ಲಸಿಕಾ ಕೇಂದ್ರಕ್ಕೆರಾಜಕೀಯ ನಾಯಕರ ಪ್ರವೇಶ ಸಲ್ಲ
Team Udayavani, Jun 2, 2021, 3:36 PM IST
ಬೆಂಗಳೂರು: ನಗರದಲ್ಲಿ ರಾಜಕೀಯನಾಯಕರು ಅವರ ಕಾರ್ಯಕರ್ತರಿಗೆಕೋವಿಡ್ ಲಸಿಕೆ ಕೊಡಿಸುತ್ತಿರುವ ಬಗ್ಗೆಹಾಗೂ ಕೋವಿಡ್ ಲಸಿಕೆ ರಾಜಕೀಯಪ್ರತ್ಯಾರೋಪಕ್ಕೆ ಕಾರಣವಾದ ಹಿನ್ನೆಲೆಯಲ್ಲಿನಗರದ ಯಾವುದೇ ಕೋವಿಡ್ ಲಸಿಕಾಕೇಂದ್ರಗಳಲ್ಲೂ ರಾಜಕೀಯ ಪಕ್ಷದ ಮುಖಂಡರು ಕುಳಿತುಕೊಂಡು ತಮ್ಮ ಕಾರ್ಯಕರ್ತರಿಗೆ ಲಸಿಕೆ ನೀಡುವಂತೆ ಒತ್ತಾಯಿಸುವಂತಿಲ್ಲ ಎಂದು ಬಿಬಿಎಂಪಿ ಮುಖ್ಯಆಯುಕ್ತ ಗೌರವ್ಗುಪ್ತ ಎಚ್ಚರಿಕೆ ನೀಡಿದ್ದಾರೆ.
ಈ ಸಂಬಂಧ ಸುದ್ದಿಗಾರರೊಂದಿಗೆಮಂಗಳವಾರ ಮಾತನಾಡಿದ ಆಯುಕ್ತರು,ನಗರದ ಎಲ್ಲ ಪ್ರಾಥಮಿಕ ಆರೋಗ್ಯಕೆಂದ್ರಗಳಲ್ಲಿ 45 ವರ್ಷ ಮೇಲ್ಪಟ್ಟವರಿಗೆಕೋವಿಡ್ ಲಸಿಕೆ ನೀಡಲಾಗುತ್ತಿದೆ. 18ರಿಂದ44 ವರ್ಷದೊಳಗಿನ ಮುಂಚೂಣಿಕಾರ್ಯಕರ್ತರಿಗೆ ತೆರೆದ ಸ್ಥಳ ಅಥವಾಕಾರ್ಯ ಸ್ಥಳದಲ್ಲಿ ಲಸಿಕೆ ನೀಡಲಾಗುತ್ತಿದೆ.
ಆದರೆ, ಲಸಿಕಾ ಕೇಂದ್ರಗಳಲ್ಲಿ ವಿವಿಧರಾಜಕೀಯ ಪಕ್ಷಗಳ ಮುಖಂಡರುಕುಳಿತುಕೊಂಡು ತಮ್ಮ ಪಕ್ಷದಕಾರ್ಯಕರ್ತರಿಗೆ ಲಸಿಕೆ ವಿತರಣೆಮಾಡುವಂತೆ ಒತ್ತಾಯಿಸುತ್ತಿರುವ ಬಗ್ಗೆಆರೋಪಕೇಳಿಬರುತ್ತಿದ್ದು,ಎಲ್ಲಕೇಂದ್ರಗಳಲ್ಲಿಅರ್ಹರಿಗೆ ಲಾನುಭವಿಗಳಿಗೆ ಮಾತ್ರ ಲಸಿಕೆನೀಡಬೇಕು ಎಂದರು.ಇನ್ನು ಪಾಲಿಕೆ ವ್ಯಾಪ್ತಿಯ ಕೊಳೆಗೇರಿನಿವಾಸಿಗಳಿಗೆ ಲಸಿಕೆ ಪಡೆಯಲು ಬಿಬಿಎಂಪಿಜಾಗೃತಿ ಮೂಡಿಸುತ್ತಿದ್ದರೂ, ಪ್ರಮಾಣದಲ್ಲಿಜನ ಲಸಿಕೆ ಹಾಕಿಸಿಕೊಳ್ಳುತ್ತಿಲ್ಲ.
ಹೀಗಾಗಿ,ಕೆಲವು ಖಾಸಗಿ ಕಂಪನಿಗಳು ಮತ್ತುಸಂಸ್ಥೆಗಳು ಸಿಎಸ್ಆರ್ ಅಡಿಯಲ್ಲಿಕೊಳೆಗೇರಿ ನಿವಾಸಿಗಳಿಗೆ ಕೋವಿಡ್ ಲಸಿಕೆನೀಡಲು ಮುಂದಾಗುತ್ತಿದೆ. ಲಸಿಕೆಪಡೆಯಲು ಜಾಗೃತಿ ಮತ್ತು ಶಿಬಿರಏರ್ಪಡಿಸಲು ಮುಂದೆ ಬಂದಿವೆ ಎಂದುಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು
MUST WATCH
ಹೊಸ ಸೇರ್ಪಡೆ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