ಶಂಕರ್ನಾಗ್ ನೆನಪಲ್ಲಿ ಮಾಲ್ಗುಡಿ ಡೇಸ್ ಚಿತ್ರತಂಡ
Team Udayavani, Dec 24, 2019, 3:06 AM IST
ಬೆಂಗಳೂರು: ಶಂಕರ್ನಾಗ್ ಈಗ ಬದುಕಿರುತ್ತಿದ್ದರೆ 65 ವರ್ಷ ತುಂಬುತ್ತಿತ್ತು. ಆದರೆ ಅವರಿಲ್ಲ, ಅವರ ಚಿತ್ರಗಳಿವೆ, ಅವರ ಕನಸುಗಳಿವೆ. ಜತೆಗೆ ಅವರ ನೆನಪುಗಳು ನಮ್ಮ ನಡುವೆ ಇವೆ. ಶಂಕರ್ನಾಗ್ ಎಂದಾಕ್ಷಣ ನೂರಾರು ವಿಷಯಗಳು ಕಣ್ಣ ಮುಂದೆ ಬರುತ್ತವೆ. ಆದರೆ, ಅದರಲ್ಲಿ ಪ್ರಮುಖವಾಗಿ ಕಾಣಸಿಗುವುದು ಮಾಲ್ಗುಡಿ ಡೇಸ್. ಒಂದು ಕೃತಿಗೆ ದೃಶ್ಯ ರೂಪಕೊಟ್ಟು ಅದನ್ನು ಈಡೀ ಜಗತ್ತು ನೋಡುವಂತೆ ಮಾಡಿದವರು ಶಂಕರ್ನಾಗ್.
ಧಾರವಾಹಿ ಬಿಡುಗಡೆ ಆಗಿ 32 ವರುಷ ಸಂದರೂ ಜನ ಅದನ್ನು ಸ್ಮರಿಸುತ್ತಾರೆ. ಅಂದರೆ ಅದು ಶಂಕರ್ನಾಗ್ ಎನ್ನುವ ನಿರ್ದೇಶಕನೊಳಗಿದ್ದ ತಾಂತ್ರಿಕ ಶಕ್ತಿ. ಇದೀಗ ಅದೇ ಶೀರ್ಷಿಕೆಯಿಂದ ವಿಜಯ ರಾಘವೇಂದ್ರರವರು ಮುಖ್ಯ ಭೂಮಿಕೆಯಲ್ಲಿ ಇರುವ ಸಿನಿಮಾ ಬರುತ್ತಿದೆ. ಹಿಂದೆ ಚಿತ್ರೀಕರಣ ಮುಗಿಸಿದ್ದ ಚಿತ್ರ ತಂಡ, ಮೊದಲ ಪೋಸ್ಟರ್ ಬಿಡುಗಡೆ ಮಾಡಿತ್ತು. ಮೊದಲ ಪೋಸ್ಟರ್ನಲ್ಲಿ ವಿಭಿನ್ನ ಗೆಟಪ್ನಲ್ಲಿರುವ ವಿಜಯ ರಾಘವೇಂದ್ರ, 65-70ರ ಆಸುಪಾಸಿನ ಸಾಹಿತಿ ಲಕ್ಷ್ಮೀನಾರಾಯಣ ಮಾಲ್ಗುಡಿ ಆಗಿ ಕಾಣಿಸಿಕೊಂಡಿದ್ದಾರೆ.
ವಿಜಯ ರಾಘವೇಂದ್ರ ಅವರ ಸಿನಿ ಜೀವನದಲ್ಲಿ ದೊಡ್ಡ ತಿರುವು ನೀಡುವ ಚಿತ್ರ ಇದಾಗಲಿದೆ ಎನ್ನುವ ಮಾತುಗಳು ಹರಿದಾಡಲು ಶುರುವಾದವು. ಇದೀಗ ಮಾಲ್ಗುಡಿ ಡೇಸ್ ಚಿತ್ರತಂಡ ಅವರ ಹುಟ್ಟು ಹಬ್ಬದ ಈ ಸಂದರ್ಭದಲ್ಲಿ ಸಿನಿಮಾವನ್ನು ಶಂಕರ್ನಾಗ್ ಅವರಿಗೆ ಅರ್ಪಿಸಿದೆ. ಈ ಮೂಲಕ ಶಂಕರ್ನಾಗ್ರವರಿಗೆ ಅವರ 65ನೇ ಹುಟ್ಟು ಹಬ್ಬದ ಈ ಸಂದರ್ಭದಲ್ಲಿ ಗೌರವವನ್ನು ಸೂಚಿಸಿದೆ. ಮಾಲ್ಗುಡಿ ಡೇಸ್ ಜನಜನಿತವಾಗಲು ಶಂಕರ್ನಾಗ್ ಕಾರಣ ಹಾಗಾಗಿ ಈ ಸಿನಿಮಾದ ಮೂಲಕ ನಾವು ಅವರನ್ನು ನೆನೆಯುತ್ತಿದ್ದೇವೆ ಎಂದಿದೆ ಚಿತ್ರತಂಡ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
MUST WATCH
ಹೊಸ ಸೇರ್ಪಡೆ
ಚನ್ನಮ್ಮನ ಕಿತ್ತೂರು: ಮಹಾನ್ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