ಮನೆಗಳ ಅಂದ ಹೆಚ್ಚಿಸುತ್ತೆ ಅಡಕೆ ಮರದ ಉಪಕರಣ


Team Udayavani, Dec 30, 2018, 6:47 AM IST

manegala.jpg

ಬೆಂಗಳೂರು: ರೋಸ್‌ ವುಡ್‌, ಸಾಗವಾನಿ, ಶ್ರೀಗಂಧದಂತೆಯೇ ಈಗ “ಅರೆಕಾ ವುಡ್‌’ನ (ಅಡಕೆ ಮರದ) ಉತ್ಪನ್ನಗಳೂ ಬಂದಿವೆ! ಹೌದು, ಮಲೆನಾಡಿನ ತೋಟಗಳಲ್ಲಿ ಒಣಗಿ ಒಲೆ ಸೇರುತ್ತಿದ್ದ ಅಡಕೆ ಮರಗಳು ಈಗ ಸಿಲಿಕಾನ್‌ ಸಿಟಿಯ ಐಷಾರಾಮಿ ಮನೆಗಳ ಅಂದ ಹೆಚ್ಚಿಸುತ್ತಿವೆ.

ಅದರಲ್ಲೂ ಈಗೀಗ ಅಡಕೆ ಮರದ ಉತ್ಪನ್ನಗಳ ಬಳಕೆ ದಿನದಿಂದ ದಿನಕ್ಕೆ ಜನಪ್ರಿಯಗೊಳ್ಳುತ್ತಿದೆ. ಈಗಾಗಲೇ ಜೆ.ಪಿ.ನಗರ, ಹಾರೋಹಳ್ಳಿ, ಗಿರಿನಗರದ ಜನತಾ ಬಜಾರ್‌ ಮತ್ತಿತರ ಕಡೆಗಳಲ್ಲಿ ಅಡಕೆ ಮರದಿಂದ ತಯಾರಿಸಿದ ಪೀಠೊಪಕರಣಗಳು, ಪಿಕೆಟ್‌ ಫೆನ್ಸಿಂಗ್‌, ಒಳಾಂಗಣ ವಿನ್ಯಾಸದ ಉತ್ಪನ್ನಗಳು ಆಕರ್ಷಿಸುತ್ತಿವೆ.

ಸಾಗರದ ಶೆಡ್ತಿಕೆರೆಯಲ್ಲಿ ಇಬ್ಬರು ಹುಡುಗರು ಸೇರಿ ಆರಂಭಿಸಿದ ಗ್ರೀನ್‌ಲೀಫ್ ಅಗ್ರೋ ಸಲ್ಯುಷನ್ಸ್‌ ಎಂಬ ಸ್ಟಾರ್ಟ್‌ಅಪ್‌ ಕಂಪನಿ ಇಂತಹದ್ದೊಂದು ಪ್ರಯೋಗ ಮಾಡಿದ್ದು, ಅಡಕೆ ಇತಿಹಾಸದಲ್ಲಿ ಇದೇ ಮೊದಲ ಬಾರಿ ಹೀಗೆ ಉಪ ಉತ್ಪನ್ನಗಳು ಹೊರಬರುತ್ತಿವೆ. ಈ ಉತ್ಪನ್ನಗಳಿಗೆ ಬೆಂಗಳೂರಿನಿಂದ ಅತಿ ಹೆಚ್ಚು ಬೇಡಿಕೆ ಬರುತ್ತಿದ್ದು, ಇದು ಅಡಕೆ ಬೆಳೆಗಾರರಿಗೂ ಆದಾಯ ತಂದುಕೊಡುವ ಹೊಸ ಭರವಸೆ ಮೂಡಿಸಿದೆ. 

