ಕೊಳಚೆ ನೀರಿಗೆ ಲಕ್ಷ ಲಕ್ಷ ಸುರಿಯುವ ರೈತ!

ಕೃಷಿಗಾಗಿ ಕೊಳಚೆ ನೀರು ಖರೀದಿಸುತ್ತಿರುವ ಮೊದಲ ರೈತ |ಕೈತುಂಬಾ ಆದಾಯ ಪಡೆವ ಸುರೇಶ್‌

Team Udayavani, Nov 23, 2020, 12:48 PM IST

ಕೊಳಚೆ ನೀರಿಗೆ ಲಕ್ಷ ಲಕ್ಷ ಸುರಿಯುವ ರೈತ!

ಬೆಂಗಳೂರು: ನಗರದ ಜನ ಬಳಕೆ ಮಾಡಿದ ನೀರನ್ನು ನೆರೆಯ ಊರುಗಳಿಗೆ ಹರಿಸುವ ಬಗ್ಗೆ ಪರ-ವಿರೋಧಗಳು ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲಿ ಅಂತಹದ್ದೇ ಬರದ ನಾಡಿನ ರೈತರೊಬ್ಬರು ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಸುರಿದು ಪಟ್ಟಣದ ಕೊಳಚೆನೀರು ಖರೀದಿಸಿ, ಕೈತುಂಬಾ ಆದಾಯ ಗಳಿಸುತ್ತಿದ್ದಾರೆ. ರಾಜ್ಯದಲ್ಲಿ ಹೀಗೆ ಕೃಷಿಗಾಗಿ ಹಣ ಕೊಟ್ಟು, ಕೊಳಚೆನೀರು ಖರೀದಿಸುತ್ತಿರುವ ಮೊದಲ ರೈತಕೂಡ ಇವರಾಗಿದ್ದಾರೆ!

ಕೊಳಚೆನೀರಿಗೆ ಭಾರೀ ಬೇಡಿಕೆ: ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ತಾಲೂಕಿನ ಹಿತ್ತಲಹಳ್ಳಿಯ ಎಚ್‌.ಕೆ. ಸುರೇಶ್‌, ಶಿಡ್ಲಘಟ್ಟ ಪಟ್ಟಣದ ಜನ ಬಳಸಿದ ನೀರನ್ನು ಹಣಕೊಟ್ಟು ಖರೀದಿಸಿ ಅದೇ ನೀರಿನಲ್ಲಿ ಮಾವು, ದಾಳಿಂಬೆ, ರೇಷ್ಮೆ ಬೆಳೆದು ಮಿಂಚುತ್ತಿದ್ದಾರೆ. ಈ ಪ್ರಯೋಗವು ಹಳ್ಳಿಯ ಇತರೆ ರೈತರಿಗೂ ಮಾದರಿಯಾಗಿದ್ದು, ಅವರು ಕೂಡ ಖರೀದಿಗೆ ಮುಂದಾಗಿದ್ದಾರೆ. ಪರಿಣಾಮ ಶಿಡ್ಲಘಟ್ಟ ಪಟ್ಟಣದ ಕೊಳಚೆನೀರಿಗೆ ಭಾರೀ ಬೇಡಿಕೆ ಬಂದಿದ್ದು, ಹರಾಜು ಮೂಲಕ ಹಂಚಿಕೆ ಮಾಡುವಂತಾಗಿದೆ.

