ಹತ್ಯೆ ಮುಂದುವರಿದರೆ ಸತ್ಯ ಹೇಳುವವರೇ ಇರರು
Team Udayavani, Sep 7, 2017, 11:42 AM IST
ಯಲಹಂಕ: ವಿಚಾರವಂತರ ಹತ್ಯೆ ಸರಣೆ ಹೀಗೆ ಮುಂದುವರಿದರೆ ಸತ್ಯ ಹೇಳುವವರ ಸಂಖ್ಯೆ ಸಮಾಜದಲ್ಲಿ ಕಡಿಮೆಯಾಗುವ ಆತಂಕವಿದೆ. ಸಮಾಜವನ್ನು ಫ್ಯಾಸಿಸಂ ಕಡೆಗೆ ತಿರುಗಿಸುವ ಹುನ್ನಾರ ದೇಶದಲ್ಲಿ ನಡೆಯುತ್ತಿದೆ. ಅದನ್ನು ತಡೆಯಲು ಕಾನೂನು ಬಲಿಷ್ಠವಾಗಬೇಕು ಎಂದು ಯುವ ಚಿಂತಕ ಡಾ. ಕೆ. ಟಿ. ವಿಜಯಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಜಿಕೆವಿಕೆ ಆವರಣದಲ್ಲಿ ಹಮ್ಮಿಕೊಂಡಿದ್ದ ಗೌರಿ ಲಂಕೇಶ್ ಶ್ರದ್ದಾಂಜಲಿಯಲ್ಲಿ ಮಾತನಾಡಿದ ಅವರು “ಕಳೆದ 3 ವರ್ಷಗಳಲ್ಲಿ ಮಹಾರಾಷ್ಟ್ರದ ಪನ್ಸಾರೆ, ದಾಬೋಲ್ಕರ್, ಕರ್ನಾಟಕದ ಡಾ. ಕಲ್ಪುರ್ಗಿ ನಂತರ ಮೂಲಭೂತವಾದಿಗಳಿಗೆ ಬಲಿಯಾದ ನಾಲ್ಕನೆಯ ಜೀವ ಗೌರಿ.
ಈ ಹತ್ಯೆ ಸರಣೆ ಹೀಗೆ ಮುಂದುವರೆದರೆ ಸತ್ಯ ಹೇಳುವವರ ಸಂಖ್ಯೆ ಸಮಾಜದಲ್ಲಿ ಕಡಿಮೆಯಾಗಲಿದೆ. ಇದರ ವಿರುದ್ಧ ಜನಾಂದೋಲನಗಳಾಗಬೇಕು. ರಾಜ್ಯದಲ್ಲಿ ಇನ್ನೂ ಅನೇಕ ವಿಚಾರವಾಧಿಗಳಿಗೆ ಜೀವ ಬೆದರಿಕೆಯಿದ್ದು ಅವರಿಗೆ ಸರ್ಕಾರ ರಕ್ಷಣೆ ನೀಡಬೇಕು,’ ಎಂದು ಒತ್ತಾಯಿಸಿದರು. ಪ್ರಾಧ್ಯಾಪಕ ಡಾ ಜೆ. ಬಾಲಕೃಷ್ಣ ಮಾತನಾಡಿ, “ಸಮಾಜದಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿದೆ.
ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಕೆಲಸ ನಡೆದರೆ ಸಮಸಮಾಜಕ್ಕೆ ಹಾನಿಕರ. ಅದಕ್ಕಾಗಿ ಸರ್ಕಾರವು ಪ್ರಜಾಪ್ರಭುತ್ವ ಉಳಿಸುವ ಹಾದಿಯಲ್ಲಿ ಕಾಯೊನ್ಮುಖವಾಗಬೇಕು. ಬುದ್ಧ ಧರ್ಮ, ಬಸವಣ್ಣ, ಗಾಂಧಿಯನ್ನು ಕೊಂದವರು ಗೌರಿ ಲಂಕೇಶರನ್ನು ಕೊಂದರು,’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
MUST WATCH
ಹೊಸ ಸೇರ್ಪಡೆ
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್