ಆ್ಯಪ್‌ ಆಟೋ ಸೇವೆ ಅಧಿಕೃತಕ್ಕೆ ಸಿದ್ಧತೆ


Team Udayavani, Oct 17, 2022, 11:08 AM IST

ಆ್ಯಪ್‌ ಆಟೋ ಸೇವೆ ಅಧಿಕೃತಕ್ಕೆ ಸಿದ್ಧತೆ

ಬೆಂಗಳೂರು: ನಿರೀಕ್ಷೆಯಂತೆ ಸಾರಿಗೆ ಇಲಾಖೆಯು ಆ್ಯಪ್‌ ಆಧಾರಿತ ಆಟೋಗಳ ಸೇವೆಗಳನ್ನು ಅಧಿಕೃತಗೊಳಿಸಲು ಸಿದ್ಧತೆ ನಡೆಸಿದ್ದು, ಇದಕ್ಕಾಗಿ ಕೇಂದ್ರದ “ಮೋಟಾರು ವಾಹನ ಅಗ್ರಿಗೇಟರ್‌ ಮಾರ್ಗಸೂಚಿ’ಗಳಲ್ಲಿನ ಅಂಶಗಳನ್ನು ತನ್ನ ಈಗಿರುವ ನಿಯಮದಲ್ಲಿ ಸೇರ್ಪಡೆಗೊಳಿಸಲು ಮುಂದಾಗಿದೆ.

ಮೋಟಾರು ವಾಹನ ಅಗ್ರಿಗೇಟರ್‌ ಮಾರ್ಗಸೂಚಿ-2020ರಲ್ಲಿ ದರ ನಿಯಂತ್ರಣ ಮತ್ತು ರೈಡ್‌ಗಳ ರದ್ದತಿ ಬಗ್ಗೆ ಉಲ್ಲೇಖೀಸುವ 13 ಮತ್ತು 14ನೇ ಅಂಶಗಳನ್ನು “ರಾಜ್ಯ ಬೇಡಿಕೆ ಆಧಾರಿತ ಸಾರಿಗೆ ತಂತ್ರಜ್ಞಾನ ನಿಯಮ- 2016’ರಲ್ಲಿ ಸೇರಿಸುವ ಮೂಲಕ ಆ್ಯಪ್‌ ಆಧಾರಿತ ಸೇವೆಗಳಿಗೆ ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ. ಇದಕ್ಕೆ ಇನ್ನೆರಡು ದಿನಗಳಲ್ಲಿ ಅಧಿಕೃತ ಮುದ್ರೆ ಬೀಳಲಿದ್ದು, ಬೆನ್ನಲ್ಲೇ ಆದೇಶ ಕೂಡ ಹೊರಡಿಸಲು ಸಿದ್ಧತೆ ನಡೆದಿದೆ. ಸಾಮನ್ಯವಾಗಿ ಯಾವೊಂದು ನಿಯಮಗಳ ಮಾರ್ಪಾಡು ಅಥವಾ ತಿದ್ದುಪಡಿ ಮಾಡಿದಾಗ ಸಚಿವ ಸಂಪುಟ ಮತ್ತು ಅಧಿವೇಶನದಲ್ಲಿ ಮತ್ತೆ ಅಂಗೀಕಾರಗೊಳ್ಳಬೇಕಾಗುತ್ತದೆ. ಆದರೆ, ತುರ್ತು ಅಗತ್ಯತೆ ಮೇರೆಗೆ ಕಾರ್ಯಾದೇಶ ಮಾಡಿ, ನಂತರದಲ್ಲಿ ಘಟನೋತ್ತರ ಅನುಮೋದನೆ ಪಡೆಯಲು ಅವಕಾಶ ಇದೆ. ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯು ಆಟೋ ಸೇವೆಗಳ ಮುಂದುವರಿಕೆಗೆ ಪೂರಕವಾದ ಅಂಶಗಳನ್ನು ಸಂಯೋಜಿಸಲು ಮುಂದಾಗಿದೆ. ಬೆನ್ನಲ್ಲೇ ದರ ಕೂಡ ನಿಗದಿಪಡಿಸಲಾಗುತ್ತದೆ ಎಂದು ಸಾರಿಗೆ ಇಲಾಖೆ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.

