ಮೇಕೆ ಹಾಲು ಕುಡಿದು ಬೆಳೆದ ಸಿಂಹದ ಮರಿಗಳು
Team Udayavani, Jul 29, 2018, 12:01 PM IST
ಆನೇಕಲ್: ಆಗ ತಾನೇ ಹುಟ್ಟಿ ಕಣ್ಣು ಬಿಡುವ ಮೊದಲೇ ತಾಯಿಂದ ದೂರವಾದ 2 ಸಿಂಹದ ಮರಿಗಳು ಮೂರು ತಿಂಗಳು ಮೇಕೆ ಹಾಲು ಕುಡಿದು ಬೆಳೆದು ನಲಿದಾಡುತ್ತ ಸಂತಸದಿಂದಿವೆ. ಇದು ಮೃಗಾಲಯಗಳ ಇತಿಹಾಸದಲ್ಲೇ ಇದೇ ಮೊದಲ ಪ್ರಯತ್ನ.
ಆನೇಕಲ್ ತಾಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಆರ್. ಗೋಕುಲ್ ನೇತೃತ್ವದ ತಂಡ ಈ ಒಂದು ವಿಶೇಷ ಅಪರೂಪದ ಪ್ರಯತ್ನಕ್ಕೆ ಸಾಕ್ಷಿಯಾಗಿದೆ. ಕಳೆದ ಏ.25 ರಂದು 8 ವರ್ಷದ ಸಿಂಹಣಿ ಸಾನಾ, 6 ವರ್ಷದ ಸಿಂಹ ಶಂಕರ್ ಜೋಡಿಗೆ 4 ಮರಿಗಳು ಜನಿಸಿದ್ದವು.
ಸಾನಾ ಮರಿ ಹಾಕಿದ ಕೆಲವೇ ಗಂಟೆಗಳಲ್ಲಿ ಒಂದು ಮರಿಯನ್ನು ತಿಂದು ಬಿಟ್ಟಿತ್ತು. ಇದನ್ನು ಗಮನಿಸಿದ ವೈದ್ಯಾಧಿಕಾರಿ ಉಮಾಶಂಕರ್, ಕೂಡಲೇ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಉಳಿದ 3 ಮರಿಗಳನನ್ನು ತಾಯಿಂದ ದೂರ ಮಾಡಿ ಉದ್ಯಾನವನದ ಆಸ್ಪತ್ರೆಯಲ್ಲಿ ಆಶ್ರಯ ನೀಡಲು ನಿರ್ಧರಿಸಿದರು.
ಅದರಂತೆ, ಸಾನಾ ಸಿಂಹಿಣಿಯನ್ನು ಮತ್ತೂಂದು ಕೇಜ್ಗೆ ಸಾಗಿಸಿ 3 ಮರಿಗಳನ್ನು ವಿಶೇಷ ಕಾಳಜಿಯಿಂದ ತೆಗೆದುಕೊಂಡು ಆಸ್ಪತ್ರೆಗೆ ಸ್ಥಳಾಂತರಿಸಿದರು. ಆ ವೇಳೆಗೆ ತಾಯಿಯ ತುಳಿತಕ್ಕೆ ಗಾಯಗೊಂಡಿದ್ದ ಮರಿ ಆಸ್ಪತ್ರೆಗೆ ಬರುತ್ತಿದ್ದಂತೆ ಮೃತ ಪಟ್ಟಿತ್ತು.
ಉಳಿದ 2 ಮರಿಗಳನ್ನು ಜೋಪಾನವಾಗಿ ರಾತ್ರಿ ಹಗಲು ಮುತುವರ್ಜಿಯಿಂದ ನೋಡಿಕೊಂಡಿದ್ದರಿಂದ ಇಂದು 2 ಮರಿಗಳು ಆರೋಗ್ಯವಾಗಿ ನಲಿದಾಡುತ್ತಿವೆ. ಈ 3 ತಿಂಗಳು ಮೇಕೆ ಹಾಲನ್ನು ಅದರಲ್ಲೂ ಸ್ಥಳೀಯವಾಗಿ ಮೇಕೆಗಳಿಂದ ಹಾಲು ಸಂಗ್ರಹಿಸಿ ಮರಿಗಳಿಗೆ ನೀಡಲಾಗಿದೆ. ಇದು ಮೃಗಾಲಯ ಇತಿಹಾಸದಲ್ಲಿ ಮೊದಲ ಪ್ರಯತ್ನ ಎಂಬುದು ಪ್ರಶಂಸೆಗೆ ಪಾತ್ರವಾಗಿದೆ.
