ರೂಪಾಂತರಕ್ಕೆ ನಲುಗಿದ ಪಾದರಾಯನಪುರ

1980ರ ಬಳಿಕ ಜನಸಂಖ್ಯೆಯಲ್ಲಿ ಬದಲಾವಣೆ

Team Udayavani, Apr 26, 2020, 10:36 AM IST

ರೂಪಾಂತರಕ್ಕೆ ನಲುಗಿದ ಪಾದರಾಯನಪುರ

ಬೆಂಗಳೂರು: ಕೋವಿಡ್ 19 ಸೋಂಕಿತರೊಂದಿಗೆ ಸಂಪರ್ಕವಿದ್ದ ಶಂಕಿರತನ್ನು ಕ್ವಾರೆಂಟೈನ್‌ಗೆ ಒಳಪಡಿಸುವ ಪ್ರಕ್ರಿಯೆಯಲ್ಲಿ ನಡೆದ ಸಂಘರ್ಷದಿಂದಾಗಿ ಪಾದರಾಯನಪುರ ರಾಜ್ಯ ಮಾತ್ರವಲ್ಲದೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಹಳ್ಳಿ ಸೊಗಡಿನ ಜತೆಗೆ ಸಾಂಸ್ಕೃತಿಕವಾಗಿಯೂ ಗಮನ ಸೆಳೆದಿದ್ದ ಪಾದರಾಯನಪುರ ಈಚಿನ ದಶಕಗಳಲ್ಲಿ ಸಾಕಷ್ಟು ರೂಪಾಂತರವಾಗಿದೆ.

ಜಗಜೀವನರಾಮ್‌ ನಗರಕ್ಕೆ ಹೊಂದಿಕೊಂಡಂತೆ ಪೊಲೀಸ್‌ ಠಾಣೆಯ ಸ್ವಲ್ಪ ದೂರದ ಸ್ಥಳದಿಂದ ಆರಂಭವಾಗುವ ಪಾದರಾಯನಪುರ ರೈಲ್ವೆ ಹಳಿವರೆಗೆ ಹಾಗೂ ಇನ್ನೊಂದೆಡೆ ಮೈಸೂರು ರಸ್ತೆವರೆಗೂ ವಿಸ್ತರಿಸಿದೆ. 1980ರ ದಶಕದವರೆಗೂ ಪಾದರಾಯನಪುರ ಹಳ್ಳಿ ಪ್ರದೇಶವಾಗೇ ಉಳಿದಿತ್ತು. ಸಾಕಷ್ಟು ಗೋಮಾಳ, ಹುಲ್ಲುಗಾವಲು ಇದ್ದ ಕಾರಣ ಹೈನುಗಾರಿಕೆ ಪ್ರಮುಖ ವೃತ್ತಿಯಾಗಿತ್ತು ಎಂದು ಸ್ಥಳೀಯ ಹಿರಿಯರು ನೆನಪಿಸಿಕೊಳ್ಳುತ್ತಾರೆ. ಸಂಕ್ರಾಂತಿ, ರಾಮನವಮಿ, ನವರಾತ್ರಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿತ್ತು.

ಕ್ರಮೇಣ ಹುಲ್ಲುಗಾವಲು, ಗೋಮಾಳ ಕಡಿಮೆಯಾಗುತ್ತಿದ್ದಂತೆ ಹೈನುಗಾರಿಕೆಯೂ ತಗ್ಗಿತು. ನಗರೀಕರಣ ಹೆಚ್ಚಾದಂತೆ ಅದನ್ನೇ ನೆಚ್ಚಿಕೊಂಡಿದ್ದ ಒಕ್ಕಲಿಗರು ಸೇರಿದಂತೆ ಇತರೆ ಸಮುದಾಯವರು ಇತರೆ ಪ್ರದೇಶಗಳತ್ತ ಮುಖ ಮಾಡಿದರು ಎಂದು ಹೇಳುತ್ತಾರೆ.

ಆಂಜನೇಯನ ಪಾದದ ಗುರುತಿನ ಐತಿಹ್ಯ: ಆಂಜನೇಯನ ಪಾದದ ಗುರುತಿನ ಕಾರಣಕ್ಕೆ ಈ ಪ್ರದೇಶಕ್ಕೆ ಪಾದರಾಯನಪುರ ಎಂಬ ಹೆಸರು ಬಂದಿತು ಎಂಬ ಮಾತಿದೆ. ಅದಕ್ಕೆ ಪುಷ್ಠಿàಕರಿಸುವಂತೆ ಪಾದದ ಗುರುತಿರುವ ಸ್ಥಳದಿಂದ ಸ್ವಲ್ಪ ದೂರದಲ್ಲಿ ಕೋದಂಡರಾಯ ದೇಗುಲವಿದೆ. ವರ್ಷಕ್ಕೊಮ್ಮೆ ಕಲ್ಯಾಣೋತ್ಸವ ಭರ್ಜರಿಯಾಗಿ ನಡೆಯುತ್ತಿತ್ತು. ದೇವಾಲಯದ ಸಮೀಪದಲ್ಲೇ ಕಲ್ಯಾಣೋತ್ಸವ ನಡೆಯುತ್ತಿದ್ದ ಸ್ಥಳ ಈಗಲೂ ಖಾಲಿ ಜಾಗವಾಗಿ ಉಳಿದಿರುವುದನ್ನು ಕಾಣಬಹುದು ಎನ್ನುತ್ತಾರೆ ಸ್ಥಳೀಯರಾದ ಎಂ.ಬಿ. ಆದಿನಾರಾಯಣ.

