ಕಂದನ ಉಳಿಸಿದ ಅಪ್ಪನ ಕಾಂಗರೂ ಪ್ರೀತಿ


Team Udayavani, Jan 28, 2018, 12:57 PM IST

2-ff.jpg

ಬೆಂಗಳೂರು: ಆಗಷ್ಟೇ ಹುಟ್ಟಿದ ಮಗನನ್ನು ಉಳಿಸಲು ಅಪ್ಪ ಕಾಂಗರೂವಿನ ಪ್ರೀತಿ ಕೊಟ್ಟು ಬದುಕಿಸಿದ ಕತೆ ಇದು. ಬೆಂಗಳೂರಿನಲ್ಲಿ ಗಾರೆ ಕೆಲಸ ಮಾಡಿ, ಬದುಕು ಕಟ್ಟಿಕೊಳ್ಳುತ್ತಿದ್ದ ದುರ್ಗಪ್ಪನಿಗೆ ಹುಟ್ಟಿದ ಮಗು ತೂಗುತ್ತಿದ್ದುದ್ದು 1500 ಗ್ರಾಂ! ತಾಯಿಗೆ ಹಾಲುಣಿಸುವಷ್ಟು ಶಕ್ತಿಯಿಲ್ಲವೆಂದಾಗ, ಅಪ್ಪ ಕೂಲಿ ಕೆಲಸ ತೊರೆದು ಮಗುವನ್ನು 2 ತಿಂಗಳು ಎದೆಗವುಚಿಕೊಂಡು, ಮೈ ಕಾವಿನಿಂದಲೇ ಕಂದನ ಪ್ರಾಣ ಉಳಿಸಿದರು. ಈಗ ಮಗುವಿನ ತೂಕ ಬರೋಬ್ಬರಿ ಮೂರೂವರೆ ಕಿಲೋ! ಕಿಲಕಿಲ ನಗುವ ಆ ಪುಟಾಣಿಗೆ “ಕಾರ್ತಿಕ’ ಎಂಬ ಮುದ್ದಾದ ಹೆಸರನ್ನಿಡಲಾಗಿದೆ.

ಗಾರೆ ಕೆಲಸ ಮಾಡಿ, ವಾರಕ್ಕೆ 3 ಸಾವಿರ ರೂ.ನಂತೆ ದುಡಿಯುತ್ತಿದ್ದ ದುರ್ಗಪ್ಪ, ಮಗು ಹುಟ್ಟಿದ ಸುದ್ದಿ ಕೇಳಿ ಬೆಂಗಳೂರಿನಿಂದ ತಮ್ಮ ಊರು ಗಂಗಾವತಿಗೆ ಓಡಿದರು. ಆದರೆ, ಆಗಷ್ಟೇ ಹುಟ್ಟಿದ ಮಗುವಿಗೆ ಕಾಡುತ್ತಿದ್ದದ್ದು “ಹೈಪೋಥರ್ಮಿಯಾ’! ಗರ್ಭದಲ್ಲಿ ಬೆಚ್ಚಗಿದ್ದ ಮಗುವಿನ ದೇಹ, ಅಪೌಷ್ಟಿಕವಾಗಿ ಹುಟ್ಟಿದ ಪರಿಣಾಮ, ತಣ್ಣಗಾಗುತ್ತಲೇ ಹೋಯಿತು. ಯಾವುದೇ ನವಜಾತ ಶಿಶುವಿಗೂ ಇದು ಪ್ರಾಣಾ ಪಾಯದ ಮುನ್ಸೂಚನೆ. ಸಿಸೇರಿಯನ್‌ ಆಗಿದ್ದ ಪತ್ನಿ ದುರ್ಗಮ್ಮ ಹಾಲುಣಿಸಲೂ ಅಶಕ್ತರಾಗಿದ್ದರಿಂದ, ಅವರಿಗೆ ಉಸಿರಾಟದ ತೊಂದರೆಯೂ ಇದ್ದಿದ್ದರಿಂದ, ಗಂಗಾವತಿಯ ತೇಜಸ್ವಿನಿ ಮಕ್ಕಳ ಆಸ್ಪತ್ರೆಯ ವೈದ್ಯರು ದುರ್ಗಪ್ಪ ಅವರಿಗೆ “ಕಾಂಗರೂ ಮದರ್‌ ಕೇರ್‌’ ಅಳವಡಿಸಿಕೊಳ್ಳಲು ಸೂಚಿಸಿದರು. ಅಪ್ಪ ಕಾಂಗರೂ ವಿನಂತೆ ಹಗಲೂರಾತ್ರಿ ಪ್ರೀತಿ ತೋರಿ, ಕೆಲವೊಮ್ಮೆ 12 ತಾಸು, ಇನ್ನೂ ಕೆಲವೊಮ್ಮೆ 24 ತಾಸೂ ಹೊತ್ತು ಕೊಂಡೇ, ಮಗುವನ್ನು ಉಳಿಸಿದರು.

