ಕೆ.ಆರ್.ಮಾರುಕಟ್ಟೆಯಲ್ಲಿ ವ್ಯಾಪಾರ ಚೇತರಿಕೆ
ಸಾಮೂಹಿಕ ಅಂತರ ಮರೆತು ಹೂವು-ಹಣ್ಣುಖರೀದಿ, ಸಾಲು-ಸಾಲು ಹಬ್ಬಗಳಿಂದ ಭರ್ಜರಿ ವ್ಯಾಪಾರದ ನಿರೀಕ್ಷೆ
Team Udayavani, Oct 22, 2020, 11:37 AM IST
ಬೆಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ಬಂದ್ ಆಗಿದ್ದಕೆ.ಆರ್.ಮಾರುಕಟ್ಟೆಯಲ್ಲಿಕಳೆದ ಸೆ.1ರಿಂದ ವಹಿವಾಟು ಆರಂಭವಾಗಿದ್ದು, ಇದೀಗ ಚೇತರಿಕೆ ಕಾಣುತ್ತಿದೆ. ನವರಾತ್ರಿ ಸೇರಿದಂತೆ ಸಾಲು-ಸಾಲು ಹಬ್ಬಗಳುಬರಲಿದ್ದುಹೂವು-ಹಣ್ಣು ವ್ಯಾಪಾರಿಗಳು ಭರ್ಜರಿ ವ್ಯಾಪಾರದ ನಿರೀಕ್ಷೆಯಲ್ಲಿದ್ದಾರೆ.
ಕೆ.ಆರ್.ಮಾರುಟ್ಟೆಯಲ್ಲಿ ಬುಧವಾರ ಜನರು ಸಾಮಾಜಿಕ ಅಂತರವನ್ನು ಮರೆತು ಹೂವುಗಳನ್ನು ಖರೀದಿಸಿದ ದೃಶ್ಯ ಕಂಡು ಬಂತು. ಅತಿವೃಷ್ಟಿ ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ ಹೂವು ಮತ್ತು ತರಕಾರಿಗಳ ಬೆಲೆಯಲ್ಲಿ ಕೊಂಚ ಏರಿಕೆಯಾಗಿದೆ.
ಮಲ್ಲಿಗೆ ಮೊಗ್ಗು ಕೆ.ಜಿ ಗೆ ಸಾವಿರ ರೂ.ಗೆ ಮಾರಾಟವಾಯಿತು. ಹಾಗೆಯೇಕನಕಾಂಬರಹೂ 800 ರೂ., ಮಾರಿಗೋಲ್ಡ್ ಹೂ 220 ರೂ., ಚೆಂಡುಹೂವು 80 ರಿಂದ 40ರೂ., ಕೆಂಪುಗುಲಾಬಿ 160 ರೂ, ಸೇವಂತಿಗೆ 120ರೂ ಹಾಗೂಸುಗಂಧರಾಜ ಕೆ.ಜಿಗೆ 100 ರೂ.ಅಂತೆ ಮಾರಾಟವಾಯಿತು.
ಮಲ್ಲಿಗೆ ಹೂವು ಮಾರಿಗೆ 160 ರೂ, ಕಾಕಡ 80 ರೂ, ಸೇವಂತಿಗೆ 50-60 ರೂ.ಗೆ ಮಾರಾಟವಾಯಿತು. ಈ ವೇಳೆ ಮಾತನಾಡಿದ ಹೂವಿನ ವ್ಯಾಪಾರಿ ಪೆರುಮಾಳ್ ಕಳೆದ ವರ್ಷ ಈ ಸೀಜನ್ನಲ್ಲಿ ಉತ್ತಮ ವ್ಯಾಪಾರ ನಡೆದಿತ್ತು. ಆದರೆ ಕೊರೊನಾದ ಹಿನ್ನೆಲೆಯಲ್ಲಿ ಜನರು ಮಾರುಕಟ್ಟೆಗೆ ಬರುತ್ತಿಲ್ಲ. ಶೇ.40- 50 ಮಾತ್ರ ವಹಿವಾಟು ನಡೆಯುತ್ತಿದೆ ಎಂದರು.
ತಮಿಳುನಾಡು ಸೇರಿದಂತೆ ಬೆಂಗಳೂರು ಸುತ್ತಮುತ್ತಲಿನಿಂದ ಹೂವುಗಳು ಕೆ.ಆರ್. ಮಾರುಕಟ್ಟೆ ಸೇರಲಿವೆ. ಅತಿವೃಷ್ಟಿ ಹಿನ್ನೆಲೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಹೂವುಗಳು ಬರುತ್ತಿಲ್ಲ ಎಂದು ದಯಾಳನ್ ತಿಳಿಸಿದರು.
ಇನ್ನೂ ಸೇಬು ಮತ್ತು ದಾಳಿಂಬೆ ಹಣ್ಣು ಕೆ.ಜಿಗೆ 80 ರೂ, ಕಿತ್ತಳೆ 40 ರೂ, ಎಲಕ್ಕಿ ಬಾಳೆ ಹಣ್ಣು 40 ರೂ.ಗೆ ಖರೀದಿಯಾಯಿತು. ಹಾಗೆಯೇ ಬೂದ ಕುಂಬಳ ಕಾಯಿ100 ರಿಂದ120 ರೂ.ಗೆ. ಬೀನ್ಸ್ , ಕ್ಯಾರೆಟ್ 40ರೂ ಮತ್ತು ಬೆಂಡೆಕಾಯಿ 30 ರೂ.ಗೆ ಮಾರಾಟವಾಯಿತು.ಮಳೆಹಿನ್ನೆಲೆತರಕಾರಿಯಲ್ಲೂ ಬೆಲೆ ಏರಿಕೆಯಾಗಿದೆ ಎಂದು ಕಲಾಸಿಪಾಳ್ಯದ ತರಕಾರಿ ಮತ್ತು ಹಣ್ಣುಗಳ ಸಗಟು ವರ್ತಕರ ಸಂಘದ ಅಧ್ಯಕ್ಷ ಆರ್.ವಿ.ಗೋಪಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
MUST WATCH
ಹೊಸ ಸೇರ್ಪಡೆ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