ರಾಜ್ಯ ರಾಜಧಾನಿಯ ಮೂರು ಕಡೆಗಳಲ್ಲಿ ಸರಗಳ್ಳತನ
Team Udayavani, Jan 15, 2018, 11:42 AM IST
ಬೆಂಗಳೂರು: ನಗರದಲ್ಲಿ ಸರಗಳ್ಳರ ಹಾವಳಿ ಮತ್ತೆ ಹೆಚ್ಚಾಗಿದ್ದು, ಸೋಮವಾರ ಬೆಳಿಗ್ಗೆ ನಗರದ 3 ಕಡೆಗಳಲ್ಲಿ ತಮ್ಮ ಕೈ ಚಳಕ ತೋರಿದ್ದಾರೆ.
ಪೀಣ್ಯದ 2ಕಡೆ ಹಾಗೂ ಬಾಗಲಗುಂಟೆಯಲ್ಲಿ ಸರಗಳ್ಳತನ ಮಾಡಿ ಪರಾರಿಯಾಗಿದಾದ್ದರೆ. ಬಾಗಲಗುಂಟೆಯಲ್ಲಿ ಸೌಂಗಧಿಕ ಎಂಬುವವರ ಚಿನ್ನದ ಸರವನ್ನು ಕಳವು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಪೀಣ್ಯ ಎಚ್ಎಂಟಿ ಲೇಔಟ್ನಲ್ಲಿ ನ್ಪೆಕ್ಟರ್ ಪತ್ನಿ ಗಂಗಮ್ಮ ಅವರು ಮನೆ ಮುಂದೆ ನೀರು ಹಾಕಿ ಮನೆ ಒಳಗೆ ಬರುವಾಗ ಹಿಂಬದಿಯಿಂದ ಬಂದ ಕಳ್ಳ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದಾನೆ.
ಆರೋಪಿಗಳಿಗಾಗಿ ಪೀಣ್ಯ, ಬಾಗಲಗುಂಟೆ ಪೊಲೀಸರಿಂದ ಶೋಧಕಾರ್ಯ ನಡೆಯುತ್ತಿದೆ.