ಜೀತ ವಿಮೋಚನೆ, ಕಾನೂನು ಹೋರಾಟದ ಚಿಂತನ-ಮಂಥನ
Team Udayavani, May 3, 2019, 10:31 AM IST
ಬೆಂಗಳೂರು: ಅದು ಜೀತ ಇದ್ದವರು ಮತ್ತು ಅವರನ್ನು ಬಿಡುಗಡೆ ಮಾಡಿದವರ ವೇದಿಕೆ. ಸಮಾಜದಲ್ಲಿ ವಿವಿಧ ಕಾರಣಗಳಿಗಾಗಿ ಜೀತ ಎಂಬ ಅನಿಷ್ಟ ಪದ್ಧತಿಯಲ್ಲಿ ಸಿಲುಕಿ ಒದ್ದಾಡುತ್ತಿರುವವರ ವಿಮೋಚನೆ ಹೇಗೆ? ಇರುವ ಕಾನೂನುಗಳು ಏನು? ಸಂಘಟನಾತ್ಮಕ ಹೋರಾಟಗಳ ರೂಪುರೇಷೆ ಮತ್ತಿತರ ವಿಷಯಗಳ ಕುರಿತು ಚಿಂತನ-ಮಂಥನ ಅಲ್ಲಿ ನಡೆಯುತ್ತಿತ್ತು.
ನಗರದ ನಾಗರಬಾವಿಯಲ್ಲಿರುವ ಜೀವಿಕ (ಜೀತ ವಿಮುಕ್ತಿ ಕರ್ನಾಟಕ) ಸಂಸ್ಥೆಯ ಆವರಣದಲ್ಲಿ ಗುರುವಾರ ಕಾರ್ಮಿಕ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಸುಮಾರು ರಾಜ್ಯದ ಸುಮಾರು 20-22 ತಾಲ್ಲೂಕುಗಳಿಂದ ಆಗಮಿಸಿದ್ದ ಜೀತದಿಂದ ಬಿಡುಗಡೆ ಹೊಂದಿದವರು ಮತ್ತು ಅದಕ್ಕಾಗಿ ಶ್ರಮಿಸಿದ ಕಾರ್ಯಕರ್ತರು ಭಾಗವಹಿಸಿದ್ದರು. ಸಮಾಜ ಸಾಕಷ್ಟು ಮುಂದುವರಿದಿದ್ದರೂ ಸಾವಿರಾರು ಜನ ಈಗಲೂ ಜೀತದಾಳುಗಳಾಗಿದ್ದಾರೆ. ಅವರಿಗೆ ಬಿಡುಗಡೆ ಭಾಗ್ಯ ಕಲ್ಪಿಸಲು ಸಂಘಟಿತ ಹೋರಾಟ ನಡೆಸಬೇಕು ಎಂಬ ಒಕ್ಕೊರಲ ಕೂಗು ಸಭೆಯಲ್ಲಿ ಕೇಳಿಬಂದಿತು.
ಸಂಸ್ಥೆಯ ನಿರ್ದೇಶಕ ಕಿರಣ ಕಮಲ ಪ್ರಸಾದ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸುಮಾರು 70ಕ್ಕೂ ಹೆಚ್ಚು ಕಾರ್ಯಕರ್ತರು ನೆರೆದಿದ್ದರು. ಅಲ್ಲದೆ, ಇದೇ ವೇಳೆ ವರ್ಷಗಳಿಗೊಮ್ಮೆ ನಡೆಯುವ ಕರ್ನಾಟಕ ಜೀತದಾಳು ಮತ್ತು ಕೃಷಿ ಕಾರ್ಮಿಕರ ಒಕ್ಕೂಟಕ್ಕೆ ರಾಜ್ಯಮಟ್ಟದ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಯಿತು. ಅದರಲ್ಲಿ ನರಸಿಂಹಪ್ಪ (ಅಧ್ಯಕ್ಷರು), ಮುತ್ತಯ್ಯ (ಉಪಾಧ್ಯಕ್ಷರು), ಮಂಜುನಾಥ್ (ಕಾರ್ಯದರ್ಶಿ), ದ್ಯಾವಪ್ಪ (ಖಜಾಂಚಿ) ಪದಾಧಿಕಾರಿಗಳಾಗಿ ಆಯ್ಕೆಯಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