ಪಾಲಿಕೆ ದಾಳಿಗೆ ಬೆಚ್ಚಿ ದಂಡ, ಶುಲ್ಕ ಪಾವತಿಸಿದ ಟೆಲಿಕಾಂ ಸಂಸ್ಥೆಗಳು


Team Udayavani, Aug 11, 2017, 11:48 AM IST

ofcabel.jpg

ಬೆಂಗಳೂರು: ನಗರದ ಟೆಂಡರ್‌ಶ್ಯೂರ್‌ ರಸ್ತೆಗಳಲ್ಲಿ ಅನಧಿಕೃತವಾಗಿ ಅಳವಡಿಸಿದ್ದ ಆಪ್ಟಿಕಲ್‌ ಫೈಬರ್‌ ಕೇಬಲ್‌ (ಓಎಫ್ಸಿ)ಗಳ ತೆರವಿಗೆ ಬಿಬಿಎಂಪಿ ಕೈಗೊಂಡ ನಿರ್ದಾಕ್ಷಿಣ್ಯ ಕ್ರಮಗಳಿಗೆ ಹೆದರಿದ ಓಎಫ್ಸಿ ಸೇವಾಸಂಸ್ಥೆಗಳು ಪಾಲಿಕೆಗೆ ದಂಡ ಸಹಿತ ಶುಲ್ಕ ಪಾವತಿಸಿವೆ. 

ಮಂಗಳವಾರದಿಂದ ಟೆಂಡರ್‌ಶ್ಯೂರ್‌ ರಸ್ತೆಗಳಲ್ಲಿನ ಅನಧಿಕೃತ ಓಎಫ್ಸಿ ಕೇಬಲ್‌ ತೆರವು ಕಾರ್ಯಕ್ಕೆ ಪಾಲಿಕೆಯ ಅಧಿಕಾರಿಗಳು ಮುಂದಾಗಿದ್ದಾರೆ. ಈ ನಡುವೆ ಎರಡನೇ ದಿನ ಮೂರು ಟೆಲಿಕಾಂ ಸಂಸ್ಥೆಗಳು 4 ಕೋಟಿ ರೂ. ದಂಡ ಸಹಿತ ಶುಲ್ಕ ಪಾವತಿಸಿವೆ. 

ಮಂಗಳವಾರ ಮತ್ತು ಬುಧವಾರ ಟೆಂಡರ್‌ಶ್ಯೂರ್‌ನಡಿ ಅಭಿವೃದ್ಧಿ ಮಾಡಲಾಗಿರುವ ಕನ್ನಿಂಗ್‌ ಹ್ಯಾಂ ರಸ್ತೆ ಹಾಗೂ ರೆಸಿಡೆನ್ಸಿ ರಸ್ತೆಗಳಲ್ಲಿ ಕಾರ್ಯಾಚರಣೆ ನಡೆಸಿ 4 ಕಿ.ಮೀ. ಉದ್ದದ ಅನಧಿಕೃತ ಕೇಬಲ್‌ ತೆರವುಗೊಳಿಸಲಾಗಿದೆ. ಆ ಹಿನ್ನೆಲೆಯಲ್ಲಿ ಟೆಲಿಕಾಂ ಸಂಸ್ಥೆಗಳು, ಕೇಬಲ್‌ಗ‌ಳನ್ನು ಮುಂದಿನ ದಿನಗಳಲ್ಲಿ ಡಕ್ಟ್ಗಳ ಮೂಲಕ ಅಳವಡಿಸುವ ಖಾತರಿಯೊಂದಿಗೆ ಶುಲ್ಕ ಪಾವತಿಗೆ ಮುಂದಾಗಿವೆ. 

ಅನಧಿಕೃತ ಓಎಫ್ಸಿ ಅಳವಡಿಕೆಗೆ ಸಂಬಂಧಿಸಿದಂತೆ ಕಳೆದೆರಡು ದಿನಗಳಿಂದ ರಿಲಾಯನ್ಸ್‌ ಜಿಯೋ, ಎಲ್‌ ಅಂಡ್‌ ಟಿ, 3ಜಿ ಟೆಲಿಕಾಂ ಇನಾ#† ಸಂಸ್ಥೆಗಳು 3.94 ಕೋಟಿ ರೂ. ಓಎಫ್ಸಿ ಶುಲ್ಕ ಹಾಗೂ ದಂಡವನ್ನು ಪಾವತಿಸಿದ್ದಾರೆ. ಜತೆಗೆ ಮುಂದಿನ ದಿನಗಳಲ್ಲಿ ಟೆಂಡರ್‌ಶ್ಯೂರ್‌ ರಸ್ತೆಗಳಲ್ಲಿನ ಡಕ್ಟ್ಗಳ ಮೂಲಕವೇ ಕೇಬಲ್‌ ಅಳವಡಿಕೆ ಮಾಡುವ ಭರವಸೆ ನೀಡಿವೆ. 

