ಇಲ್ಲಿ ಕನ್ನಡ ಫ‌ಲಕಗಳು ಮಾತ್ರ ; ಕನ್ನಡ ಮಾತಿಲ್ಲ!


Team Udayavani, Nov 4, 2019, 11:00 AM IST

bng-tdy-3

ಬೆಂಗಳೂರು: ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳ ಪೈಕಿ ಬೆಂಗಳೂರು ಒಂದು. ಅಷ್ಟೇ ವೇಗದಲ್ಲಿ ಇಲ್ಲಿ ಕನ್ನಡವೂ ಕರಗುತ್ತಿದೆ!

ಬೆಂಗಳೂರು ಮೆಟ್ರೋ ಪಾಲಿಟನ್‌ ಸಿಟಿಯಾಗಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಅದಕ್ಕೆ ತಕ್ಕಂತೆ ನೂರಾರು ಪ್ರತಿಷ್ಠಿತ ಹೊಟೇಲ್‌, ಕಾರ್ಖಾನೆಗಳು, ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು, ಹತ್ತಾರು ಸಾರ್ವಜನಿಕ ಸೇವಾ ಸಂಸ್ಥೆಗಳು ತಲೆಯೆತ್ತಿವೆ. ಆದರೆ, ಅಲ್ಲೆಲ್ಲಾ “ಕನ್ನಡ” ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದೆ. ಕನ್ನಡ ನಾಮಫ‌ಲಕಗಳಿವೆ, ಕೆಳದರ್ಜೆ ಸಿಬ್ಬಂದಿಯಲ್ಲಿ ಕನ್ನಡಿಗರು ಕೆಲಸ ಮಾಡುತ್ತಾರೆ, ಅಪರೂಪಕ್ಕೆ ಕನ್ನಡ ಪದಗಳು ಕೇಳಿಸುತ್ತವೆ. ಆದರೆ, ಅಲ್ಲಿ ವಾಸ್ತವಿಕವಾಗಿ ಕಂಡು ಬರುವುದು ಇಂಗ್ಲಿಷ್‌ ಸೇರಿದಂತೆ ಅನ್ಯ ಭಾಷೆಯೇ ಆಗಿದೆ.

ಕನ್ನಡ ಬಳಕೆಯೇ ಇಲ್ಲ: ನಗರದಲ್ಲಿ ಅಂದಾಜು 100ಕ್ಕೂ ಹೆಚ್ಚು ತಾರಾ ಹೋಟೆಲ್‌ಗ‌ಳಿವೆ. ಅವುಗಳ ಹೊರಗಿನ ನಾಮಫ‌ಲಕ ಬಿಟ್ಟರೆ ಉಳಿದದ್ದೆಲ್ಲವೂ ಅನ್ಯ ಭಾಷೆಯೇ. ಆ ಹೋಟೆಲ್‌ಗ‌ಳಲ್ಲಿ ಸಹಾಯಕ್ಕೆ ವಿವಿಧ ಭಾಷೆಬಲ್ಲ ಸಹಾಯಕರನ್ನು ಇಟ್ಟಿರುತ್ತಾರೆ. ಅವರಿಗೆ ಕನ್ನಡ ಹೊರತು ಪಡಿಸಿ ಮಿಕ್ಕೆಲ್ಲಾ ಭಾಷೆ ಬರುತ್ತದೆ. ಬಹುತೇಕ ಹೋಟೆಲ್‌ಗ‌ಳಲ್ಲಿ ಕನ್ನಡ ಬಳಕೆಯೇ ಇಲ್ಲದಂತಾಗಿದೆ. ಅನ್ಯ ಭಾಷೆಯ ಆದ್ಯತೆಯೇ ಹೆಚ್ಚಿದೆ. ಕನ್ನಡ ಕುರಿತು ಪ್ರಶ್ನಿಸಿದರೆ ಹೊರ ಭಾಗದವರು ಹೆಚ್ಚು ಬರುತ್ತಾರೆ, ಹೀಗಾಗಿ, ಕನ್ನಡ ಅವಶ್ಯಕತೆ ಕಡಿಮೆ ಎನ್ನುತ್ತಾರೆ ಕೆಲ ಹೋಟೆಲ್‌ ಸಿಬ್ಬಂದಿ. ವಿಚಿತ್ರವೆಂದರೆ ಆ ಸಿಬ್ಬಂದಿಗೆ ಕನ್ನಡವೇ ಬರುವುದಿಲ್ಲ! “ಪಂಚತಾರಾ ಹೋಟೆಲ್‌ಗ‌ಳಲ್ಲಿ ಕನ್ನಡ ಬಿಟ್ಟು ಎಲ್ಲವೂ ಸಿಗುತ್ತದೆ. ನಾಡಿನ ಭಾಷೆಯನ್ನು, ಸಂಸ್ಕೃತಿಯನ್ನು ಇಂಥ ಸ್ಥಳಗಳಲ್ಲಿ ಬಳಸಿದಾಗ ಮಾತ್ರ ಕನ್ನಡ ಬೆಳೆಯಲು, ಇತರರಿಗೆ ಪರಿಚಯವಾಗುತ್ತದೆ’ ಎನ್ನುತ್ತಾರೆ ಕನ್ನಡ ಮೂಲದ ವಿದೇಶಿ ನಿವಾಸಿ ಕೃಷ್ಣಕಾಂತ್‌.

