ನಾದೋಪಾಸನ ಸಂಸ್ಥೆಯಿಂದ ಸಂಗೀತ ಕಾರ್ಯಕ್ರಮ
Team Udayavani, Jun 5, 2018, 11:50 AM IST
ಬೆಂಗಳೂರು: ನಗರದ ಅನಂದರಾವ್ ವೃತ್ತದ ಬಳಿಯಿರುವ ಕೆಇಬಿ ಎಂಜಿನಿಯರ್ ಅಸೋಸಿಯೇಷನ್ನಲ್ಲಿ ಭಾನುವಾರ ನಾದೋಪಾಸನ ಸಂಗೀತ ಸಂಸ್ಥೆಯಿಂದ ವೃದ್ಧರು, ಅಂಧರು, ಅನಾಥರು ಹಾಗೂ ವಿಕಲಚೇತನರ ಸಹಾಯಾರ್ಥ ಮುಖ್ಯ ಇಂಜಿನಿಯರ್ ಡಿ. ಉದಯಶಂಕರ್ ಹಾಗೂ ಅವರ ತಂಡದಿಂದ “ಒಳಿತು ಮಾಡು ಮನುಜ’ ಶೀರ್ಷಿಕೆಯಡಿ ಸಂಗೀತ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ವಿಕಲಚೇತನರು, ವೃದ್ಧರು, ಅಂಧರು, ಅನಾಥರು ಉದ್ಘಾಟಿಸಿದ್ದು ವಿಶೇಷವಾಗಿತ್ತು. ಅಪಾರ ಸಂಖ್ಯೆಯ ಪ್ರೇಕ್ಷಕರು ನೆರೆದಿದ್ದ ಕಾರ್ಯಕ್ರಮದಲ್ಲಿ ಗಾಯಕ ಡಿ. ಉದಯಶಂಕರ್ ಅವರಿಗೆ ಕೆ. ಮೋಹನ್, ಸಿ.ಆರ್. ಮಹೇಶ್ ಕುಮಾರ್, ಗುರುರಾಜ್ ಅಳ್ಳಗಿ, ಅರ್.ವಿಶ್ವನಾಥ್, ಎಂ.ಜಿ.ರಮಾದೇವಿ, ಡಿ.ಜ್ಯೋತಿ, ಎ.ವರ್ಷಾ ಪ್ರಭು ಹಾಗೂ ಜಿ.ಬಿ.ಜೈತ್ರ ಸಾಥ್ ನೀಡಿದರು.
ಚಲನಚಿತ್ರ ನಿರ್ದೇಶಕ ರಘುವರ್ಧನ್ ರಚಿಸಿ, ನಿರ್ದೇಶಿಸಿದ ಶೀರ್ಷಿಕೆ ಗೀತೆಗೆ ಅಪಾರ ಮೆಚ್ಚುಗೆ ವ್ಯಕ್ತವಾಯಿತು. ಲೋಕೋಪಯೋಗಿ ಮತ್ತು ಜಲಸಂಪನ್ಮೂಲ ಇಲಾಖೆಗಳ ಎಂಜಿನಿಯರುಗಳು ಭಾವಗೀತೆ, ಚಲನಚಿತ್ರ ಗೀತೆಗಳನ್ನು ಹಾಡುವ ಮೂಲಕ ಸಂಗೀತ ಲಹರಿ ಹರಿಸಿದರು. ಸಾಮಾಜಿಕ ಕಳಕಳಿಯ ಕಾರ್ಯಕ್ರಮಕ್ಕೆ ಸಹಸ್ರಾರು ಸಂಗೀತ ಪ್ರಿಯರು ಸಾಕ್ಷಿಯಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
MUST WATCH
ಹೊಸ ಸೇರ್ಪಡೆ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