ಏನಿದು ಕಾಂಗರೂ ಮದರ್‌ ಕೇರ್‌ (ಕೆಎಂಸಿ)?
ಕೊಪ್ಪಳ, ಗಂಗಾವತಿಯಂಥ ಪ್ರದೇಶಗಳಲ್ಲಿ ಅಪೌಷ್ಟಿಕವಾಗಿ ಹುಟ್ಟುವ ಮಕ್ಕಳ ಸಂಖ್ಯೆ ಅಧಿಕವಾಗಿದ್ದು, ಇದನ್ನು ನಿವಾರಿಸಲೆಂದೇ ಇತ್ತೀಚೆಗೆ ಅಲ್ಲಿನ ಆಸ್ಪತ್ರೆಗಳು ಕಾಂಗರೂ ಮದರ್‌ ಕೇರ್‌ನ ಮೊರೆ ಹೋಗಿವೆ. ಮಗುವನ್ನು ಇನ್‌ಕ್ಯುಬೇಟರ್‌ನಲ್ಲಿ ಇಡುವ ಬದಲು ಕಂದನನ್ನು ಎದೆಗವುಚಿ ಕೊಂಡೇ ಇರಲು ತಾಯಿಗೆ ಸೂಚಿಸುತ್ತಾರೆ. ಆದರೆ, ದುರ್ಗಪ್ಪ ಅವರ ಪ್ರಕರಣದಲ್ಲಿ ತಂದೆಯೇ ಕಾಂಗರೂ ಅಪ್ಪುಗೆಯ ಚಿಕಿತ್ಸೆಗೆ ಸಹಕರಿಸಬೇಕಾಯಿತು. 

ಮಗುವಿಗೆ ಏನು ಲಾಭ?
 ಅಪ್ಪನ ಚರ್ಮದಿಂದ- ಮಗುವಿನ ಚರ್ಮಕ್ಕೆ ಉಷ್ಣತೆ ರವಾನೆಯಾಗುವುದರಿಂದ, ಮಗು ಶರೀರ ಬೆಚ್ಚಗಾಗುತ್ತದೆ. ಪ್ರೀ ಮೆಚೂರ್‌x ಆಗಿ ಹುಟ್ಟಿದ ಮಕ್ಕಳಿಗೆ ಗರ್ಭದ ಆಸರೆ ದೊರೆತಂತಾಗಿ, ನಿರ್ಭಯ ವಾತಾವರಣ ಸೃಷ್ಟಿಯಾ ಗುತ್ತದೆ. ಸಮಯಕ್ಕೆ ಸರಿಯಾಗಿ ತಾಯಿಯ ಹಾಲನ್ನೂ ಸೇವಿಸಿ, ಶಿಶುಗಳು ಬಹುಬೇಗನೆ ತೂಕ ಹೆಚ್ಚಿಸಿಕೊಳ್ಳುತ್ತವೆ.

ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗಗಳಿದ್ದರೆ, ಕೆಎಂಸಿಯಿಂದ ನಿವಾರಣೆಯಾಗ ುತ್ತದೆ. ಮೆದುಳಿನ ಬೆಳವಣಿಗೆಯೂ ಉತ್ತಮವಾಗು ತ್ತದೆ. ವೈಜ್ಞಾನಿಕವಾಗಿ ಕಾಂಗರೂ ಕೂಡ ಇದೇ ರೀತಿ ಮರಿಗಳನ್ನು ಬೇಗನೆ ದೊಡ್ಡ ಮಾಡುವುದರಿಂದ, 1976ರಲ್ಲಿ ಮೊದಲ ಬಾರಿಗೆ ಸ್ವೀಡನ್‌ನಲ್ಲಿ ಈ ಪ್ರಕ್ರಿಯೆ ಆರಂಭಿಸಲಾಗಿತ್ತು.

ಈಗ ವಿಶ್ವ ಭೂಪಟ ದಲ್ಲಿ ಅಪೌಷ್ಠಿಕ ಪ್ರಕರಣಗಳು ಹೆಚ್ಚಾಗಿರುವ ಇಥಿಯೋಪಿಯಾವೂ ಸೇರಿ, ಕರ್ನಾಟಕದ ಕೋಲಾರ, ಕೊಪ್ಪಳದಂಥ ಜಿಲ್ಲೆಗಳಲ್ಲೂ ಇದನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮಾರ್ಗದರ್ಶನದಲ್ಲಿ ಅಳವಡಿಸಲಾಗುತ್ತಿದೆ. ಕೆಎಂಸಿ ಮಾಡುವ ವೇಳೆ ಮಗುವನ್ನು ಆಗಾಗ್ಗೆ ಕೈಯಲ್ಲಿ ಎತ್ತಿಕೊಳ್ಳುವಂತಿಲ್ಲ, ನಿರ್ದಿಷ್ಟ ತೂಕ ಹೊಂದುವ ತನಕ ಸ್ನಾನ ಮಾಡಿ ಸುವಂತಿಲ್ಲ, ಬಾಟಲಿ ಹಾಲನ್ನು ಕುಡಿಸುವಂತಿಲ್ಲ ಎಂದು ವೈದ್ಯರು ಸೂಚಿಸುತ್ತಾರೆ. ಕೊಪ್ಪಳ, ಗಂಗಾವತಿಯ ಭಾಗಗಳಲ್ಲಿ ಶಿಶು ಮರಣಗಳನ್ನು ತಪ್ಪಿಸುವಲ್ಲಿ ಕೆಎಂಸಿ ಯಶಸ್ವಿಯಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಇದನ್ನು ವಿಸ್ತರಿಸಲಾಗುತ್ತದೆ ಎನ್ನುತ್ತವೆ ವೈದ್ಯಕೀಯ ಮೂಲಗಳು.

ಮಗುವನ್ನು ಎದೆ ಮೇಲೆ ಹೊತ್ತುಕೊಳ್ಳುವುದಕ್ಕಾಗಿಯೇ ನಾನು ಎರಡು ತಿಂಗಳು ಕೂಲಿ ಕೆಲಸ ಬಿಟ್ಟೆ. ಈಗ ಮಗ ನಗುತ್ತಿ ದ್ದಾನೆ. ಅವನ ಆರೋಗ್ಯ ಚೆನ್ನಾಗಿದೆ.
 ●ದುರ್ಗಪ್ಪ, ಕೂಲಿ ಕೆಲಸಗಾರ

ಮಗು ಅಪೌಷ್ಟಿಕವಾಗಿ ಹುಟ್ಟಿದರೆ ಕಾಂಗರೂ ಮದರ್‌ ಕೇರ್‌ ಮಾಡುವುದೇ ಸೂಕ್ತ. ತಾಯಿಯ ಅಥವಾ ತಂದೆಯ ಚರ್ಮದಿಂದ ಬಿಸಿ ರವಾನೆಯಾಗಿ,ಮಗುವಿನ ತೂಕ ಹೆಚ್ಚುತ್ತವೆ.
 ●ಡಾ. ಎಸ್‌.ಜಿ. ಮಡ್ಡಿ, ತೇಜಸ್ವಿನಿ ಚಿಲ್ಡ್ರನ್‌ ಆಸ್ಪತ್ರೆ, ಗಂಗಾವತಿ

