ಜಾಹೀರಾತು ಬೈಲಾ 26ರಂದು ಅನುಮೋದನೆಗೆ
Team Udayavani, Mar 23, 2019, 6:55 AM IST
ಬೆಂಗಳೂರು: ನಗರದಲ್ಲಿನ ಜಾಹೀರಾತು ಮಾಫಿಯಾಗೆ ಕಡಿವಾಣ ಹಾಕಲು ಪಾಲಿಕೆ ಜಾರಿಗೊಳಿಸಲು ಸಿದ್ಧಪಡಿಸಿರುವ ಜಾಹೀರಾತು ಬೈಲಾ-2018ಕ್ಕೆ ದೆಹಲಿ ಜಾಹೀರಾತು ಉಪವಿಧಿಗಳಲ್ಲಿನ ಅಂಶಗಳನ್ನು ಸೇರಿಸಿ, ಮಾ.26ರಂದು ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಸುವಂತೆ ಸರ್ಕಾರ ಬಿಬಿಎಂಪಿಗೆ ತಿಳಿಸಿದೆ.
ನಗರದಲ್ಲಿ ಜಾಹೀರಾತು ಪ್ರದರ್ಶನವನ್ನು ಸಂಪೂರ್ಣವಾಗಿ ನಿಷೇಧಿಸಿದ ಬಳಿಕ ಹೊಸದಾಗಿ ರೂಪಿಸಿರುವ “ಔಡ್ಡೋರ್ ಸೈಜೇಜ್ ಆಂಡ್ ಪಬ್ಲಿಕ್ ಮೆಸೆಜಿಂಗ್ ಬೈಲಾ 2018′ ಅನುಮೋದನೆಗಾಗಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಅದರಂತೆ ಬೈಲಾಗಳಿಗೆ ದೆಹಲಿಯ ಜಾಹೀರಾತು ಉಪವಿಧಿಗಳಲ್ಲಿನ ಅಂಶಗಳನ್ನು ಸೇರಿಸಿ ಮಾ.26ರಂದು ನಡೆಯುವ ಸಭೆಯ ಮುಂದೆ ಅನುಮೋದನೆಗೆ ಮಂಡಿಸುವಂತೆ ಉಪಮುಖ್ಯಮಂತ್ರಿಗಳು ಪಾಲಿಕೆಗೆ ಸೂಚಿಸಿದ್ದಾರೆ.
ಹೈಕೋರ್ಟ್ ಸೂಚನೆ ಮೇರೆಗೆ ಪಾಲಿಕೆಯಿಂದ ಜಾರಿಗೊಳಿಸುತ್ತಿರುವ ಹೊಸ ಜಾಹೀರಾತು ನೀತಿ ಹಾಗೂ ಉಪವಿಧಿಗಳ ಕುರಿತು ಮಾ.20ರಂದು ಸಭೆ ನಡೆಸಲಾಗಿದ್ದು, ಸಭೆಯಲ್ಲಿ ಹೈಕೋರ್ಟ್ ಸೂಚನೆ ಹಾಗೂ ನಗರದ ಅಂದ ಉಳಿಸುವ ಕ್ರಮಗಳನ್ನು ಬೈಲಾದಲ್ಲಿ ಸೇರಿಸುವಂತೆ ಪರಮೇಶ್ವರ್ ಸೂಚಿಸಿದ್ದಾರೆ. ಜತೆಗೆ ದೆಹಲಿಯ ಬೈಲಾಗಳನ್ನು ಅಳವಡಿಕೆ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ.
ಅದರಂತೆ ವಾಸ ಸ್ಥಳಗಳಲ್ಲಿ ವಾಣಿಜ್ಯ ಜಾಹೀರಾತುಗಳಿಗೆ ಅವಕಾಶ ನಿರ್ಬಂಧಿಸುವುದು, ಸುಪ್ರೀಂಕೋರ್ಟ್ ಆದೇಶದಂತೆ ದೆಹಲಿಯಲ್ಲಿ ಜಾರಿಗೆ ತರಲಾಗಿರುವ ಬೈಲಾದಲ್ಲಿನ ಅಂಶಗಳನ್ನು ಬಿಬಿಎಂಪಿ ಬೈಲಾದಲ್ಲೂ ಅಳವಡಿಸುವುದು, ವಾಣಿಜ್ಯ ಪ್ರದೇಶ, ಕೈಗಾರಿಕಾ ಪ್ರದೇಶ, ಬಸ್, ಮೆಟ್ರೋ, ವಿಮಾನ ನಿಲ್ದಾಣ, ಚಲನಚಿತ್ರ ಮಂದಿರ ಸೇರಿ ಇನ್ನಿತರ ಕಡೆ ಜಾಹೀರಾತು ಅಳವಡಿಕೆಗೆ ಅವಕಾಶ ನೀಡುವುದು ಸೇರಿ ಇನ್ನಿತರ ಅಂಶಗಳನ್ನು ಸೇರಿಸಿ ಬೈಲಾಗಳನ್ನು ಪರಿಷ್ಕರಿಸುವಂತೆ ಪರಮೇಶ್ವರ ಅವರು ಸೂಚಿಸಿದ್ದಾರೆ.
ನಗರದ ಸೌಂದರ್ಯ ಹೆಚ್ಚಿಸುವ ಜತೆಗೆ ಪಾಲಿಕೆಗೆ ಆದಾಯವೂ ಬರುವಂತೆ ಜಾಹೀರಾತು ಬೈಲಾಗಳನ್ನು ರೂಪಿಸಲಾಗಿದೆ. ದೆಹಲಿಯ ಬೈಲಾಗಳಲ್ಲಿನ ಕೆಲವೊಂದು ಅಂಶಗಳನ್ನು ಸೇರಿಸಿಕೊಳ್ಳುವಂತೆ ಉಪಮುಖ್ಯಮಂತ್ರಿಗಳು ತಿಳಿಸಿದ್ದು, ಬೈಲಾಗಳನ್ನು ಪರಿಷ್ಕರಿಸಲಾಗುತ್ತಿದೆ.
-ಎನ್.ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