ಮ್ಯಾನ್ಹೋಲ್ಗೆ ಇಳಿದು ಪೌರಕಾರ್ಮಿಕನಿಂದ ಸ್ವಚ್ಛತೆ
Team Udayavani, Aug 7, 2017, 1:23 PM IST
ಬೆಂಗಳೂರು: ತಲೆಯ ಮೇಲೆ ಮಲ ಹೊರುವ ಹಾಗೂ ಮ್ಯಾನ್ಹೋಲ್ಗೆ ಇಳಿದು ಸ್ವಚ್ಛಮಾಡುವ ಪದ್ಧತಿಯನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದ್ದರೂ, ರಾಜ್ಯ ರಾಜಧಾನಿಯಲ್ಲಿ ಅದಿನ್ನೂ ಜೀವಂತವಾಗಿದೆ.
ಮ್ಯಾನ್ಹೋಲ್ಗಳನ್ನು ಜಟ್ಟಿಂಗ್ ಮತ್ತು ಸಕ್ಕಿಂಗ್ ಯಂತ್ರದ ಮೂಲಕ ಸ್ವಚ್ಛ ಮಾಡಬೇಕು ಎಂಬ ಸ್ಪಷ್ಟ ನಿರ್ದೇಶನ ಇದೆ. ಆದರೂ, ನಗರದಲ್ಲಿ ಪೌರ ಕಾರ್ಮಿಕರು ಮ್ಯಾನ್ಹೋಲ್ಗೆ ಇಳಿದು ಸ್ವಚ್ಛ ಮಾಡುತ್ತಿರುವ ದೃಶ್ಯ ಇಂದಿಗೂ ಕಾಣ ಸಿಗುತ್ತಿದೆ ಎಂದರೆ, ಪ್ರಜ್ಞಾವಂತ ನಾಗರಿಕರು ಹಾಗೂ ಆಡಳಿತ ವ್ಯವಸ್ಥೆ ತಲೆತಗ್ಗಿಸಲೇ ಬೇಕು.
ಶೇಷಾದ್ರಿಪುರಂ ವಾರ್ಡ್ನ ಪೈಪ್ಲೈನ್ ಭಾನುವಾರ ಪೌರ ಕಾರ್ಮಿಕರೊಬ್ಬರು ಮ್ಯಾನ್ಹೋಲ್ ಸ್ವಚ್ಛಮಾಡುಲು ಮ್ಯಾನ್ಹೋಲ್ ಗುಂಡಿಗೆ ಇಳಿದಿದ್ದರು. ಸುಮಾರು 10 ನಿಮಿಷಕ್ಕೂ ಅಧಿಕ ಕಾಲ ಗುಂಡಿಯ ಒಳಗೆ ಇದ್ದು, ಸಂಪೂರ್ಣವಾಗಿ ಸ್ವಚ್ಛಮಾಡಿದ ನಂತರ ಮೇಲೆ ಬಂದರು.
ಸ್ವಚ್ಛ ಮಾಡುವಾಗ ಕೈಗೆ ಗ್ಲೌಸ್ ಬಳಸಬೇಕು ಮತ್ತು ಅದರ ವ್ಯವಸ್ಥೆ ಮಾಡದೇ ಇರುವುದು ಅತ್ಯಂತ ಅಮಾನವೀಯವಾಗಿದೆ. ಈ ಭಾಗದಲ್ಲಿ ಮ್ಯಾನ್ಹೋಲ್ನಿಂದ ಕೊಳಚೆ ನೀರು ಆಗಾಗ ಮೇಲೆ ಬರುತ್ತಿರುತ್ತದೆ. ಈವರೆಗೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.
ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ಪೌರ ಕಾರ್ಮಿಕರೇ ಬಂದು ಇದನ್ನು ಸ್ವಚ್ಛ ಮಾಡುತ್ತಾರೆ. ಕೆಲವೊಮ್ಮೆ ಸಕ್ಕಿಂಗ್ ಅಥವಾ ಜಟ್ಟಿಂಗ್ ಯಂತ್ರ ತರುತ್ತಾರೆ. ಕೆಲವೊಮ್ಮೆ ತರುವುದಿಲ್ಲ. ಬಿಬಿಎಂಪಿಯಿಂದ ಸೂಕ್ತ ಸೌಲಭ್ಯ ನೀಡದೇ ಇರುವುದರಿಂದ ಹೀಗಾಗಿದೆ ಎಂದು ಸ್ಥಳೀಯರು ಆರೋಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
MUST WATCH
ಹೊಸ ಸೇರ್ಪಡೆ
Tragedy: ತನ್ನ ಅಪಾರ್ಟ್ಮೆಂಟ್ನಲ್ಲೇ ನೇಣಿಗೆ ಶರಣಾದ ಭೋಜ್ಪುರಿ ನಟಿ… ಕಾರಣ ನಿಗೂಢ
B.Y. Raghavendra: ಕಾಂಗ್ರೆಸ್ನವರ ಬಳಿ ಗ್ಯಾರಂಟಿ ಅಡ್ವಾನ್ಸ್ ಹಣ ಕೇಳಿ: ಬಿವೈಆರ್
Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