ಆಚರಣೆಗಷ್ಟೇ ಸೀಮಿತ: ಬಹುತೇಕ ಮಾಹಿತಿ ತಂತ್ರಜ್ಞಾನ (ಐಟಿ) ಸಂಸ್ಥೆ, ಕೇಂದ್ರ ಸರ್ಕಾರ ಮೂಲದ ಸಾರ್ವಜನಿಕ ಸೇವಾ ಸಂಸ್ಥೆಗಳಲ್ಲಿ ಕನ್ನಡ ನವೆಂಬರ್‌ 1 ರಂದು ಮಾತ್ರ ಆಚರಣೆ ಸೀಮಿತವಾಗಿದೆ. ಅಂದು ಸಂಸ್ಥೆಯ ಕನ್ನಡ ಸಿಬ್ಬಂದಿ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ ಇತ್ಯಾದಿಗಳನ್ನು ಕೈಗೊಳ್ಳುತ್ತಾರೆ. ಆ ನಂತರ ಕನ್ನಡ ನೆನಪಾಗುವುದು ಮತ್ತೆ ನವೆಂಬರ್‌ ಒಂದರಂದೇ. ಕನ್ನಡ ಕಲಿಕಾ ಶಿಬಿರ, ತರಬೇತಿ ನಡೆಸುವುದಿಲ್ಲ. ಕೆಲವರಿಗೆ ಕನ್ನಡ ಕಲಿಕೆ ಆಸಕ್ತಿ ಇದ್ದರೂ, ಅಗತ್ಯತೆ ಏನಿದೆ ಎಂದು ಕೇಳಿ ಕಲಿಯಲು ಅವಕಾಶ ನೀಡುವುದಿಲ್ಲ.