ನಗರದಲ್ಲಿ ಸುಮಾರು 1.40 ಲಕ್ಷ ಆಟೋಗಳು ಕಾರ್ಯಾಚರಣೆ ಮಾಡುತ್ತಿದ್ದು, ಈ ಪೈಕಿ ಕನಿಷ್ಠ ಶೇ. 30-40ರಷ್ಟು ಆಟೋಗಳು ಅಗ್ರಿಗೇಟರ್‌ ಅದರಲ್ಲೂ ಮುಖ್ಯವಾಗಿ ಓಲಾ ಮತ್ತು ಉಬರ್‌ ಗಳ ಜತೆ ಲಿಂಕ್‌ ಮಾಡಿಕೊಂಡಿವೆ. ಅದರಡಿ ನಿತ್ಯ ಕನಿಷ್ಠ 10ರಿಂದ ಗರಿಷ್ಠ 20 ರೈಡ್‌ಗಳನ್ನು ಪೂರೈಸುತ್ತಿವೆ. ಒಂದು ವೇಳೆ ಸೇವೆ ಸ್ಥಗಿತಗೊಳಿಸಿದರೆ, ಅವರೆಲ್ಲರಿಗೂ ಸಮಸ್ಯೆ ಆಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಪೂರಕ ಅಂಶಗಳ ಸಂಯೋಜನೆ ಮಾಡಲಾಗುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಮಾರ್ಗಸೂಚಿಯಲ್ಲೇನಿದೆ?: ಮಾರ್ಗಸೂಚಿಯ 13ರಲ್ಲಿನ 5ನೇ ಅಂಶವು ರಾಜ್ಯ ಸರ್ಕಾರವು ಆ್ಯಪ್‌ ಆಧಾರಿತ ಸೇವೆಗಳ ಕನಿಷ್ಠ ದರ 25-30 ರೂ. ನಿಗದಿಪಡಿಸಬಹುದಾಗಿದೆ. ಇದೇ ಮಾದರಿಯ ದರವನ್ನು ಇತರೆ ವಾಹನಗಳಿಗೂ ಅಗ್ರಿಗೇಟರ್‌ಗಳು ಅನುಸರಿಸಬಹುದು ಎಂದು ಹೇಳುತ್ತದೆ. ಅಷ್ಟೇ ಅಲ್ಲ, ಅಗ್ರಿಗೇಟರ್‌ ಕಂಪನಿಯು ಕನಿಷ್ಠ ದರಕ್ಕಿಂತ ಶೇ. 50ರಷ್ಟು ಕಡಿಮೆ ದರ ಅಥವಾ ಸೇವಾ ಶುಲ್ಕ (ಸರ್ಜ್‌ ಚಾರ್ಜ್‌)ದ ರೂಪದಲ್ಲಿ ಗರಿಷ್ಠ ಒಂದೂವರೆಪಟ್ಟು ಹೆಚ್ಚಿಸಲಿಕ್ಕೂ ಇದರಲ್ಲಿ ಅವಕಾಶ ಇದೆ. ಆದರೆ, ಈ ಅಂಶವನ್ನೂ ಸೇರಿಸಲಾಗುತ್ತಿದೆಯೇ ಎಂಬುದು ತಿಳಿದುಬಂದಿಲ್ಲ.

ಹಾಗೊಂದು ವೇಳೆ “ಹೌದು’ ಆದಲ್ಲಿ ಗ್ರಾಹಕರ ಮೇಲೆ ವಿಧಿಸುವ ಹೊರೆಗೆ “ಅಧಿಕೃತ’ ಮುದ್ರೆ ಬಿದ್ದಂತಾಗುತ್ತದೆ. ಇನ್ನು ಗ್ರಾಹಕರಿದ್ದ ನಿಗದಿತ ಸ್ಥಳವು 3 ಕಿ.ಮೀ. ಒಳಗಿದ್ದರೆ, ಅದು ಡೆಡ್‌ ಮೈಲೇಜ್‌ ಎಂದಾಗುತ್ತದೆ. ಅದಕ್ಕೆ ಯಾವುದೇ ಶುಲ್ಕ ವಿಧಿಸುವಂತಿಲ್ಲ. ಅದೇ ರೀತಿ, ಕೊನೆಕ್ಷಣದಲ್ಲಿ ಗ್ರಾಹಕರಾಗಲಿ ಅಥವಾ ಚಾಲಕರಾಗಲಿ ಬುಕಿಂಗ್‌ ರದ್ದುಗೊಳಿಸಿದರೆ, ಒಟ್ಟಾರೆ ಆ ರೈಡ್‌ ದರದ ಶೇ. 10ರಷ್ಟು ದಂಡ (100 ರೂ. ಮೀರದಂತೆ) ವಿಧಿಸಲು ಅವಕಾಶ ಕಲ್ಪಿಸಲಾಗಿದೆ.

