ತಂತ್ರಜ್ಞಾನ ಬಳಕೆಯಲ್ಲಿ ರಾಜ್ಯ ಮುಂದೆ
Team Udayavani, Jul 10, 2018, 11:40 AM IST
ಕೆ.ಆರ್.ಪುರ: ಹೆಚ್ಚು ಹೆಚ್ಚು ತಂತ್ರಜ್ಞಾನ ಬಳಕೆ ರಾಜ್ಯದ ಅಭಿವೃದ್ಧಿಗೆ ಕಾರಣವಾಗಿದೆ ಎಂದು ಇಸ್ರೇಲ್ ದೇಶದ ಮಾಜಿ ರಾಯಭಾರಿ ಚಕ್ ಮೆನಹಮ್ ಕನಾಫಿ ತಿಳಿಸಿದರು.
ಕೆ.ಆರ್.ಪುರದ ಸಿಲಿಕಾನ್ ಸಿಟಿ ಕಾಲೇಜಿನಲ್ಲಿ ನಡೆದ, “ಕರ್ನಾಟಕ ಮತ್ತು ಇಸ್ರೇಲ್ ಸಹಯೋಗದಲ್ಲಿ ಒದಗುವ ಅವಕಾಶಗಳು’ ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ಜಗತ್ತಿನಲ್ಲಿ ಲಭ್ಯವಿರುವ ಎಲ್ಲ ಸುಧಾರಿತ ತಂತ್ರಜ್ಞಾನಗಳೂ ಕರ್ನಾಟಕದಲ್ಲಿ ಬಳಕೆಯಲ್ಲಿವೆ. ಇದರೊಂದಿಗೆ ಇಸ್ರೇಲ್ನಲ್ಲಿ ಪ್ರಚಲಿತದಲ್ಲಿರುವ ಉನ್ನತ ತಂತ್ರಜ್ಞಾನಗಳನ್ನು ಬೆಂಗಳೂನಲ್ಲಿ ಲಭ್ಯವಾಗಿಸಲು ಇಸ್ರೇಲ್ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದರು.
ಇಸ್ರೇಲ್ ಮತ್ತು ಭಾರತದಲ್ಲಿ ಏಕ ರೀತಿಯ ಹವಾಗುಣ ಇದೆ. ಕರ್ನಾಟಕದಲ್ಲಿನ ಭೂಮಿ ಕೃಷಿಗೆ ಹೆಚ್ಚು ಅನುಕೂಲಕರವಾಗಿದೆ. ಈ ನಿಟ್ಟಿನಲ್ಲಿ ಕೃಷಿ ಕ್ಷೇತ್ರದ ಪ್ರಗತಿಗೆ ಅಗತ್ಯವಿರುವ ತಂತ್ರಜ್ಞಾನಗಳನ್ನು ಇಸ್ರೇಲ್ ಒದಗಿಸಲಿದೆ. ಐಟಿ ಕ್ಷೇತ್ರದಲ್ಲಿ ಹೆಸರು ಮಾಡಿರುವ ಬೆಂಗಳೂರಿಗೆ ಸೈಬರ್ ಸೆಕ್ಯೂರಿಟಿ ತಂತ್ರಜ್ಞಾನ ಅಳವಡಿಸಿಕೊಳ್ಳಲು ಅಗತ್ಯವಿರುವ ನೆರವು ನೀಡುವ ಉದ್ದೇಶ ನಮ್ಮದಾಗಿದೆ ಎಂದರು.
ಇದೇ ವೇಳೆ “ಸೈಬರ್ ಕ್ಷೇತ್ರ ಮತ್ತು ಇಲ್ಲಿನ ಸವಾಲುಗಳು’ ಕುರಿತ ಎರಡನೇ ಸಂಪುಟ ಬಿಡುಗಡೆ ಮಾಡಲಾಯಿತು. ಐಇಟಿಒ ಅಧ್ಯಕ್ಷ ಆಸೀಫ್ ಇಕ್ಬಾಲ್, ಕಾಲೇಜಿನ ಅಧ್ಯಕ್ಷ ಡಾ.ಎಚ್.ಎಂ.ಚಂದ್ರಶೇಖರ್, ನಿರ್ದೇಶಕ ಎಚ್.ಎಂ.ಮುಕುಂದ್, ಪ್ರಿನ್ಸಿಪಾಲ್ ಜ್ಞಾನೇಶ್, ಡಿಎಸ್ಪಿ ಇಂಟಲಿಜೆನ್ಸ್ನ ಬಾಬು ಆಂಜಿನಪ್ಪ, ಸಂಶೋಧನಾ ನಿರ್ದೇಶಕಿ ರೋಸ್ ಕವಿತಾ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಬರ್ತ್ ಡೇ ಹೆಸರಲ್ಲಿ ಮಾಡೆಲ್, ಟೆಕ್ಕಿಗಳ ರೇವ್ ಪಾರ್ಟಿ; ಸಿಸಿಬಿ ಪೊಲೀಸರ ದಾಳಿ
Crime: ಜಗಳ ವೇಳೆ ತಳ್ಳಿದಾಗ ವಿದ್ಯುತ್ ತಂತಿ ಮೇಲೆ ಬಿದ್ದ ಯುವಕ ಸಾವು: 2 ಆರೋಪಿಗಳ ಬಂಧನ
ಇನ್ಸ್ಪೆಕ್ಟರ್ ಹೆಸರಲ್ಲಿ ಸುಲಿಗೆ: ಬೆಸ್ಕಾಂ ಎಂಜಿನಿಯರ್ ಸೆರೆ
Bengaluru: 14 ಲಕ್ಷ ರೂ. ಒಡವೆ ಕದಿದ್ದ ಬಾಲಕ ವಶಕ್ಕೆ
Bengaluru: ಬೆದರಿಸಲು ನೇಣಿಗೆ ಕೊರಳೊಡ್ಡಿದ ಪತಿ ದಿಢೀರ್ ಕುಣಿಕೆ ಬಿಗಿದು ಸಾವು
MUST WATCH
ಹೊಸ ಸೇರ್ಪಡೆ
Rain: ಹಲವು ವರ್ಷಗಳ ನಂತರ ಕೆರೆಗಳಿಗೆ ನೀರು; ರೈತರ ಮೊಗದಲ್ಲಿ ಮಂದಹಾಸ
Kalaburagi; ಕಾನೂನು ಉಲ್ಲಂಘಿಸಿದರೆ ಮುಲಾಜಿಲ್ಲದೆ ಕ್ರಮ: ಸಚಿವ ಪ್ರಿಯಾಂಕ್ ಖರ್ಗೆ
CET Results: ದ್ವಿತೀಯ ಪಿಯುಸಿ 2ನೇ ಪರೀಕ್ಷೆ ಫಲಿತಾಂಶ ನಂತರವೇ ಸಿಇಟಿ ಫಲಿತಾಂಶ
Hubli: ರೌಡಿಶೀಟರ್ ಮೇಲೆ ಗ್ಯಾಂಗ್ ನಿಂದ ಹಲ್ಲೆ; ಪೊಲೀಸರಿಗೆ ಅವಾಜ್ ಹಾಕಿದ ರೌಡಿ
Davanagere ನೇಹಾ-ಅಂಜಲಿ ಹಂತಕರಿಗೆ ಗಲ್ಲು ಶಿಕ್ಷೆ ವಿಧಿಸಿ; ಮಡಿವಾಳ ಸಮಾಜದ ಪ್ರತಿಭಟನೆ