ವಿದೇಶಿ ವಿಮಾನಗಳಲ್ಲೂ ಪಸರಿಸಿದ ಕನ್ನಡ ಡಿಂಡಿಮ


Team Udayavani, Nov 6, 2018, 6:45 AM IST

british-airways.jpg

ಬೆಂಗಳೂರು:ಪ್ರಯಾಣಿಕರೆ ನಿಮಗೆ ಬ್ರಿಟೀಷ್‌ ಏರ್‌ವೇಸ್‌ಗೆ ಸ್ವಾಗತ, ವಿಮಾನದಲ್ಲಿ ಯಾರಿಗೂ ತೊಂದರೆ ಆಗದಂತೆ ನಿಮ್ಮ ಲಗೇಜುಗಳನ್ನು ವ್ಯವಸ್ಥಿತವಾಗಿ ಇಡಬೇಕು. ವಿಮಾನ ಹಾರಾಟ ಮಾಡುವ ಸಂದರ್ಭದಲ್ಲಿ ನಿಮ್ಮ ಲ್ಯಾಪ್‌ಟಾಪ್‌ ನಿಮ್ಮ ಮೊಬೈಲ್‌ ನಿಷ್ಕ್ರಿಯಗೊಳಿಸಿ. ವಿಮಾನದಲ್ಲಿ ದೂಮ್ರಪಾನ ನಿಷೇಧಿಸಲಾಗಿದೆ. ನಾವು ಕನ್ನಡ, ತಮಿಳು ಮಲಯಾಳಿ, ಹಿಂದಿ, ಆಂಗ್ಲ ಭಾಷೆಯಲ್ಲಿ ಮಾತನಾಡುತ್ತೇವೆ. ನಿಮಗೆ ಏನೇ ಸಮಸ್ಯೆ ಇದ್ದರೆ ಕನ್ನಡದಲ್ಲಿಯೂ ಮಾತನಾಡಿ, ನಾವು  ಮೂರು ಜನ ಇದ್ದೇವೆ. ನಾವು ಕನ್ನಡದಲ್ಲಿ ಮಾತನಾಡುತ್ತೇವೆ. ಹೆಚ್ಚಿನ ಮಾಹಿತಿಗಾಗಿ ಸುರಕ್ಷತೆಯ ಪಟ್ಟಿಯನ್ನು ನೋಡಿ.

ಹೀಗೆಂದು ಅಚ್ಚ ಕನ್ನಡದಲ್ಲಿ ಉದ್ಘೋಷ ಮಾಡುವುದು ನಮ್ಮ ಬಿಎಂಟಿಸಿ ಅಥವಾ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಅಲ್ಲ. ಬ್ರಿಟೀಷ್‌ ಏರ್‌ವೇಸ್‌ನಲ್ಲಿ!

ಕರ್ನಾಟಕದಲ್ಲಿ ಕನ್ನಡ ಮಾತನಾಡಲು ಕನ್ನಡಿಗರೇ ತಾತ್ಸಾರ ತೋರಬಹುದು. ಕನ್ನಡ ಮಹಿಮೆ ಅರಿತಿರುವ ವಿದೇಶಿಗರು ಆಕಾಶದಲ್ಲೂ ಕನ್ನಡದ ಕಹಳೆ ಮೊಳಗಿಸುತ್ತಿದ್ದಾರೆ. ಬ್ರಿಟೀಷ್‌ ಏರ್‌ವೇಸ್‌ನಲ್ಲಿ ನೀವು ಬೆಂಗಳೂರಿನಿಂದ ಪ್ರಯಾಣಿಸಿದರೆ ಕನ್ನಡದಲ್ಲಿಯೇ ನಿಮಗೆ ಸ್ವಾಗತಿಸುತ್ತಾರೆ.