ಇದರೊಂದಿಗೆ ಭಾರತಿ ಏರ್‌ಟೆಲ್‌, ಸ್ಪೆಕ್ಟ್ರಾ ನೆಟ್‌, ಐಡಿಯಾ ಸೆಲ್ಯೂಲರ್‌ ಸಂಸ್ಥೆಯ ಪ್ರತಿನಿಧಿಗಳು ಬಿಬಿಎಂಪಿ ಅಧಿಕಾರಿಗಳನ್ನು ಭೇಟಿ ಮಾಡಿ ತಾವು ಪಾವತಿಸಬೇಕಿರುವ ಮೊತ್ತದ ಡಿಮ್ಯಾಂಡ್‌ ನೋಟಿಸ್‌ ಪಡೆದುಕೊಂಡಿದ್ದು, ಸೋಮವಾರದೊಳಗೆ ಹಣ ಪಾವತಿಸದಿದ್ದರೆ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನು ಅಧಿಕಾರಿಗಳು ನೀಡಿದ್ದಾರೆ. 

ಟೆಂಡರ್‌ಶ್ಯೂರ್‌ ರಸ್ತೆಗಳಲ್ಲಿ ಅಳವಡಿಸಲಾದ ಅನಧಿಕೃತ ಓಎಫ್ಸಿ ಕೇಬಲ್‌ಗ‌ಳನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ಮುಂದಾದ ನಂತರ ಹಲವು ಸಂಸ್ಥೆಗಳು ದಂಡ ಸಹಿತ ಶುಲ್ಕ ಪಾವತಿಸಿವೆ. ಜತೆಗೆ ಕೆಲವೊಂದು ಸಂಸ್ಥೆಗಳು ಹಣ ಪಾವತಿಸಲು ಡಿಮ್ಯಾಂಡ್‌ ನೋಟಿಸ್‌ ಪಡೆದುಕೊಂಡಿವೆ. ಸೋಮವಾರದೊಳಗೆ ಹಣ ಪಾವತಿಸದಿದ್ದರೆ ಕೇಬಲ್‌ಗ‌ಳನ್ನು ತೆರವುಗೊಳಿಸುವುದಾಗಿ ಎಚ್ಚರಿಕೆ ನೀಡಲಾಗಿದೆ. 
-ಎಂ.ಕೆ.ಗುಣಶೇಖರ್‌, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ

ಅಂಕಿ-ಅಂಶ:
ದಂಡ ಸಹಿತ ಶುಲ್ಕ ಪಾವತಿ 
-ರಿಲಾಯನ್ಸ್‌ ಜಿಯೋ:
3.67 ಕೋಟಿ ರೂ.
-3ಜಿ ಟೆಲಿಕಾಂ ಇನಾ ಇಂಡಿಯಾ: 20.33 ಲಕ್ಷ ರೂ.
-ಎಲ್‌ ಆ್ಯಂಡ್‌ ಟಿ: 6.58 ಲಕ್ಷ ರೂ.
-ಒಟ್ಟು: 3.94 ಕೋಟಿ ರೂ.

ಡಿಮ್ಯಾಂಡ್‌ ನೊಟೀಸ್‌
-ಭಾರತಿ ಏರ್‌ಟೆಲ್‌:
29.29 ಲಕ್ಷ ರೂ.
-ಸ್ಪೆಕ್ಟ್ರಾನೆಟ್‌: 1.09 ಕೋಟಿ ರೂ.
-ಐಡಿಯಾ ಸೆಲ್ಯೂಲರ್‌: 29.56 ಲಕ್ಷ ರೂ.
-ಒಟ್ಟು: 1.68 ಕೋಟಿ ರೂ.