ಇಲ್ಲಿ ಕನ್ನಡಿಗರೇ ಅನ್ಯರಂತಾಗುತ್ತಾರೆ! : ಬೆಂಗಳೂರು ನಗರದ ಕೆಲ ಪ್ರದೇಶಗಳಿಗೆ ಹೋದರೆ ಇಂದಿಗೂ ಕನ್ನಡಿಗರು ಅನ್ಯರಂತಾಗುತ್ತಾರೆ. ಪ್ರಮುಖವಾಗಿ ಹಳೇ ಮದ್ರಾಸು ಭಾಗಗಳಾದ ಹಲಸೂರು, ಇಂದಿರಾನಗರ, ಆನೆಪಾಳ್ಯ, ಆಸ್ಟಿನ್‌ ಟೌನ್‌, ವಿಕ್ಟೋರಿಯಾ ಲೇಔಟ್‌, ಪ್ರೇಜರ್‌ಟೌನ್‌, ಕಾನ್ಸ್‌ಟೌನ್‌, ಗರುಡಾಚಾರ ಪಾಳ್ಯದಲ್ಲಿ ಹೆಚ್ಚು ತಮಿಳರು ನೆಲೆಸಿದ್ದಾರೆ. ಬಹುತೇಕ ಭಾಗದಲ್ಲಿ ಹೆಚ್ಚು ತಮಿಳನ್ನೇ ಬಳಸಲಾಗುತ್ತದೆ. ಇಲ್ಲಿ ಬಹುತೇಕ ವ್ಯವಹಾರ ವ್ಯಾಪಾರ ನಡೆಯುವುದು ತಮಿಳಿನಲ್ಲೇ. ಹೀಗೆಯೇ ಶಿವಾಜಿನಗರ, ಪಾದರಾಯನಪುರದಲ್ಲಿ ಉರ್ದು, ಮಾರತಹಳ್ಳಿ, ಬೊಮ್ಮನಹಳ್ಳಿ, ಐಟಿಪಿಎಲ್‌, ಕಾಡುಗೋಡಿ, ವೈಟ್‌ಪೀಲ್ಡ್‌, ಮಹಾದೇವಪುರ, ರಾಮಮೂರ್ತಿನಗರ, ಹೆಣ್ಣೂರು, ಕಲ್ಯಾಣ ನಗರಭಾಗಗಳಲ್ಲಿ ತೆಲುಗು ಭಾಷೆ ಹೆಚ್ಚು ಬಳಕೆಯಾಗುತ್ತದೆ. ಹೀಗೆ ಅನ್ಯ ಭಾಷೆ ಹೆಚ್ಚು ಬಳಕೆಯಿಂದ ಅಲ್ಲಿನ ಕನ್ನಡಿಗರಿಗೆ ಅನ್ಯರೇ ಎಂಬ ಕಾಡದೇ ಇರಲಾರದು. ಇನ್ನು ಇಲ್ಲಿನ ಕರ್ನಾಟಕ ತಮಿಳು ಸಂಘ ಸೇರಿದಂತೆ ಅನ್ಯಭಾಷೆಯ ಭಾಷಾ ಸೌಹಾರ್ದ ಸಂಘಗಳು ಹೆಚ್ಚಿನ ಆದ್ಯತೆ ನೀಡುವ ಮೂಲಕ ಅನ್ಯ ಭಾಷಿಕರು ಕನ್ನಡವನ್ನೇ ವ್ಯವಹಾರಿಕ ಭಾಷೆಯಾಗಿ ಬಳಸುವಂತೆ ಮಾಡಬೇಕು ಎನ್ನುತ್ತಾರೆ ಕನ್ನಡ ಪರ ಹೋರಾಟಗಾರರು.

ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಕನ್ನಡ ಬಳಕೆ ಇಂದಿಗೂ ಕಡಿಮೆ ಇದೆ. 20 ವರ್ಷಗಳಿಂದೀಚೆಗೆ ಬೆಂಗಳೂರಿಗೆ ಬಂದ ಅನ್ಯಭಾಷಿಕರಲ್ಲಿ ಕನ್ನಡ ಬಳಕೆ ಕಡಿಮೆ ಇದೆ. ಅವರಿಗೆ ಕನ್ನಡದ ಅನಿವಾರ್ಯತ ಸೃಷ್ಟಿಸಿ ಕಲಿಸುವ ಕೆಲಸವನ್ನು ಸರ್ಕಾರ, ಕನ್ನಡ ಅಭಿವೃದ್ಧಿ ಸಂಸ್ಥೆಗಳಿಂದಾಗಬೇಕು.ಅರುಣ್‌ ಜಾವಗಲ್‌, ಬನವಾಸಿ ಬಳಗ

ಹೆಸರಿಗೆ ರಾಜ್ಯೋತ್ಸವ ಆಚರಿಸುತ್ತಾರೆ ಅಷ್ಟೇ. ಅರ್ಧ ದಿನ ಕನ್ನಡ ಸಾಂಸ್ಕೃತಿಕ ಚಟುವಟಿಕೆ ಮಾಡಲಾಗುತ್ತದೆ. ಇದರಿಂದ ಅನ್ಯ ಭಾಷೆಯ ಅಧಿಕಾರಿಗಳು ಮನೋರಂಜನೆ ತೆಗೆದುಕೊಳ್ಳುತ್ತಾರೆ ಅಷ್ಟೇ. ಯಾವುದೇ ಕಾರಣಕ್ಕೂ ಅನ್ಯಭಾಷಿಕರಿಗೆ ಕನ್ನಡ ಕಲಿಯಲು ಪ್ರೋತ್ಸಾಹಿಸುವುದಿಲ್ಲ. ಸೀಮಿತ ಕನ್ನಡವೇ ಹೆಚ್ಚು.  –ಆನಂದ್‌, ಐಟಿ ಉದ್ಯೋಗಿ

 

-ಜಯಪ್ರಕಾಶ್‌ ಬಿರಾದಾರ್‌

ಟಾಪ್ ನ್ಯೂಸ್

1-eewqewq

UNICEF ಇಂಡಿಯಾಗೆ ಕರೀನಾ ಕಪೂರ್‌ ರಾಯಭಾರಿ

MOdi (3)