ನಮ್ಮನ್ನಾಳಿ ಹೋದ ಬ್ರಿಟಿಷರು ನಮ್ಮ ಸಂಪತ್ತಿನ ಜೊತೆಗೆ ನಮ್ಮ ಕನ್ನಡವನ್ನೂ ತಮ್ಮೊಂದಿಗೆ ತೆಗೆದುಕೊಂಡು ಹೋಗುವ ಉದಾರತೆ ತೋರುತ್ತಿದ್ದಾರೆ. ಆಂಗ್ಲರ ಆಕಾಶದಲ್ಲೂ ಕನ್ನಡ ಡಿಂಡಿಮ ಮೊಳಗುತ್ತಿರುವುದು ಸಂತಸದ ವಿಷಯ. ಕನ್ನಡ ಭಾಷೆಗೆ ನಮ್ಮ ನಾಡಿನಲ್ಲಿಯೇ ಮಾನ್ಯತೆ ದೊರೆಯುತ್ತಿಲ್ಲ ಎಂಬ ಮಾತುಗಳಿಗೆ ವ್ಯತಿರಿಕ್ತವಾದ ಈ ಬೆಳವಣಿಗೆ ನವೆಂಬರ್‌ನಲ್ಲಿ ಕನ್ನಡಿಗರು ಹೆಮ್ಮೆ ಪಡುವ ವಿಷಯ.

ಬ್ರಿಟಿಷ್‌ ಏರ್‌ವೇಸ್‌  ಕನ್ನಡದ ಪ್ರಯಾಣಿಕರ ಸುರಕ್ಷತೆಗೆ ಯಾವುದೇ ಭಾಷಾ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಗಗನ ಸಖೀಯರಿಗೆ ಕನ್ನಡ ಭಾಷೆಯಲ್ಲಿ ಉದ್ಘೋಷಣೆ ಮಾಡುವುದನ್ನೂ ಕಲಿಸಿದೆ. ಇದು ಬೇರೆ ಭಾಷೆ ಬಾರದ ಕನ್ನಡಿಗರು ಇಂಗ್ಲೆಂಡ್‌ ಪ್ರವಾಸ ಕೈಗೊಂಡರೂ ವಿಮಾನ ಪ್ರಯಾಣದಲ್ಲಿ ಯಾವುದೇ ಭಾಷಾ ಸಮಸ್ಯೆಯಾಗದೇ ಆತಂಕವಿಲ್ಲದೇ ಪ್ರಯಾಣ ಮಾಡುವ ಭರವಸೆಯನ್ನು ತುಂಬಿಸಿದೆ.

ಅದೇ ರೀತಿ ಸಿಂಗಪೂರ್‌ ಮತ್ತು ಹಾಂಕಾಂಗ್‌ಗೆ ತೆರಳುವ ಕಾಪೆ ಪೆಸಿಫಿಕ್‌ ವಿಮಾನಯಾನ ಸಂಸ್ಥೆಯೂ ಕನ್ನಡಿಗರ ಅನುಕೂಲಕ್ಕಾಗಿ ಧ್ವನಿ ಮುದ್ರಿತ ಕನ್ನಡ ಸುರಕ್ಷಾ ಸೂಚನೆಗಳನ್ನು ನೀಡಲಾಗುತ್ತದೆ. ಏರ್‌ ಫ್ರಾನ್ಸ್‌ನಲ್ಲಿಯೂ ಆಗಾಗ ಕನ್ನಡ ಭಾಷೆಯ ಬಳಕೆ ಆರಂಭಿಸಲಾಗಿದೆ. ಅಂತಾರಾಷ್ಟ್ರೀಯ ವಿಮಾನಯಾನ ಮಾಡುವ ಕನ್ನಡಿಗರಿಗೆ ವಿದೇಶಕ್ಕೆ ತೆರಳುವಾಗಲೂ ಮಾತೃ ಭಾಷೆಯ ಧ್ವನಿ ಕೇಳುವುದು ಹೆಮ್ಮೆ ಪಡುವಂತೆ ಮಾಡಿದೆ.

