ಚಂದನ್ ಶೆಟ್ಟಿ ಬಿಗ್”ಬಾಸ್’
Team Udayavani, Jan 28, 2018, 11:54 PM IST
ಬೆಂಗಳೂರು: ಕೊನೆಗೂ ಬಿಗ್ಬಾಸ್ ಮನೆಯ ಭರ್ಜರಿ ಆಟ ಮುಗಿದಿದೆ. ಕಳೆದ 106 ದಿನಗಳ ಕಾಲವಿದ್ದ ಕುತೂಹಲಕ್ಕೀಗ ಬ್ರೇಕ್ ಬಿದ್ದಿದೆ. ಕುತೂಹಲ ಕೆರಳಿಸಿದ್ದ ಬಿಗ್ಬಾಸ್ ಮನೆ ಅಂಗಳದಿಂದ ಚಂದನ್ಶೆಟ್ಟಿ ಅವರು ಗೆಲುವಿನ ನಗೆ ಬೀರಿ ಹೊರ ಬಂದಿದ್ದಾರೆ.
ಬಿಗ್ಬಾಸ್ ಮನೆಯ ಆಟದಲ್ಲಿ ಈ ಬಾರಿ 17 ಸ್ಪರ್ಧಿಗಳು ಭಾಗವಹಿಸಿದ್ದರು. ಅಷ್ಟೂ ದಿನಗಳ ಟಾಸ್ಕ್ನಲ್ಲಿ ಎಲ್ಲಾ ಸ್ಪರ್ಧಿಗಳು ತೀವ್ರ ಪೈಪೋಟಿ ನಡೆಸಿದ್ದರು. ಆ ಎಲ್ಲಾ ಸ್ಪರ್ಧಿಗಳನ್ನು ಹಿಂದಿಕ್ಕಿದ ಚಂದನ್ಶೆಟ್ಟಿ ಅವರು ಅರ್ಧ ಕೋಟಿ ಹಾಗೂ ಟ್ರೋಪಿ ಗೆಲ್ಲುವ ಮೂಲಕ ಬಿಗ್ಬಾಸ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.
ಬಿಗ್ಬಾಸ್ ರಿಯಾಲಿಟಿ ಶೋನ ಅಂತಿಮ ಸುತ್ತಿನಲ್ಲಿ ದಿವಾಕರ್, ಚಂದನ್ಶೆಟ್ಟಿ ಹಾಗು ಜಯಕಾರ್ತಿಕ್ ನಡುವೆ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಈ ಮೂವರಲ್ಲಿ ಜಯಕಾರ್ತಿಕ್ ಮೊದಲನೆಯವರಾಗಿ ಹೊರಗೆ ಬಂದರು. ಕಡೆಗೆ ಚಂದನ್ ಮತ್ತು ದಿವಾಕರ್ ನಡುವೆ ಹಣಾಹಣಿ ಏರ್ಪಟ್ಟಿತ್ತು. ಕೊನೆಯ ದಿನಗಳಲ್ಲಿ ದಿವಾಕರ್ ಬಗ್ಗೆ ಎಲ್ಲೆಡೆ ಮೆಚ್ಚುಗೆ ಮಾತುಗಳೂ ಕೇಳಿಬಂದಿದ್ದವು. ಈಗ ಚಂದನ್ಶೆಟ್ಟಿ ಬಿಗ್ಬಾಸ್ ಎನಿಸಿಕೊಂಡಿದ್ದಾರೆ. ದಿವಾಕರ್ ರನ್ನರ್ಅಪ್ ಆಗಿದ್ದಾರೆ. ಬಿಗ್ಬಾಸ್ ಮನೆಯಲ್ಲಿ ಆಶಿತಾ, ಚಂದನ್ ಶೆಟ್ಟಿ, ಸಿಹಿಕಹಿ ಚಂದ್ರು, ದಿವಾಕರ್, ಜಗನ್, ಜಯ ಶ್ರೀನಿವಾಸನ್, ಕಾರ್ತಿಕ್ ಜಯರಾಮ್, ಕೃಷಿ ತಪಂಡ, ಮೇಘ, ನಿವೇದಿತಾ ಗೌಡ, ರಿಯಾಜ್, ಸಮೀರ್ ಆಚಾರ್ಯ, ಶ್ರುತಿ ಪ್ರಕಾಶ್, ಸುಮಾ, ತೇಜಸ್ವಿನಿ ಸ್ಪರ್ಧಿಗಳಾಗಿದ್ದರು. ಈ ಶೋನ ನಿರೂಪಣೆಯನ್ನು ಸುದೀಪ್ ನಡೆಸಿಕೊಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ
ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು
Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು
MUST WATCH
ಹೊಸ ಸೇರ್ಪಡೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