“ನಮ್ಮ ಯಾತ್ರಿ’ ಸೇವೆ ಆರಂಭ: ಈ ಎಲ್ಲ ಬೆಳವಣಿಗೆಗಳ ನಡುವೆ ಆಟೋ ಸೇವೆಗಳು ಎಂದಿನಂತೆ ಮುಂದುವರಿದಿವೆ. ಅಷ್ಟೇ ಅಲ್ಲ, ಮೊದಲಿದ್ದ ದರದಲ್ಲೇ ಸೇವೆ ಒದಗಿಸಲಾಗುತ್ತಿದೆ. ಚಾಲಕರಿಗೆ ದೊರೆಯುವ ಆದಾಯದಲ್ಲೂ ಯಾವುದೇ ವ್ಯತ್ಯಾಸ ಆಗಿಲ್ಲ ಎಂದು ಆಟೋ ಚಾಲಕರು ತಿಳಿಸಿದ್ದಾರೆ.

ಮತ್ತೂಂದೆಡೆ ಇದಕ್ಕೆ ಪರ್ಯಾಯವಾಗಿ “ನಮ್ಮ ಯಾತ್ರಿ’ ಆಟೋ ಸೇವೆ ನಗರದಲ್ಲಿ ಆರಂಭಗೊಂಡಿದೆ. ನಮ್ಮ ಯಾತ್ರಿ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು, ಮೊಬೈಲ್‌ ನಂಬರ್‌ ಸೇರ್ಪಡೆಗೊಳಿಸಿದರೆ ಸಾಕು. ಇಲ್ಲಿ ಕನಿಷ್ಠ ದರ ನಿಗದಿಪಡಿಸಿದ್ದು, ಒಂದು ಮಾರ್ಗದ ರೈಡ್‌ ಬುಕಿಂಗ್‌ ಮಾಡಿದರೆ, ಹಲವು ಆಟೋ ಆಯ್ಕೆಗಳು ವಿವಿಧ ದರದ ಮಾದರಿಯಲ್ಲಿ ಮೊಬೈಲ್‌ ಸ್ಕ್ರೀನ್‌ನಲ್ಲಿ ಬರುತ್ತವೆ. ಆಯ್ಕೆ ಗ್ರಾಹಕರಿಗೆ ಬಿಟ್ಟಿದ್ದು ಎಂದು ಆಟೋರಿಕ್ಷಾ ಡ್ರೈವರ್ ಯೂನಿಯನ್‌ ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ ತಿಳಿಸುತ್ತಾರೆ.

ಇಂದು ಸಭೆ: ದರ ನಿಗದಿ ಜತೆಗೆ ಕೇಂದ್ರದ ಮಾರ್ಗಸೂಚಿಗಳಲ್ಲಿನ ಅಂಶಗಳನ್ನು ರಾಜ್ಯದ ಬೇಡಿಕೆ ಆಧಾರಿತ ಸಾರಿಗೆ ತಂತ್ರಜ್ಞಾನ ನಿಯಮದಲ್ಲಿ ಸಂಯೋಜಿಸುವ ಸಂಬಂಧ ಸಾರಿಗೆ ಇಲಾಖೆ ಸೋಮವಾರ ಸಭೆ ನಡೆಸಲಿದೆ. ಇಲಾಖೆ ಕಾರ್ಯದರ್ಶಿ ಸೇರಿದಂತೆ ಉನ್ನತ ಅಧಿಕಾರಿಗಳ ಈ ಸಭೆಯಲ್ಲಿ ಸ್ಪಷ್ಟ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.

 

-ವಿಜಯಕುಮಾರ ಚಂದರಗಿ

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.