ಕೊರೊನಾ ಸೋಂಕಿನ ಅರಿವು: ಥ್ರೆಡ್ ಫಾರ್ ನೇಷನ್
Team Udayavani, Jun 26, 2021, 4:45 PM IST
ಬೆಂಗಳೂರು: ಕೊರೊನಾ ತಡೆ ಹಾಗೂ ಕೊರೊನಾ ನಿಯಮ ಪಾಲನೆ ಹಾಗೂ ಸೋಂಕಿನ ಬಗ್ಗೆ ಅರಿವು ಮೂಡಿಸಲು ನಗರದಲ್ಲಿನ ಪೊಲೀಸ್ ಇನ್ಸ್ಪೆಕ್ಟರ್ ಹಾಗೂಅವರ ಸ್ನೇಹಿತರು “ಥ್ರೆಡ್ ಫಾರ್ ನೇಷನ್’ (ಕೈಗೆ ದಾರಕಟ್ಟುವ) ಎಂಬ ಅಭಿಯಾನ ಕೈಗೊಂಡಿದ್ದಾರೆ.
ಆಗ್ನೇಯ ವಿಭಾಗದ ಸಿಇಎನ್ ಠಾಣೆ ಇನ್ಸ್ಪೆಕ್ಟರ್ ಎಲ್.ವೈ.ರಾಜೇಶ್ ಅವರ ನೇತೃತ್ವದ ಅಭಿಯಾನಕ್ಕೆ ನಟರಾದ ಕಿಚ್ಚ ಸುದೀಪ್, ಕಿಶೋರ್, ವಸಿಷ್ಠಸಿಂಹ, ನಟಿ ಪಾರೂಲ್ ಯಾದವ್, ನಿರ್ದೇಶಕ ರಾಘವ್ ಶಿವಮೊಗ್ಗ ಹಾಗೂ ಲವ್ಗುರುಖ್ಯಾತಿಯ ರಾಜೇಶ್ ಸೇರಿದಂತೆ ಹಲವುಕ್ಷೇತ್ರದಹಲವು ಮಂದಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ಕೊರೊನಾ ವಿರುದ್ಧ ಹೋರಾಟ ನಡೆಸಬೇಕೆಂದರೆ ಕೊರೊನಾ ನಿಯಮವನ್ನು ಪ್ರತಿಯೊಬ್ಬರುಕಡ್ಡಾಯವಾಗಿ ಪಾಲಿಸಬೇಕು. ಲಸಿಕೆ ಹಾಕಿಸಿಕೊಳ್ಳಬೇಕು.ಇದು ಸರಿಯಾಗಿ ಪಾಲನೆಯಾಗಬೇಕಾದರೆ, ನಮಗೆ ಪದೇಪದೆನೆನಪುಆಗಬೇಕುಎಂದರೆ “ಕೈಗೆ ದಾರ’ಕಟ್ಟಿಕೊಳ್ಳುತ್ತೇನೆ.ನೀವು ದಾರ ಕಟ್ಟಿಕೊಳ್ಳಬೇಕು. ಬಳಿಕ ನಿಮ್ಮ ಮೂವರು ಸ್ನೇಹಿತರಿಗೆ ತಿಳಿಸುವ ಪ್ರಯತ್ನ ಮುಂದುವರಿಸಬೇಕು ಎಂದು ಇನ್ಸ್ಪೆಕ್ಟರ್ ಎಲ್.ವೈ.ರಾಜೇಶ್ ಹೇಳಿದ್ದಾರೆ.
ಅಭಿಯಾನಕ್ಕೆಕೈ ಜೋಡಿಸಿರುವ ನಟ ಕಿಶೋರ್,ಕೊರೊನಾಹೋಗುವ ತನಕ ನನ್ನಕೈನಲ್ಲಿ ಈ ದಾರ ಇರುತ್ತದೆಎಂದು ಹೇಳಿದ್ದು, ದಾರಕಟ್ಟಿಕೊಂಡಿದ್ದಾರೆ.ಕೊರೊನಾ ನಿಯಮವನ್ನು ಪ್ರತಿಯೊಬ್ಬರುಪಾಲಿಸುವ ಮೂಲಕ ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ. “ಥ್ರೆಡ್ ಫಾರ್ ನೇಷನ್’ ಅಭಿಯಾನಕ್ಕೆ ಎಲ್ಲೆಡೆಯಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು, ಸಾಮಾಜಿಕ ಜಾಲತಾಣ ಟ್ವಿಟರ್,ಇನ್ಸ್ಟ್ರಾಗ್ರಾಮ್ನಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಹಲವುಕ್ಷೇತ್ರದ ಪರಿಣಿತರು ಬೆಂಬಲ ಸೂಚಿಸಿದ್ದಾರೆ.