ಪ್ರಧಾನಿ ಬಳಿ ಮತ್ತೆ ನಿಯೋಗ: ಎಚ್ಕೆ ಪಾಟೀಲ್
Team Udayavani, Jul 22, 2017, 5:10 AM IST
ಬೆಂಗಳೂರು: ಮಹದಾಯಿ ನದಿ ನೀರಿನ ಹಂಚಿಕೆ ವಿಷಯದಲ್ಲಿ ಮಧ್ಯಪ್ರವೇಶಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ್, ಈ ಕುರಿತು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಪ್ರಧಾನಿ ಬಳಿ ನಿಯೋಗ ಕರೆದೊಯ್ಯ ಲಾಗುವುದು ಎಂದು ಹೇಳಿದ್ದಾರೆ.
ಕುಡಿಯುವ ನೀರಿಗಾಗಿ ರೂಪಿಸಲಾಗುತ್ತಿರುವ ಕಳಸಾ – ಬಂಡೂರಿ (ಮಹದಾಯಿ) ಯೋಜನೆಗಾಗಿ ನ್ಯಾಯ ಪಡೆಯಲು ರಾಜ್ಯ ನಿರಂತರವಾಗಿ ಹೋರಾಟ ಮುಂದುವರಿಸಿದೆ. ಆದರೆ ನಡೆಸುತ್ತಿರುವ ಹೋರಾಟ ಒಂದು ರೀತಿಯಲ್ಲಿ ರಾಜಕೀಯದ ಹೋರಾಟವಾಗುತ್ತಿರುವುದು ವಿಪರ್ಯಾಸದ ಸಂಗತಿ. ನ್ಯಾಯ ಮಂಡಳಿಯಿಂದ ನ್ಯಾಯ ಸಿಗದೇ ಇದ್ದಾಗ ಅಂತಿಮವಾಗಿ ಪ್ರಧಾನಿ ಮಧ್ಯಪ್ರವೇಶಿಸಿ ವಿವಾದ ಬಗೆಹರಿಸಬೇಕು. ಆದ್ದರಿಂದ ಸಿಎಂ ನೇತೃತ್ವದಲ್ಲಿ ಮತ್ತೆ ಪ್ರಧಾನಿ ಬಳಿಗೆ ನಿಯೋಗ ತೆಗೆದುಕೊಂಡು ಹೋಗುವುದಾಗಿ ತಿಳಿಸಿದರು.