ಸಿಲಿಕಾನ್‌ ಸಿಟಿಗಿಲ್ಲ ಉಚಿತ ವೈ-ಫೈ!


Team Udayavani, Jul 26, 2018, 12:09 PM IST

silicon.jpg

ಬೆಂಗಳೂರು: ರಾಜಧಾನಿ ಬೆಂಗಳೂರಿನ ಜನತೆಗೆ ಉಚಿತ ಇಂಟರ್‌ನೆಟ್‌ ಸೇವೆ ಒದಗಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ “ಉಚಿತ ಬೆಂಗಳೂರು ವೈ-ಫೈ’ ಯೋಜನೆಗೆ ಆರಂಭದಲ್ಲೇ ಹಿನ್ನಡೆಯಾಗಿದ್ದು, ಉಚಿತ ಇಂಟರ್‌ನೆಟ್‌ ಸೇವೆ ನೀಡಲು ಟೆಲಿಕಾಂ ಸಂಸ್ಥೆಗಳು ಹಿಂದೇಟು ಹಾಕಿವೆ.

ಬೆಂಗಳೂರಿನ 400 ಕಡೆ ವೈ-ಫೈ “ಸ್ಮಾರ್ಟ್‌ಪೋಲ್‌’ ಅಳವಡಿಸಿ, ಜನರಿಗೆ ಉಚಿತ ಇಂಟರ್‌ನೆಟ್‌ ಸೇವೆ ಒದಗಿಸುವುದು ಸರ್ಕಾರದ ಯೋಜನೆಯಾಗಿತ್ತು. ಆದರೆ, ಸರ್ಕಾರದ ಆಶಯಕ್ಕೆ ಪೂರಕವಾಗಿ ಟೆಲಿಕಾಂ ಸಂಸ್ಥೆಗಳು ಸ್ಪಂದಿಸಿಲ್ಲ.

ಭಾರತದ ಸಿಲಿಕಾನ್‌ ವ್ಯಾಲಿ ಎಂಬ ಖ್ಯಾತಿಗೆ ಪಾತ್ರವಾಗಿರುವ ಬೆಂಗಳೂರಿನಲ್ಲಿ ಪ್ರತಿಯೊಬ್ಬರಿಗೂ ಉಚಿತವಾಗಿ ಇಂಟರ್‌ನೆಟ್‌ ಸೇವೆ ಉಚಿತವಾಗಿ ಒದಗಿಸುವ ಉದ್ದೇಶದಿಂದ ಹಿಂದಿನ ಸರ್ಕಾರ ಯೋಜನೆ ಘೋಷಿಸಿ, ಅಗತ್ಯ ಸಹಕಾರ ನೀಡುವುದಾಗಿ ಟೆಲಿಕಾಂ ಸಂಸ್ಥೆಗಳಿಗೆ ಭರವಸೆ ನೀಡಿತ್ತು.

ಅದರಂತೆ ಉಚಿತ ಇಂಟರ್‌ನೆಟ್‌ ಸೇವೆ ಒದಗಿಸುವ ಸಂಸ್ಥೆಗಳಿಗೆ ಪಾಲಿಕೆ ವ್ಯಾಪ್ತಿಯಲ್ಲಿ ಸ್ಮಾರ್ಟ್‌ಪೋಲ್‌ಗ‌ಳನ್ನು ಅಳವಡಿಸಲು ಸಹಕಾರ ಹಾಗೂ ಅನುಮತಿ ನೀಡುವಂತೆಯೂ ಸರ್ಕಾರ ಬಿಬಿಎಂಪಿಗೆ ನಿರ್ದೇಶನ ನೀಡಿತ್ತು.

ಅದನ್ನು ಗಂಭೀರವಾಗಿ ಪರಿಗಣಿಸಿದ ಬಿಬಿಎಂಪಿ, ಸಂಸ್ಥೆಗೆ ಶೀಘ್ರ ಅನುಮತಿ ನೀಡುತ್ತಿದೆ. ಆದರೆ, ಸರ್ಕಾರದಿಂದ ನಿಗದಿಗೊಳಿಸಿದ ನಾಲ್ಕು ಸಂಸ್ಥೆಗಳ ಪೈಕಿ ಒಂದು ಸಂಸ್ಥೆ ಮಾತ್ರ ಸ್ಮಾರ್ಟ್‌ಪೋಲ್‌ ಅಳವಡಿಸಲು ಅನುಮತಿ ಪಡೆದಿದೆ.

60 ಕಡೆ ಪೋಲ್‌ ಅಳವಡಿಕೆ: ನಗರದ 5,938 ಕಡೆಗಳಲ್ಲಿ ಉಚಿತ ವೈ-ಫೈ ಸೇವೆ ಒದಗಿಸಲು ಹಾಟ್‌ಸ್ಪಾಟ್‌ಗಳ ಸೃಷ್ಟಿಗಾಗಿ ಇಂಡಸ್‌ ಟವರ್, ಹನಿಕಾಂಬ್‌, ಡಿ-ವೊಯಾಸ್‌ ಹಾಗೂ ಎಸಿಟಿ ಟೆಲಿಕಾಂ ಸಂಸ್ಥೆಗಳಿಗೆ ಅನುಮತಿ ನೀಡುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ.