Next 5 years ಭ್ರಷ್ಟರಿಗೆ ತಕ್ಕ ಶಾಸ್ತಿ, ನನ್ನ ಬಳಿ ಸ್ವಂತ ಮನೆ ಯೂ ಇಲ್ಲ: ಮೋದಿ

mamata

Sandeshkhali ಪ್ರಕರಣ ಬಿಜೆಪಿಯದ್ದೇ ಪಿತೂರಿ: ಸಿಎಂ ಮಮತಾ ಆಕ್ರೋಶ

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ಮಂಗಳೂರಿನಲ್ಲಿ ಜನಾಕರ್ಷಣೆ ಕೇಂದ್ರವಾದ ರ್‍ಯಾಂಬೊ ಸರ್ಕಸ್‌

ಮಂಗಳೂರಿನಲ್ಲಿ ಜನಾಕರ್ಷಣೆ ಕೇಂದ್ರವಾದ ರ್‍ಯಾಂಬೊ ಸರ್ಕಸ್‌

Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!

Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!

Surathkal ಸೂರಿಂಜೆ ಮೂಡುಬೆಟ್ಟು; ಅಣೆಕಟ್ಟು ಕುಸಿತ, ಕೃಷಿಕರು ಕಂಗಾಲು

Surathkal ಸೂರಿಂಜೆ ಮೂಡುಬೆಟ್ಟು; ಅಣೆಕಟ್ಟು ಕುಸಿತ, ಕೃಷಿಕರು ಕಂಗಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚಿನ್ನದ ನಾಡಿನ ಕಲಾವಿದೆ ವಿದ್ಯಾಶ್ರೀ ಪ್ರತಿಭೆ ಅನಾವರಣ-ನೃತ್ಯಗಂಗಾ ಪ್ರದರ್ಶನ

ಚಿನ್ನದ ನಾಡಿನ ಕಲಾವಿದೆ ವಿದ್ಯಾಶ್ರೀ ಪ್ರತಿಭೆ ಅನಾವರಣ-ನೃತ್ಯಗಂಗಾ ಪ್ರದರ್ಶನ

Theft Case: ನಕಲಿ ಕೀ ಬಳಸಿ ಬ್ಯೂಟಿಷಿಯನ್‌ ಮನೆಗೆ ಕನ್ನ

Theft Case: ನಕಲಿ ಕೀ ಬಳಸಿ ಬ್ಯೂಟಿಷಿಯನ್‌ ಮನೆಗೆ ಕನ್ನ

Arrested: ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ 9 ವರ್ಷ ಬಳಿಕ ಬಂಧನ

Arrested: ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ 9 ವರ್ಷ ಬಳಿಕ ಬಂಧನ

Crime: ರೌಡಿಶೀಟರ್‌ನಿಂದ ಆಟೋ ಚಾಲಕನ ಹತ್ಯೆ

Crime: ರೌಡಿಶೀಟರ್‌ನಿಂದ ಆಟೋ ಚಾಲಕನ ಹತ್ಯೆ

Theft Case: ಕೆಲಸಕ್ಕಿದ್ದ ಮನೆಯಲ್ಲೇ 34 ಲಕ್ಷ ಒಡವೆ ಕದ್ದ ಕಳ್ಳಿ

Theft Case: ಕೆಲಸಕ್ಕಿದ್ದ ಮನೆಯಲ್ಲೇ 34 ಲಕ್ಷ ಒಡವೆ ಕದ್ದ ಕಳ್ಳಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Onion

Onion ರಫ್ತು ನಿಷೇಧ ತೆರವು: ಕಳೆದ ವರ್ಷಕ್ಕಿಂತ ಕಡಿಮೆ ಉತ್ಪಾದನೆ ಸಾಧ್ಯತೆ

1-eewqewq

UNICEF ಇಂಡಿಯಾಗೆ ಕರೀನಾ ಕಪೂರ್‌ ರಾಯಭಾರಿ

MOdi (3)

Next 5 years ಭ್ರಷ್ಟರಿಗೆ ತಕ್ಕ ಶಾಸ್ತಿ, ನನ್ನ ಬಳಿ ಸ್ವಂತ ಮನೆ ಯೂ ಇಲ್ಲ: ಮೋದಿ

mamata

Sandeshkhali ಪ್ರಕರಣ ಬಿಜೆಪಿಯದ್ದೇ ಪಿತೂರಿ: ಸಿಎಂ ಮಮತಾ ಆಕ್ರೋಶ

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.