
ಹೈಕೋರ್ಟ್ ಗೆ ಬಾಂಬ್ ಇಡುತ್ತೇವೆ: ಖಲಿಸ್ತಾನ್ ಬೆಂಬಲಿತ ವ್ಯಕ್ತಿಯಿಂದ ಬೆದರಿಕೆ ಪತ್ರ
Team Udayavani, Sep 21, 2019, 9:13 AM IST

ಬೆಂಗಳೂರು: ಹೈಕೋರ್ಟ್ ಕಟ್ಟಡ ಸೇರಿ ಬೆಂಗಳೂರಿನ ವಿವಿಧ ಕಡೆ ಬಾಂಬ್ ಇಡುವುದಾಗಿ ಬೆದರಿಕೆ ಪತ್ರವೊಂದು ಹೈಕೋರ್ಟ್ ರಿಜಿಸ್ಟ್ರಾರ್ ಗೆ ಬಂದಿರುವುದು ವರದಿಯಾಗಿದೆ.
ಬೆದರಿಕೆ ಹಾಕಿದವನನ್ನು ದೆಹಲಿ ಮೂಲದ ಹರ್ದರ್ಶನ್ ಸಿಂಗ್ ನಾಗ್ ಪಾಲ್ ಎಂದು ಗುರುತಿಸಲಾಗಿದೆ. ಸೆಪ್ಟೆಂಬರ್ 9 ರಂದು ಪತ್ರ ಬರೆದಿದ್ದು ಮಗನೊಂದಿಗೆ ಬಂದು ಸೆಪ್ಟೆಂಬರ್ 30 ರಂದು ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಬಾಂಬ್ ಹಾಕುವುದಾಗಿ ಬೆದರಿಕೆ ಒಡ್ಡಿದ್ದಾನೆ.
“ಅಂತರಾಷ್ಟ್ರೀಯ ಖಲಿಸ್ತಾನ್ ಬೆಂಬಲಿತ ತಾನು” ಎಂದು ಆತ ಪತ್ರ ಬರೆದಿದ್ದು ನನ್ನ ಮಗನೊಂದಿಗೆ ಬಂದು ಬಾಂಬ್ ದಾಳಿ ನಡೆಸುವುದಾಗಿ ಉಲ್ಲೇಖಿಸಿದ್ದಾನೆ. ದೆಹಲಿಯ ಮೋತಿ ನಗರ ವಿಳಾಸದಿಂದ ಪತ್ರ ಬಂದಿದೆ.
ನಗರದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ವಿಧಾನಸೌಧ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