ಆದರೆ, ಇಂಡಸ್‌ ಟವರ್ ಸಂಸ್ಥೆ ಮಾತ್ರ ಈವರೆಗೆ ನಗರದ 60 ಕಡೆ ಸ್ಮಾರ್ಟ್‌ಪೋಲ್‌ಗ‌ಳನ್ನು ಅಳವಡಿಸಲು ಪಾಲಿಕೆಯ ಒಎಫ್ಸಿ ವಿಭಾಗದಿಂದ ಅನುಮತಿ ಪಡೆದಿದ್ದು, ಈಗಾಗಲೇ ಹಲವಾರು ಕಡೆಗಳಲ್ಲಿ ಪೋಲ್‌ ಅಳವಡಿಸಿದೆ.

ಪೋಲ್‌ ಇದೆ, ಇಂಟರ್‌ನೆಟ್‌ ಇಲ್ಲ: ಬಿಬಿಎಂಪಿ ಕೇಂದ್ರ ಕಚೇರಿ, ರಾಜಭವನ ರಸ್ತೆ, ಕಸ್ತೂರಬಾ ರಸ್ತೆ ಸೇರಿ ನಗರದ ಹತ್ತಾರು ಕಡೆ ಇಂಡಸ್‌ ಟವರ್ ಸಂಸ್ಥೆ ಉಚಿತ ವೈ-ಫೈ ಸ್ಮಾರ್ಟ್‌ಪೋಲ್‌ಗ‌ಳನ್ನು ಅಳವಡಿಸಿದ್ದು, ಪೋಲ್‌ಗ‌ಳ ಬಳಿ ಸಾರ್ವಜನಿಕರು ವೈ-ಫೈ ಆನ್‌ ಮಾಡಿಕೊಂಡರೆ “ಬೆಂಗಳೂರು ವೈ-ಫೈ’ ಎಂದು ತೋರಿಸುತ್ತದೆ. ಜತೆಗೆ ಇಂಟರ್‌ನೆಟ್‌ ಕನೆಕ್ಟ್ ಆಗಿದೆ ಎಂದು ತೋರಿಸುತ್ತದೆ. ಆದರೆ, ಇಂಟರ್‌ನೆಟ್‌ ಮಾತ್ರ ಲಭ್ಯವಾಗುತ್ತಿಲ್ಲ. ಇದು ಸಾರ್ವಜನಿಕರ ಟೀಕೆಗೆ ಕಾರಣವಾಗಿದೆ.

ಟೆಲಿಕಾಂ ಸಂಸ್ಥೆಗಳ ನಿರಾಸಕ್ತಿಗೆ ಕಾರಣವೇನು?: ಸ್ಮಾರ್ಟ್‌ಪೋಲ್‌ ಅಳವಡಿಸುವ ಸಂಸ್ಥೆ ಪ್ರತಿ ಪೋಲ್‌ಗೆ 62,000 ರೂ. ಒಎಫ್ಸಿ ಶುಲ್ಕವನ್ನು ಪಾಲಿಕೆಗೆ ಪಾವತಿಸಬೇಕು. ಇದರೊಂದಿಗೆ ಶೇ.18ರಷ್ಟು ಜಿಎಸ್‌ಟಿ ಸೇರಿ ಪ್ರತಿ ಪೋಲ್‌ಗೆ ಒಟ್ಟು 73,160 ರೂ. ಪಾವತಿಸಿದರೆ ಐದು ವರ್ಷಗಳ ಅವಧಿಗೆ ಅನುಮತಿ ನೀಡಲಾಗುತ್ತಿದೆ. ಪೋಲ್‌ ಅಳವಡಿಕೆ ಶುಲ್ಕ ದುಬಾರಿಯಾದ ಕಾರಣ ಟೆಲಿಕಾಂ ಸಂಸ್ಥೆಗಳು ಉಚಿತ ವೈ-ಫೈ ಸೇವೆ ಒದಗಿಸಲು ಹಿಂದೇಟು ಹಾಕುತ್ತಿವೆ ಎನ್ನಲಾಗುತ್ತಿದೆ.

ಯಾವ ಸಂಸ್ಥೆಗೆ ಅವಕಾಶ ನೀಡಬೇಕು ಂಬುದನ್ನು ಮಾಹಿತಿ ತಂತ್ರಜ್ಞಾನ ಇಲಾಖೆಯೇ ನಿರ್ಧಾರಿಸುತ್ತದೆ. ಅನುಮತಿ ನೀಡುವ ಕೆಲಸ ಮಾತ್ರ ಪಾಲಿಕೆಯದ್ದು. ಈಗಾಗಲೇ ಹಲವಾರು ಸಂಸ್ಥೆಗಳು ಅನುಮತಿ ಪಡೆಯಲು ಮುಂದೆ ಬಂದಿವೆ. ಸಚಿವರು ಸಹ ಈ ಕುರಿತು ಸಭೆ ನಡೆಸಿದ್ದಾರೆ.
-ಎನ್‌.ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತ

ಹಾಟ್‌ಸ್ಪಾರ್ಟ್‌ ಅನುಮತಿ
-ಇಂಡಸ್‌ ಟವರ್    140 
-ಹಾನಿ ಕಾಂಬ್‌    2516 
-ಡಿ-ವೊಯಾಸ್‌    2516 
-ಎಸಿಟಿ    766 
-ಒಟ್ಟು    5938

* ವೆಂ.ಸುನೀಲ್‌ ಕುಮಾರ್‌

ಟಾಪ್ ನ್ಯೂಸ್

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.