ಇನ್ನೊಂದೆಡೆ 1980ರಲ್ಲಿ ಚಾಮರಾಜಪೇಟೆ ಹಾಗೂ 1991ರಲ್ಲಿ ರಾಮನಗರದಲ್ಲಿ ನಡೆದ ಗಲಭೆಗೂ ಪಾದರಾಯನಪುರ ಜನಸಂಖ್ಯೆ ಏರುಪೇರಿಗೂ ನಂಟಿದೆ ಎಂಬ ಮಾತಿದೆ. ಜತೆಗೆ ಕೆಲ ಬೆಳವಣಿಗೆಗಳು ಆ ಪ್ರದೇಶದ ಸ್ವರೂಪವನ್ನೇ ಬದಲಿಸಿದವು ಎನ್ನಲಾಗಿದೆ. ಒಟ್ಟಾರೆ ನಾಲ್ಕೈದು ದಶಕಗಳಲ್ಲಿ ಪಾದರಾಯನಪುರದಲ್ಲಿ ನೆಲೆಸಿರುವ ಸಮುದಾಯಗಳ ಸಂಖ್ಯೆಯಲ್ಲಿ ಏರುಪೇರಾಗುತ್ತಿರುವುದು ಚರ್ಚೆಗೆ ಗ್ರಾಸವಾಗುತ್ತಿದೆ.

ನಾಲ್ಕೈದು ದಶಕದ ಹಿಂದೆ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಜತೆಗೆ ದಲಿತರು, ಇತರೆ ಸಮುದಾಯವರಿದ್ದರು ಎಂದು ಹಿರಿಯರು ಹೇಳುತ್ತಾರೆ. 1980ರ ದಶಕದಲ್ಲಿ ಚಾಮರಾಜಪೇಟೆ ಹಾಗೂ 1991ರಲ್ಲಿ ರಾಮನಗರದಲ್ಲಿ ನಡೆದ ಗಲಭೆ ಬಳಿಕ ಪಾದರಾಯನಪುರದ ಜನಸಂಖ್ಯೆಯಲ್ಲಿ ಏರುಪೇರಾಯಿತು. 1992ರ ಬಾಬರಿ ಮಸೀದಿ ಧ್ವಂಸ ಘಟನೆ, 1994ರಲ್ಲಿ ಉರ್ದು ವಾರ್ತೆ ಸಂಬಂಧ ಗಲಭೆಯಾಗಿತ್ತು. ಆನಂತರ ದೊಡ್ಡ ಪ್ರಮಾಣದಲ್ಲಿ ಗಲಭೆ ನಡೆದ ಉದಾಹರಣೆ ಇಲ್ಲ. ಈ ವರ್ಷಗಳಲ್ಲಿ ಒಂದಿಷ್ಟು ಬದಲಾವಣೆಯಾಗಿವೆ ಎಂದು ಹೇಳುತ್ತಾರೆ.

ಪಾದರಾಯನಪುರವನ್ನು ಹಿಂದೆ ಪಾದರಾಯನಗುಡ್ಡ ಎನ್ನಲಾಗುತ್ತಿತ್ತು. ಒಂದು ಕಲ್ಲಿನ ಮೇಲೆ ಆಂಜನೇಯನ ಪಾದದಗುರುತಿದೆ ಎಂಬುದು ನಂಬಿಕೆ. ಹಾಗಾಗಿ ಅರಳೀಕಟ್ಟೆಯಲ್ಲೇ ಸಣ್ಣ ಗುಡಿ ನಿರ್ಮಾಣವಾಗಿದೆ. ಹೀಗಾಗಿ ಪಾದರಾಯನ ಪುರ ಹೆಸರು ಬಂದಂತಿದೆ. ಆ ಪ್ರದೇಶದಲ್ಲಿ ಈಚಿನ ದಶಕಗಳಲ್ಲಿ ಹಿಂದುಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಜನಸಂಖ್ಯೆಯ ಏರುಪೇರಿನ ಅಧ್ಯಯನಕ್ಕೆ ಪಾದರಾಯನಪುರ ಒಂದು ಮಾದರಿ.  ವಾದಿರಾಜ, ಸಾಮಾಜಿಕ ಕಾರ್ಯಕರ್ತ

ಪಾದರಾಯನಪುರದ ಇತಿಹಾಸದ ಬಗ್ಗೆ ದಾಖಲೆಗಳಿಲ್ಲ. ಪಾದರಾಯನಪುರ, ಪಂತರಪಾಳ್ಯ, ದೀವಟಿಗೆ ರಾಮನಹಳ್ಳಿ ಸೇರಿದಂತೆ ಇತರೆ ಪ್ರದೇಶಗಳನ್ನು ಹಿಂದೆ ಮರಾಠ ಭಾಷಿಗರು ಖರೀದಿಸಿದ್ದರು ಎಂದು ದಾಖಲೆಯಲ್ಲಿದೆ. ಹಾಗಾಗಿ ಪಾದರಾಯನಪುರದಲ್ಲಿ ಶ್ರೀರಾಮ, ಆಂಜನೇಯಸ್ವಾಮಿಯ ಪಾದಗಳಿದ್ದ ಬಗ್ಗೆ ಮಾಹಿತಿ ಇಲ್ಲ. ದೇವರಕೊಂಡಾರೆಡ್ಡಿ, ಶಾಸನತಜ್ಞ

 

ಎಂ. ಕೀರ್ತಿಪ್ರಸಾದ್‌

ಟಾಪ್ ನ್ಯೂಸ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.