ಸಾಮಾನ್ಯವಾಗಿ ತೋಟದಲ್ಲಿ ಬೀಳುವ ಅಥವಾ ಕತ್ತರಿಸುವ ಅಡಕೆ ಮರಗಳು ಅಲ್ಲೇ ಕೊಳೆತು ಮಣ್ಣಾಗುತ್ತವೆ. ಅವುಗಳನ್ನು ಮನೆಗೆ ಹೊತ್ತುತರಲಿಕ್ಕೂ ಕಾರ್ಮಿಕರು ಸಿಗುವುದಿಲ್ಲ. ಸಿಕ್ಕರೂ 300-400 ರೂ. ಕೂಲಿ ಕೊಡಬೇಕು. ಇದೇ ಕಾರಣಕ್ಕೆ ಬೆಳೆಗಾರರು ಅಡಕೆ ಮರಗಳನ್ನು ತೋಟಗಳಲ್ಲೇ ಬಿಡುತ್ತಿದ್ದಾರೆ. ಪ್ರತಿ ವರ್ಷ ಒಂದು ಎಕರೆ ತೋಟದಲ್ಲಿ ಕನಿಷ್ಠ 10-12 ಮರಗಳು ನೆಲಕಚ್ಚುತ್ತವೆ.

ದೇಶದಲ್ಲೇ ಅತಿ ಹೆಚ್ಚು 1.80 ಲಕ್ಷ ಹೆಕ್ಟೇರ್‌ ಅಡಕೆ ಬೆಳೆಯುವ ಪ್ರದೇಶ ಹೊಂದಿರುವ ರಾಜ್ಯದಲ್ಲಿ ಎಕರೆಗೆ ಮೂರು ಮರಗಳ ಲೆಕ್ಕಹಾಕಿದರೂ ವರ್ಷಕ್ಕೆ ಐದು ಲಕ್ಷ ಮರಗಳು ಕೊಳೆಯುತ್ತಿವೆ. ಅದೇ ಮರಗಳನ್ನು ಬಳಸಿ, ಆಧುನಿಕತೆಗೆ ತಕ್ಕಂತೆ ಮೌಲ್ಯವರ್ಧನೆಗೊಳಿಸಿ 10ರಿಂದ 15 ಉತ್ಪನ್ನಗಳನ್ನು ತಯಾರಿಸಬಹುದು. ಈ ನಿಟ್ಟಿನಲ್ಲಿ ನಾವು ಯಶಸ್ವಿಯೂ ಆಗಿದ್ದು, ಬೆಂಗಳೂರಿನಿಂದ ಹೆಚ್ಚು ಬೇಡಿಕೆ ಬರುತ್ತಿದೆ ಎಂದು ಗ್ರೀನ್‌ ಲೀಫ್ನ ಮುಖ್ಯಸ್ಥ ಎಸ್‌.ವಿ. ಸಂತೋಷ್‌ ಕುಮಾರ್‌ ತಿಳಿಸುತ್ತಾರೆ. 

ಶೀಘ್ರ ಆನ್‌ಲೈನ್‌ ಮಾರುಕಟ್ಟೆ ಪ್ರವೇಶ: ಅಂದಹಾಗೆ, ಬಲಿತು ಹದಗೊಂಡ “ಅರೆಕಾ ವುಡ್‌’ನಿಂದ ತಯಾರಿಸಿದ ಉತ್ಪನ್ನಗಳು ಇತರೆ ವುಡ್‌ನಿಂದ ತಯಾರಿಸಿದ ಉತ್ಪನ್ನಗಳಿಗಿಂತ ಹತ್ತು-ಹದಿನೈದು ವರ್ಷ ಹೆಚ್ಚು ಬಾಳಿಕೆ ಮತ್ತು ಗಟ್ಟಿಮುಟ್ಟಾಗಿರುತ್ತವೆ. ಇದರಿಂದ ತೂಗುಮಣೆ, ಫ‌ರ್ನಿಚರ್‌ಗಳು, ಏಣಿ, ಪಿಕೆಟ್‌ ಫೆನ್ಸಿಂಗ್‌, ಇಂಟೀರಿಯರ್‌ ಡೆಕಾರೇಷನ್‌ಗೆ ಪೂರಕವಾದ ಉತ್ಪನ್ನಗಳನ್ನು ತಯಾರಿಸಬಹುದು.  

