ಕುಖ್ಯಾತ ಸರಗಳ್ಳರು ಪೊಲೀಸರ ಬಲೆಗೆ
Team Udayavani, Feb 3, 2017, 11:37 AM IST
ಬೆಂಗಳೂರು: ಸರಗಳ್ಳತನ ಮತ್ತು ದರೋಡೆ ಪ್ರಕರಣದಲ್ಲಿ ಶಾಮೀಲಾಗಿದ್ದ ನಾಲ್ವರನ್ನು ಜಯನಗರ ಉಪವಿಭಾಗದ ಅಪರಾಧ ಪತ್ತೆದಳ ಪೊಲೀಸರು ಬಂಧಿಸಿದ್ದಾರೆ. ಬಿಟಿಎಂ ಬಡಾವಣೆಯ ರಾಹುಲ್ ಅಲಿಯಾಸ್ ಜಾಕ್, ಜಿಗಣಿಯ ಸುದರ್ಶನ್, ಎಲೆಕ್ಟ್ರಾನಿಕ್ ಸಿಟಿ ನಿವಾಸಿ ವೆಂಕಟೇಶ ಹಾಗೂ ಸೂರ್ಯ ಬಂಧಿತ ಆರೋಪಿಗಳು.
ಲಾಲ್ಬಾಗ್ ವೆಸ್ಟ್ಗೇಟ್ ಸಮೀಪದ ಕಾವೇರಿ ಪೆಟ್ರೋಲ್ ಬಂಕ್ ಹತ್ತಿರ ಸರಗಳ್ಳತನ, ದರೋಡೆ ಮತ್ತು ಬೈಕ್ ಕಳ್ಳತನ ಮಾಡಿದ್ದ ಆರೋಪ ಇವರ ಮೇಲಿದೆ. ಕಳ್ಳತನ ಮಾಡಿದ್ದ ಬೈಕ್ಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಅವರನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ 4.80 ಲಕ್ಷ ರೂ. ಮೌಲ್ಯದ 160 ಗ್ರಾಂನ ಚಿನ್ನದ ಸರಗಳು, ಆರು ಸಾವಿರ ನಗದು, ಚಂದಾಪುರದ ಸೂರ್ಯನಗರದಲ್ಲಿ ಕಳ್ಳತನ ಮಾಡಿದ್ದ 45 ಸಾವಿರ ರೂ. ಮೌಲ್ಯದ ಬೈಕ್ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಆರೋಪಿಗಳ ವಿರುದ್ಧ ಬಸವನಗುಡಿ ಠಾಣೆಯಲ್ಲಿ 5 ಪ್ರಕರಣ, ಬನಶಂಕರಿ ಮತ್ತು ಸಿದ್ಧಾಪುರ ಠಾಣೆಗಳಲ್ಲಿ ತಲಾ 2, ಜೆಪಿನಗರ, ಸೂರ್ಯನಗರದಲ್ಲಿ ತಲಾ ಒಂದು ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.