ಸಾನಾ ಸಿಂಣಿಗೆ ಇದು 3ನೇ ಹೆರಿಗೆ. ಈ ಹಿಂದೆ 2 ಬಾರಿ ಮರಿಗಳನ್ನು ಹಾಕಿ ಒಂದೇ ದಿನದಲ್ಲಿ ತಿಂದು ಬಿಡುತ್ತಿತ್ತು. ಹೀಗಾಗಿ ನಾವು ಈ ಬಾರಿ ಮರಿಗಳನ್ನು ಹೇಗಾದರೂ ರಕ್ಷಿಸಲೇಬೇಕೆಂದು ನಿರ್ಧರಿಸಿ ಮರಿಗಳಿಗೆ ಆಸ್ಪತ್ರೆಯಲ್ಲಿ ಆಶ್ರಯ ನೀಡಬೇಕಾಯಿತು ಎಂದು ಉದ್ಯಾನವನದ ಕಾರ್ಯನಿರ್ವಹಕ ನಿರ್ದೇಶಕ ಆರ್.ಗೋಕುಲ್ “ಉದಯವಾಣಿ’ಗೆ ತಿಳಿಸಿದರು.
ನನ್ನ ಅನುಭವದಲ್ಲಿ ಸಿಂಹದ ಮರಿಗಳಿಗೆ ಮೇಕೆ ಹಾಲು ಕೊಟ್ಟು ಬೆಳೆಸಿದ್ದು ಎಲ್ಲೂ ಕೇಳಿರಲಿಲ್ಲ, ಅದರಲ್ಲೂ ಮರಿಗಳು ಕಣ್ಣು ಬಿಡುವ ಮೊದಲೇ ತಾಯಿಂದ ದೂರವಾದ ಬಳಿಕವೂ ಅವುಗಳನ್ನು ಬದುಕಿಸಿ ಬೆಳೆಸುವುದು ದೊಡ್ಡ ಸಾಹಸದ ಕೆಲಸ.
ಉದ್ಯಾನವನದ ವೈದ್ಯಾಟಊಕಾರಿ ಉಮಾಶಂಕರ್ ನೇತೃತ್ವದ ವೈದ್ಯರ ತಂಡ ಇಂತಹ ಅಪರೂಪದ ಸಾಹಸದ ಪ್ರಯತ್ನ ಮಾಡಿ ಮರಿಗಳನ್ನು ಬೆಳೆಸಿ ದೊಡ್ಡ ಸಾಧನೆಯನ್ನೇ ಮಾಡಿದ್ದಾರೆ. ಈ ಪ್ರಯತ್ನ ಇತರರಿಗೆ ಮಾದರಿ ಎಂದು ಹೇಳಿದರು.
ಮರಿಗಳಿಗೆ ಎರಡೂವರೆ ತಿಂಗಳವರೆಗೂ ಮೇಕೆ ಹಾಲು ನೀಡುತ್ತ ಬಂದು ನಂತರ ಕೋಳಿ ಮಾಂಸವನ್ನು ಸಣ್ಣ ಸಣ್ಣ ತುಂಡುಗಳಾಗಿ ಮಾಡಿ ತಿನ್ನಿಸುತ್ತ ಬರಲಾಗಿತ್ತು. ಸದ್ಯ 2 ಮರಿಗಳಿಗೆ ಮೂರು ತಿಂಗಳಾಗಿದೆ.
ಆಸ್ಪತ್ರೆ ಆವರಣದಲ್ಲಿ ಸ್ವತ್ಛಂದವಾಗಿ ಮರಿಗಳು ನಡೆದಾಡಿಕೊಂಡು ಸಂತಸದಿಂದಿವೆ ಎಂದು ಅವರು ಹೇಳಿದರು. ಉದ್ಯಾನವನದಲ್ಲಿ 10 ಗಂಡು, 10 ಹೆಣ್ಣು ಸಿಂಹಗಳು ಸೇರಿ 20 ಸಿಂಹಗಳು ಇದ್ದವು. ಮೂರು ತಿಂಗಳ ಈ ಮರಿಗಳು 2 ಹೆಣ್ಣಾಗಿವೆ. ಇವು ಸೇರಿದರೆ ಸಿಂಹಗಳ ಸಂಖ್ಯೆ 22ಕ್ಕೆ ಏರಿದೆ.
ಇನ್ನೂ ಆರು ತಿಂಗಳು ಮೃಗಾಲಯದ ಆಸ್ಪತ್ರೆಯಲ್ಲಿ ಆಶ್ರಯ ನೀಡಿ ನಂತರ ಸಫಾರಿಯಲ್ಲಿ ಪ್ರವಾಸಿಗರ ವೀಕ್ಷಣೆಗೆ ಅನುವು ಮಾಡಿಕೊಡಲಾಗುವುದು ಎಂದು ಆರ್.ಗೋಕುಲ್ ತಿಳಿಸಿದರು. ಚಿತ್ರ ಇದೆ 28 ಆನೇಕಲ್ ಪಿ ಎಚ್ 2 ಆನೇಕಲ್ ತಾಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಅಪರೂಪದ ಸಿಂಹದ ಮರಿಗಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
MUST WATCH
ಹೊಸ ಸೇರ್ಪಡೆ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