ಟಾಪ್ ನ್ಯೂಸ್

6-KAUP

Kaup: ಪಾಂಗಾಳದಲ್ಲಿ ಆಕಸ್ಮಿಕ ಬೆಂಕಿ: ಬೆಂಕಿ ನಂದಿಸಲು ನೆರವಾದ ತಹಶೀಲ್ದಾರ್

Truth Behind MS Dhoni’s No. 9 Decision Out

CSK; ಧೋನಿ ಯಾಕೆ ಕೆಳ ಕ್ರಮಾಂಕದಲ್ಲಿ ಆಡುತ್ತಿದ್ದಾರೆ…: ಹೊರಬಿತ್ತು ಸತ್ಯ

5-

Rabakavi-Banahatti: ತೀವ್ರ ಅನಾರೋಗ್ಯದಲ್ಲಿಯೂ ಮತದಾನ ಮಾಡಿದ ವ್ಯಕ್ತಿ

Bidar; ಒಂದೂವರೆ ವರ್ಷದ ಮಗು ಅಪಹರಣ ಸುಖಾಂತ್ಯ; ಹೈದರಾಬಾದ್ ನಲ್ಲಿ ಮಹಿಳೆ ಬಂಧನ

Bidar; ಒಂದೂವರೆ ವರ್ಷದ ಮಗು ಅಪಹರಣ ಸುಖಾಂತ್ಯ; ಹೈದರಾಬಾದ್ ನಲ್ಲಿ ಮಹಿಳೆ ಬಂಧನ

Money Laundering Case; Kejriwal’s stay in jail continues

Money Laundering Case; ಕೇಜ್ರಿವಾಲ್ ಜೈಲು ವಾಸ ಮುಂದುವರಿಕೆ

Siddapura: ಶಾರ್ಟ್ ಸರ್ಕ್ಯೂಟ್ ಗೆ ಅಂಗಡಿಗಳು ಬೆಂಕಿಗಾಹುತಿ… ಲಕ್ಷಾಂತರ ರೂ ನಷ್ಟ

Siddapura: ಶಾರ್ಟ್ ಸರ್ಕ್ಯೂಟ್ ಗೆ ಅಂಗಡಿಗಳು ಬೆಂಕಿಗಾಹುತಿ… ಲಕ್ಷಾಂತರ ರೂ ನಷ್ಟ

Raichur; ಮತದಾನ ಕೇಂದ್ರದಲ್ಲಿ ಕೇಸರಿ ಶಾಲು- ಹಿಜಾಬ್ ಗಲಾಟೆ; ಪೊಲೀಸರೊಂದಿಗೆ ಮಾತಿನ ಚಕಮಕಿ

Raichur; ಮತದಾನ ಕೇಂದ್ರದಲ್ಲಿ ಕೇಸರಿ ಶಾಲು- ಹಿಜಾಬ್ ಗಲಾಟೆ; ಪೊಲೀಸರೊಂದಿಗೆ ಮಾತಿನ ಚಕಮಕಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

950 ಕೋಟಿ ರೂಪಾಯಿ ವೈದ್ಯ ಸೀಟು ಹಂಚಿಕೆ ಅಕ್ರಮ: ಬಿಜೆಪಿ

Namma Metro: ಮೆಟ್ರೋದಲ್ಲಿ ಯುವಕ-ಯುವತಿ ಅಪ್ಪುಗೆ ಪಯಣ

Namma Metro: ಮೆಟ್ರೋದಲ್ಲಿ ಯುವಕ-ಯುವತಿ ಅಪ್ಪುಗೆ ಪಯಣ

15

Bengaluru: ಅಪಘಾತ ಗಲಾಟೆ: ಕಪಾಳಮೋಕ್ಷಕ್ಕೆ ವ್ಯಕ್ತಿ  ಬಲಿ

Majestic Underpass: ಅಸಹ್ಯ, ಭಯ ಹುಟ್ಟಿಸುತ್ತೆ ಮೆಜೆಸ್ಟಿಕ್‌ ಅಂಡರ್‌ಪಾಸ್‌

Majestic Underpass: ಅಸಹ್ಯ, ಭಯ ಹುಟ್ಟಿಸುತ್ತೆ ಮೆಜೆಸ್ಟಿಕ್‌ ಅಂಡರ್‌ಪಾಸ್‌

Vande Bharat: ಉಪನಗರಕ್ಕೂ ವಂದೇ ಭಾರತ ಮೆಟ್ರೋ ಬೋಗಿ?

Vande Bharat: ಉಪನಗರಕ್ಕೂ ವಂದೇ ಭಾರತ ಮೆಟ್ರೋ ಬೋಗಿ?

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

Gadag; Vinay came from England and voted

Gadag; ಇಂಗ್ಲೆಂಡ್‌ನಿಂದ ಆಗಮಿಸಿ ಮತದಾನ ಮಾಡಿದ ಗದಗದ ವಿನಯ್

6-KAUP

Kaup: ಪಾಂಗಾಳದಲ್ಲಿ ಆಕಸ್ಮಿಕ ಬೆಂಕಿ: ಬೆಂಕಿ ನಂದಿಸಲು ನೆರವಾದ ತಹಶೀಲ್ದಾರ್

Truth Behind MS Dhoni’s No. 9 Decision Out

CSK; ಧೋನಿ ಯಾಕೆ ಕೆಳ ಕ್ರಮಾಂಕದಲ್ಲಿ ಆಡುತ್ತಿದ್ದಾರೆ…: ಹೊರಬಿತ್ತು ಸತ್ಯ

Mangaluru Airport; 40.40 ಲಕ್ಷ ರೂ. ಮೌಲ್ಯದ ಚಿನ್ನ ವಶ

Mangaluru Airport; 40.40 ಲಕ್ಷ ರೂ. ಮೌಲ್ಯದ ಚಿನ್ನ ವಶ

5-

Rabakavi-Banahatti: ತೀವ್ರ ಅನಾರೋಗ್ಯದಲ್ಲಿಯೂ ಮತದಾನ ಮಾಡಿದ ವ್ಯಕ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.