ರಾಜ್ಯಮಟ್ಟದ ಅತ್ಯುತ್ತಮ ರೈತ: ಪ್ರಸಕ್ತ ಸಾಲಿನಲ್ಲಿ ಎಚ್‌.ಕೆ. ಸುರೇಶ್‌ ಅವರು ಐದೂವರೆ ಲಕ್ಷ ರೂ. ಕೊಟ್ಟು ನೀರು ಖರೀದಿಸಿದ್ದಾರೆ. ಮೊದಲ ಹಂತ ದಲ್ಲಿ ಸಂಸ್ಕರಣೆಗೊಂಡು ಪೂರೈಕೆಯಾದ ನೀರನ್ನು,ಸ್ವಂತ ವ್ಯವಸ್ಥೆಯಲ್ಲಿ ಮರುಸಂಸ್ಕರಿಸಿ ಹನಿ ನೀರಾವರಿ ಪದ್ಧತಿಯಲ್ಲಿ ಬೆಳೆಗಳಿಗೆ ಉಣಿಸುತ್ತಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಬರೋಬ್ಬರಿ 42.80 ಲಕ್ಷ ರೂ. ಕೊಳಚೆನೀರಿಗಾಗಿ ಸುರಿದಿದ್ದಾರೆ. ಇದಕ್ಕೆ ಪ್ರತಿಯಾಗಿ ಹೆಚ್ಚು-ಕಡಿಮೆ ದುಪ್ಪಟ್ಟು ಆದಾಯ ಗಳಿಸಿದ್ದಾರೆ. ಇದರೊಂದಿಗೆ ರಾಜ್ಯಮಟ್ಟದ ಅತ್ಯುತ್ತಮ ರೈತ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ.

ಇಸ್ರೇಲ್‌ ಪ್ರವಾಸದಿಂದ ಬದಲಾದ ಅದೃಷ್ಟ: ಈ ಹಿಂದೆ ತಮ್ಮ6ಎಕರೆ ಮಳೆಯಾಶ್ರಿತ ಜಮೀನಿನಲ್ಲಿ ಸುರೇಶ್‌ ಸುಮಾರು 18-19 ಕೊಳವೆಬಾವಿಗಳನ್ನುಕೊರೆಸಿ ಕೈಸುಟ್ಟುಕೊಂಡಿದ್ದಾರೆ. ಒಂದೇ ಒಂದು ಬಾವಿಯಿಂದ ನೀರು ದೊರೆಯಲಿಲ್ಲ. ಇದರಿಂದ ಬೇಸತ್ತ ಸಂದರ್ಭದಲ್ಲೇ 1999ರಲ್ಲಿ ಯೋಜನೆಯೊಂದರಲ್ಲಿ ಸರ್ಕಾರ ಆರು ರೈತರನ್ನು ಇಸ್ರೇಲ್‌ ಪ್ರವಾಸಕ್ಕೆ ಕಳುಹಿಸಿತು. ಆ ಪೈಕಿ ಸುರೇಶ್‌ ಕೂಡ ಒಬ್ಬರಾಗಿದ್ದರು. ಅಲ್ಲಿಂದ ಬಂದ ನಂತರ ಅವರ ಜೀವನ ಹೊಸ ತಿರುವು ಪಡೆದುಕೊಂಡಿತು. ಮಳೆನೀರು ಸಂಗ್ರಹಿಸಿ, ತಂತ್ರಜ್ಞಾನಗಳ ನೆರವಿನಲ್ಲಿ ಹನಿ ನೀರಾವರಿಯತ್ತ ಮುಖಮಾಡಿದರು. ಈ ಮಧ್ಯೆ ಒಂದು ದಿನ ಜಮೀನಿನ ಹತ್ತಿರದಲ್ಲೇ ವ್ಯರ್ಥವಾಗಿ ಹೋಗುತ್ತಿದ್ದ ಕೊಳಚೆನೀರು ಗಮನಸೆಳೆಯಿತು. ಆ ನೀರನ್ನು ಸ್ಥಳೀಯ ಸಂಸ್ಥೆಯ ಅನುಮತಿ ಮೇರೆಗೆ ಸಂಸ್ಕರಿಸಿ ಬಳಸಲು ಮುಂದಾದರು.

ಮೂರು ಟ್ಯಾಂಕ್‌ ನಿರ್ಮಾಣ: “ಕಳೆದ 18 ವರ್ಷಗಳಿಂದ ಕೊಳವೆಬಾವಿ ಸಹಾಯವಿಲ್ಲದೆ, ಸಮಗ್ರ ಕೃಷಿ ಮಾಡುತ್ತಿದ್ದೇನೆ . ಇನ್ನು ಮನೆ ಬಳಕೆಗೆ ನಿತ್ಯ 2ಸಾವಿರ ಲೀ. ನೀರು ಬೇಕಾಗುತ್ತದೆ. ಈ ಪೈಕಿ 400 ಲೀ. ನೀರನ್ನು ಸಂಸ್ಕರಿಸಿ ಮರುಬಳಕೆ ಮಾಡುತ್ತಿದ್ದೇನೆ. ಜತೆಗೆ 50/50, 70/70 ಅಡಿ ಗಾತ್ರದ ಮೂರು ಟ್ಯಾಂಕ್‌ಗಳನ್ನು ನಿರ್ಮಿಸಿದ್ದು, ಇಲ್ಲಿ ಸಂಗ್ರಹವಾದ ಮಳೆ ನೀರನ್ನು ಇತರೆ ಬೆಳೆಗಳು ಮತ್ತು ಮನೆಗೆ ಉಪಯೋಗಿಸುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.