 ●ಕೀರ್ತಿ ಕೋಲ್ಗಾರ್‌
 

ಟಾಪ್ ನ್ಯೂಸ್

Sushil Modi cremated with state honours

Patna; ಸರ್ಕಾರಿ ಗೌರವದೊಂದಿಗೆ ಸುಶೀಲ್‌ ಮೋದಿ ಅಂತ್ಯ ಸಂಸ್ಕಾರ

The journalist who had reported on Covid was released after 4 years

Wuhan; ಕೋವಿಡ್‌ ಬಗ್ಗೆ ವರದಿ ಮಾಡಿದ್ದ ಪತ್ರಕರ್ತೆ 4 ವರ್ಷ ಬಳಿಕ ರಿಲೀಸ್‌

Hassan; ಪೆನ್‌ಡ್ರೈವ್‌ ಹಂಚಿದ್ದವರ ಜಾಮೀನು ಅರ್ಜಿ ವಜಾ

Hassan; ಪೆನ್‌ಡ್ರೈವ್‌ ಹಂಚಿದ್ದವರ ಜಾಮೀನು ಅರ್ಜಿ ವಜಾ

Hassan ಮಾಜಿ ಶಾಸಕ ಪ್ರೀತಂಗೌಡ ಆಪ್ತರ ಹೋಟೆಲ್‌ಗ‌ಳ ಮೇಲೆ ಎಸ್‌ಐಟಿ ದಾಳಿ

Hassan ಮಾಜಿ ಶಾಸಕ ಪ್ರೀತಂಗೌಡ ಆಪ್ತರ ಹೋಟೆಲ್‌ಗ‌ಳ ಮೇಲೆ ಎಸ್‌ಐಟಿ ದಾಳಿ

Hassan ಅತ್ಯಾಚಾರ ಪ್ರಕರಣ: ಪೊಲೀಸರ ವಶಕ್ಕೆ ದೇವರಾಜೇಗೌಡ

Hassan ಅತ್ಯಾಚಾರ ಪ್ರಕರಣ: ಪೊಲೀಸರ ವಶಕ್ಕೆ ದೇವರಾಜೇಗೌಡ

8 ಹೊಸ ಡಿಪ್ಲೋಮಾ ಕೋರ್ಸ್‌ಗೆ ಎಂಜಿನಿಯರಿಂಗ್‌ ಪ್ರವೇಶ

8 ಹೊಸ ಡಿಪ್ಲೋಮಾ ಕೋರ್ಸ್‌ಗೆ ಎಂಜಿನಿಯರಿಂಗ್‌ ಪ್ರವೇಶ

K. S. Eshwarappa ನಾನು ಸಾಯುವವರೆಗೂ ಬಿಜೆಪಿಗ; ಉಚ್ಚಾಟನೆ ಲೆಕ್ಕಕ್ಕೇ ಇಲ್ಲ

K. S. Eshwarappa ನಾನು ಸಾಯುವವರೆಗೂ ಬಿಜೆಪಿಗ; ಉಚ್ಚಾಟನೆ ಲೆಕ್ಕಕ್ಕೇ ಇಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8 ಹೊಸ ಡಿಪ್ಲೋಮಾ ಕೋರ್ಸ್‌ಗೆ ಎಂಜಿನಿಯರಿಂಗ್‌ ಪ್ರವೇಶ