ಕನ್ನಡದ ಮೆನು:ಅನೇಕ ವಿದೇಶಿ ವಿಮಾನಯಾನ ಸಂಸ್ಥೆಗಳು ಕನ್ನಡದ ಪ್ರಯಾಣಿಕರಿಗೆ ವಿಮಾನಯಾನದಲ್ಲಿ ಪ್ರಯಾಣಿಸುವಾಗ ಆಹಾರ ಸೇವನೆಯಲ್ಲಿ ಸಮಸ್ಯೆಯಾಗಬಾರದು ಎನ್ನುವ ಕಾರಣಕ್ಕೆ ವಿಮಾನಯಾನ ಪ್ರಯಾಣದಲ್ಲಿ ದೊರೆಯುವ ಆಹಾರ ಪದಾರ್ಥಗಳ ಪಟ್ಟಿಯನ್ನೂ ಕನ್ನಡದಲ್ಲಿ ನೀಡುವ ಪರಿಪಾಠ ಆರಂಭಿಸಿವೆ. ಎಮಿರೇಟ್ಸ್‌, ಏರ್‌ ಫ್ರಾನ್ಸ್‌, ಲುಪ್ತಾನ್ಸಾ, ಕಾಪೆ ಫೆಸಿಫಿಕ್‌ ವಿದೇಶಿ ಸೇರಿದಂತೆ ಅನೇಕ ವಿದೇಶಿ ವಿಮಾನಯಾನ ಸಂಸ್ಥೆಗಳು ಕನ್ನಡಿಗರ ಭಾವನೆಗಳಿಗೆ ಸ್ಪಂದಿಸಿ ಕನ್ನಡದ ಮೆನು ಸಿದ್ದಪಡಿಸಿ ಕೊಡುವುದನ್ನು ಆರಂಭಿಸಿದ್ದಾರೆ.

ಕನ್ನಡ ಸಿನೆಮಾ ಪ್ರದರ್ಶನ ಆರಂಭ: ವಿಮಾನದಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರಿಗೆ ಬೇಸರ ಕಳೆಯಲು ಕುಳಿತ ಸೀಟಿನ ಎದುರೇ ಟಿವಿ ಇರುವುದರಿಂದ ಅದರಲ್ಲಿ ನಿಮಗೆ ಯಾವ ಭಾಷೆಯ ಕಾರ್ಯಕ್ರಮ ಹಾಗೂ ಸಿನೆಮಾ ಬೇಕೋ ಅದನ್ನು ನೋಡಲು ಅವಕಾಶ ಕಲ್ಪಿಸಲಾಗಿದೆ. ಬಹುತೇಕ ವಿಮಾನಯಾನ ಸಂಸ್ಥೆಗಳಲ್ಲಿ ಇಂಗ್ಲಿಷ್‌, ಹಿಂದಿ, ತಮಿಳು, ತೆಲಗು ಹಾಗೂ ಮಲಯಾಳಿ ಸಿನೆಮಾಗಳನ್ನು ಅಳವಡಿಸಲಾಗಿರುತ್ತದೆ. ಅರಬ್‌ ರಾಷ್ಟ್ರಗಳಿಗೆ ತೆರಳುವ ಕನ್ನಡದ ಪ್ರಯಾಣಿಕರಿಗೆ ಎಮಿರೇಟ್ಸ್‌ ವಿಮಾನಯಾನ ಸಂಸ್ಥೆ ಕನ್ನಡ ಸಿನೆಮಾಗಳನ್ನೂ ನೋಡುವ ಅವಕಾಶವನ್ನು ಕಲ್ಪಿಸಿದೆ. ಈ ಮೂಲಕ ಕನ್ನಡ ಸಿನೆಮಾಗಳಿಗೆ ಮಾರುಕಟ್ಟೆ ವಿಸ್ತಾರವಾಗುತ್ತಿದೆ.

ವಿಮಾನಯಾನದಲ್ಲಿ ಕನ್ನಡದಲ್ಲಿ ಮೆನು ಇರುವುದರಿಂದ ಮತ್ತು ಕನ್ನಡ ಸಿನೆಮಾಗಳನ್ನು ಅಳವಡಿಸಿರುವುದರಿಂದ ಕನ್ನಡದ
ವಾತಾವರಣದಲ್ಲಿಯೇ ನಾವು ವಿದೇಶ ಪ್ರಯಾಣ ಮಾಡುವುದು ಖುಷಿಯಾಗುತ್ತದೆ. ಎಮಿರೇಟ್ಸ್‌ ಸೇರಿ ವಿದೇಶ ವಿಮಾನಯಾನ ಸಂಸ್ಥೆಗಳು ಕನ್ನಡಕ್ಕೆ ಅವಕಾಶ ಕೊಟ್ಟಿರು ವುದು ಹೆಮ್ಮೆ ಅನಿಸುತ್ತದೆ.
– ಎನ್‌. ಎಂ. ಮಂಜುಳಾ, ಅನಿವಾಸಿ ಕನ್ನಡಿಗರು

– ಶಂಕರ ಪಾಗೋಜಿ

ಟಾಪ್ ನ್ಯೂಸ್

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.