ ಮತ್ತು ಯುವಜನ ಸೇವಾ ಇಲಾಖೆ, ವಿಕಲಚೇತನರು ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಿಂದ ಮಾಹಿತಿ ಕೇಳಲಾಗಿದೆ.
ಸೇನೆಯಲ್ಲಿ ಕರ್ತವ್ಯ ನಿರತರಿಗೆ ಮತದಾನದ ಹಕ್ಕು ಚಲಾಯಿಸಲು “ಎಲೆಕ್ಟ್ರಾನಿಕಲಿ ಟ್ರಾನ್ಸ್ಮಿಟೆಡ್ ಪೋಸ್ಟಲ್ ಬ್ಯಾಲೆಟ್ ಸಿಸ್ಟಂ’ (ಇಟಿಪಿಬಿಎಸ್) ಜಾರಿಗೆ ತರುತ್ತಿರುವುದರಿಂದ ಸೇನೆಯ ನಿವೃತ್ತರೊಬ್ಬರನ್ನೂ ರಾಯಭಾರಿಯನ್ನಾಗಿ ಪರಿಗಣಿಸಬಹುದೇ, ವಿಶೇಷವಾಗಿ ಮಹಿಳಾ ಮತದಾರರಲ್ಲಿ ಜಾಗೃತಿ ಮೂಡಿಸಲು ಸಾಧಕಿ ಮಹಿಳೆಯೊಬ್ಬರನ್ನು ರಾಯಭಾರಿಯನ್ನಾಗಿ ಮಾಡಬಹುದಾ ಎಂಬ ಆಲೋಚನೆಯಿದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
MUST WATCH
ಹೊಸ ಸೇರ್ಪಡೆ
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