8 ಹೊಸ ಡಿಪ್ಲೋಮಾ ಕೋರ್ಸ್‌ಗೆ ಎಂಜಿನಿಯರಿಂಗ್‌ ಪ್ರವೇಶ

K. S. Eshwarappa ನಾನು ಸಾಯುವವರೆಗೂ ಬಿಜೆಪಿಗ; ಉಚ್ಚಾಟನೆ ಲೆಕ್ಕಕ್ಕೇ ಇಲ್ಲ

K. S. Eshwarappa ನಾನು ಸಾಯುವವರೆಗೂ ಬಿಜೆಪಿಗ; ಉಚ್ಚಾಟನೆ ಲೆಕ್ಕಕ್ಕೇ ಇಲ್ಲ

HDK ನಾನೂ ಪೆನ್‌ಡ್ರೈವ್‌ ಬಿಡುತ್ತೇನೆ, ದೊಡ್ಡ ತಿಮಿಂಗಲ ಹಿಡಿಯುತ್ತಾರಾ?

HDK ನಾನೂ ಪೆನ್‌ಡ್ರೈವ್‌ ಬಿಡುತ್ತೇನೆ, ದೊಡ್ಡ ತಿಮಿಂಗಲ ಹಿಡಿಯುತ್ತಾರಾ?

Legislative Council Polls: 29 ಮಂದಿ ನಾಮಪತ್ರ ಸಲ್ಲಿಕೆ

Legislative Council Polls: 29 ಮಂದಿ ನಾಮಪತ್ರ ಸಲ್ಲಿಕೆ

ರಾಜ್ಯದಲ್ಲಿ ಶೈಕ್ಷಣಿಕ ದುರಾಡಳಿತ: ಬಿಜೆಪಿ ಉನ್ನತಮಟ್ಟದ ತನಿಖೆ ನಡೆಸಿ: ಅರುಣ್‌ ಶಹಾಪೂರ್‌

Arun Shahapur ರಾಜ್ಯದಲ್ಲಿ ಶೈಕ್ಷಣಿಕ ದುರಾಡಳಿತ: ಬಿಜೆಪಿ ಉನ್ನತಮಟ್ಟದ ತನಿಖೆ ನಡೆಸಿ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

Sushil Modi cremated with state honours

Patna; ಸರ್ಕಾರಿ ಗೌರವದೊಂದಿಗೆ ಸುಶೀಲ್‌ ಮೋದಿ ಅಂತ್ಯ ಸಂಸ್ಕಾರ

The journalist who had reported on Covid was released after 4 years

Wuhan; ಕೋವಿಡ್‌ ಬಗ್ಗೆ ವರದಿ ಮಾಡಿದ್ದ ಪತ್ರಕರ್ತೆ 4 ವರ್ಷ ಬಳಿಕ ರಿಲೀಸ್‌

Hassan; ಪೆನ್‌ಡ್ರೈವ್‌ ಹಂಚಿದ್ದವರ ಜಾಮೀನು ಅರ್ಜಿ ವಜಾ

Hassan; ಪೆನ್‌ಡ್ರೈವ್‌ ಹಂಚಿದ್ದವರ ಜಾಮೀನು ಅರ್ಜಿ ವಜಾ

Hassan ಮಾಜಿ ಶಾಸಕ ಪ್ರೀತಂಗೌಡ ಆಪ್ತರ ಹೋಟೆಲ್‌ಗ‌ಳ ಮೇಲೆ ಎಸ್‌ಐಟಿ ದಾಳಿ

Hassan ಮಾಜಿ ಶಾಸಕ ಪ್ರೀತಂಗೌಡ ಆಪ್ತರ ಹೋಟೆಲ್‌ಗ‌ಳ ಮೇಲೆ ಎಸ್‌ಐಟಿ ದಾಳಿ

Hassan ಅತ್ಯಾಚಾರ ಪ್ರಕರಣ: ಪೊಲೀಸರ ವಶಕ್ಕೆ ದೇವರಾಜೇಗೌಡ

Hassan ಅತ್ಯಾಚಾರ ಪ್ರಕರಣ: ಪೊಲೀಸರ ವಶಕ್ಕೆ ದೇವರಾಜೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.