ಇಎಸ್ಐ ಆಸ್ಪತ್ರೆಗೆ ಹೆಬ್ಬಾರ್ ಭೇಟಿ
Team Udayavani, May 27, 2021, 2:13 PM IST
ಬೆಂಗಳೂರು; ರಾಜ್ಯದ ವಿವಿಧೆಡೆಗಳಲ್ಲಿಇರುವ ನೌಕರರ ರಾಜ್ಯ ವಿಮಾ ನಿಗಮ(ಇಎಸ್ಐ ) ದ ಆಸ್ಪತ್ರೆಗಳಲ್ಲಿಕೋ ವಿಡ್-19 ಸೋಂಕಿತರಿಗೆಆದ್ಯತೆ ಯ ಮೇರೆಗೆ ಚಿಕಿತ್ಸೆನೀಡಲು ಆಸ್ಪತ್ರೆಗಳ ಅವಶ್ಯಕತೆಪೂರೈಕೆಗೆ ಅನುವಾಗುವಂತೆ ಜಿಲ್ಲಾ ಮಟ್ಟದ ಸಮಿತಿಗಳ ರಚಿಸಲು ಕಾರ್ಮಿಕ ಸಚಿವ ಶಿವರಾಂಹೆಬ್ಟಾರ್ ಅಧಿಕಾರಿಗಳಿಗೆ ಸೂಚನೆ ನೀಡಿ ದರು.
ನಗರದ ಇಂದಿರಾನಗರದ 300ಹಾಸಿಗೆಗಳ ಇಎಸ್ಐ ಆಸ್ಪತ್ರೆಗೆ ಬುಧವಾರಭೇಟಿ ನೀಡಿ ಕೋವಿಡ್-19 ಸೋಂಕಿತರಿಗೆನೀಡಲಾಗುತ್ತಿರುವ ಚಿಕಿತ್ಸೆ ಬಗ್ಗೆ ಪರಿಶೀಲನೆ ನಡೆಸಿದ ಅವರು, ವಿವಿಧ ಜಿಲ್ಲೆ ಗಳಲ್ಲಿ ಇರುವ ಇಎಸ್ಐಆಸ್ಪತ್ರೆಗಳಲ್ಲಿ ಪ್ರಸ್ತುತ ಲಭ್ಯಇರುವ ಸೌಕರ್ಯಗಳನ್ನುಬಳಸಿಕೊಂಡು ಕೊರೋನಾಸೋಂಕಿತರಿಗೆ ಉತ್ತಮ ಚಿಕಿತ್ಸೆನೀಡುವಂತೆ ಹಾಗೂ ಅಗತ್ಯಇರುವ ವೈದ್ಯಕೀಯ ವ್ಯವಸ್ಥೆ ಕುರಿತುಸಮಿತಿಗಳ ಮೂಲಕ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.