ವೈವಿಧ್ಯಬೆಳೆಗಳು :  “ಜಮೀನಿನಲ್ಲಿ ರೇಷ್ಮೆಹುಳುಗಳ ಸಾಕಣೆ,ಕುರಿ, ಸ್ವರ್ಣಧಾರಕೋಳಿ, ಮೇವಿನ ಮುಸುಕಿನಜೋಳ, ಅಗಸೆ ಮರ, ನೇಪಿಯರ್‌ ಹುಲ್ಲು,ಕೈತೋಟ, ಪಪಾಯ, ಸೀಬೆ, ಸೀತಾಫ‌ಲ, ನಿಂಬೆ,ಬಾಳೆ ಸೇರಿದಂತೆಹಲವು ಹಣ್ಣಿನ ಗಿಡಗಳು, ಸಿಲ್ವರ್‌ಓಕ್‌ನಂತಹ ಅರಣ್ಯ ಮರಗಳನ್ನು ಬೆಳೆಯುತ್ತಿದ್ದೇನೆ. ಸಾಸಿವೆ,ಚೆಂಡು ಹೂವು ರಕ್ಷಣೆಬೆಳೆ, ರಾಗಿ, ತೊಗರಿ, ನವಣೆ ಕೂಡಬೆಳೆಯುತ್ತಿದ್ದೇನೆ. ಚಾಕಿ ಸಾಕಣೆಯನ್ನು ಮುಖ್ಯ ಕಸುಬಾಗಿ, ಪ್ರತಿಬ್ಯಾಚ್‌ನಲ್ಲಿ  4 ಸಾವಿರ ಡಿಎಫ್ಎಲ್‌ ಮೊಟ್ಟೆಗಳ ಎರಡನೇ ಹಂತದ ಮರಿಗಳನ್ನು ರೈತರಿಗೆ ಮಾರಾಟ ಮಾಡುತ್ತಿದ್ದೇನೆ’ ಎಂದು ಸುರೇಶ್‌ಹೇಳಿದರು.

ಹಲವು ಪ್ರಶಸ್ತಿ ಪಡೆದಿರುವ ಸುರೇಶ್‌ :  ಎಚ್‌.ಕೆ. ಸುರೇಶ್‌ ಮೂರು ಬಾರಿ ಎಸ್ಸೆಸ್ಸೆಲ್ಸಿ ಹಾಗೂ ಎರಡು ಬಾರಿ ಪಿಯುಸಿ ಫೇಲ್‌ ಆಗಿದ್ದಾರೆ. ನಂತರದಲ್ಲಿ ಬೆಂಗಳೂರು ಕೃಷಿ ವಿವಿಯಲ್ಲಿ ಬಿಎಸ್ಸಿ(ರೇಷ್ಮೆ) ಪದವಿ ಪೂರೈಸಿದ್ದಾರೆ. ಪ್ರಸ್ತುತ ಭಾರತೀಯ ರೇಷ್ಮೆ ಸಂಘದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಇದುವರೆಗೆ ಕೃಷಿಗೆ ಸಂಬಂಧಿಸಿದ 8-10ಪ್ರ ಶಸ್ತಿಗಳು ಇವರಿಗೆ ಒಲಿದು ಬಂದಿವೆ.25ದೇಶಗಳಿಂದ ಪ್ರತಿನಿಧಿಗಳು ಸುರೇಶ್‌ ಅವರ ಜಮೀನಿಗೆ ಭೇಟಿ ನೀಡಿದ್ದಾರೆ. ಮಾಹಿತಿಗೆ ಮೊ: 9986830435.

ಟಾಪ್ ನ್ಯೂಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.