ಇನ್ನು ತೋಟದಲ್ಲಿ ಕೊಳೆತು ಬಿದ್ದ ಒಂದು ಮರಕ್ಕೆ ರೈತರಿಗೆ 600ರಿಂದ 800 ರೂ.ವರೆಗೂ ನೀಡುತ್ತೇವೆ. ಅದನ್ನು ಒಣಗಿಸಿ, ಕತ್ತರಿಸಿ ಹಸ್ತಾಂತರಿಸಿದ ಸಾವಿರ ರೂ.ವರೆಗೂ ಸಿಗುತ್ತದೆ. ಒಂದು ಮರದಿಂದ ಕನಿಷ್ಠ 4ರಿಂದ 5 ಸಾವಿರ ರೂ. ಆದಾಯ ಗಳಿಸಬಹುದಾಗಿದೆ. ಮಾರುಕಟ್ಟೆ ಬೆಳೆದಂತೆ ಇದರ ಪ್ರಮಾಣವೂ ಹೆಚ್ಚುತ್ತದೆ. ಕಳೆದ ವರ್ಷ ಒಂದೂವರೆ ಲಕ್ಷ ರೂ. ವಹಿವಾಟು ನಡೆದಿದೆ.

ಮುಂದಿನ ದಿನಗಳಲ್ಲಿ ಆನ್‌ಲೈನ್‌ ಮಾರುಕಟ್ಟೆ ಪ್ರವೇಶಿಸುವ ಗುರಿ ಇದೆ ಎಂದು ಸಂತೋಷ್‌ ಕುಮಾರ್‌ ಹೇಳಿದರು. ಇದಲ್ಲದೆ, ರೂರಲ್‌ ಟೂರಿಸಂ ಕೂಡ ಶೆಡ್ತಿಕೆರೆಯಲ್ಲಿ ಆರಂಭಿಸಿದ್ದೇವೆ. ಅಲ್ಲಿ ಹೊಸ ಪೀಳಿಗೆಗೆ ಗ್ರಾಮೀಣ ಬದುಕಿನ ಪರಿಚಯ ಮಾಡಿಕೊಡಲಾಗುತ್ತಿದೆ. ಸಾಂಪ್ರದಾಯಿಕ ಆಹಾರ, ಕ್ರೀಡೆ, ಟ್ರೆಕಿಂಗ್‌, ಅನ್ನದ ಹಿಂದಿನ ಶ್ರಮ ಮತ್ತಿತರ ಮಾಹಿತಿ ನೀಡಲಾಗುವುದು.

ನಾನು ಓದಿದ್ದು ಎಂ.ಕಾಂ. ಏನು ಮಾಡಬೇಕು ಎನ್ನುವುದ ತೋಚದಿದ್ದಾಗ, ಹೊಳೆದಿದ್ದೇ ಈ ಐಡಿಯಾ. ಇದಕ್ಕೆ ಸಾತ್‌ ನೀಡಿದವನು ನನ್ನ ಸ್ನೇಹಿತ ಮೆಕಾನಿಕಲ್‌ ಎಂಜಿನಿಯರಿಂಗ್‌ ಮುಗಿಸಿದ ಮಂಜುನಾಥ್‌. ನಮ್ಮ ಕಂಪೆನಿಗೆ ಇನ್ಫೋಸಿಸ್‌ನ ಮಾಜಿ ಉಪಾಧ್ಯಕ್ಷ ಚಂದ್ರಶೇಖರ್‌ ಕಾಕಾಲ್‌ ಮೆಂಟರ್‌ ಆಗಿದ್ದಾರೆ’ ಎಂದು ಮಾಹಿತಿ ನೀಡಿದರು. ಅರೆಕಾ ವುಡ್‌ ಉತ್ಪನ್ನಗಳ ಮಳಿಗೆಯನ್ನು ವಿಶ್ವ ಹವ್ಯಕ ಸಮ್ಮೇಳನದಲ್ಲಿ ಕಾಣಬಹುದು.

* ವಿಜಯಕುಮಾರ ಚಂದರಗಿ

ಟಾಪ್ ನ್ಯೂಸ್

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.