ರಾಜಧಾನಿ ಫ್ಲೆಕ್ಸ್‌, ಬ್ಯಾನರ್‌ ಮುಕ್ತ!


Team Udayavani, Aug 27, 2018, 12:39 PM IST

rajadhani0.jpg

ಹಬ್ಬ, ರಾಜಕಾರಣಿಗಳ ಜನ್ಮದಿನ, ಪಕ್ಷ, ಸಂಘಟನೆ ಅಥವಾ ಸಮುದಾಯದ ಸಮಾವೇಶ ಸೇರಿ ಯಾವುದೇ ಸಮಾರಂಭ ನಡೆದರೂ ನಗರ ಸಂಪೂರ್ಣ ಫ್ಲೆಕ್ಸ್‌ ಮಯವಾಗುತ್ತಿತ್ತು. ಮರ, ವಿದ್ಯುತ್‌ ಕಂಬ, ಪಾದಚಾರಿ ಮಾರ್ಗಗಳಲ್ಲೂ ಫ್ಲೆಕ್ಸ್‌ಗಳು ರಾರಾಜಿಸುತ್ತಿದ್ದವು. ಈ ಬಗ್ಗೆ ನೂರಾರು ದೂರು ಬಂದರೂ ಕ್ರಮಕ್ಕೆ ಮುಂದಾಗದ ಪಾಲಿಕೆ, ಹೈಕೋರ್ಟ್‌ ಚಾಟಿಯೇಟಿನಿಂದ ಎಚ್ಚೆತ್ತುಕೊಂಡಿದೆ. ನಗರ ಇದೀಗ ಫ್ಲೆಕ್ಸ್‌, ಬ್ಯಾನರ್‌, ಬಂಟಿಂಗ್ಸ್‌ ಮುಕ್ತವಾಗುತ್ತಿರುವುದು ನಾಗರಿಕರ ಖುಷಿಗೆ ಕಾರಣವಾಗಿದೆ.

ಒಂದೊಂದಾಗಿ ನೆಲಕ್ಕುರುಳುತ್ತಿರುವ ಜಾಹೀರಾತು ಫ‌ಲಕಗಳು, ಮಾಯವಾಗಿರುವ ಪೋಸ್ಟರ್‌ಗಳು, ಶುಭ ಕೋರುವ ಫ್ಲೆಕ್ಸ್‌ಗಳು, ಗೋಡೆಗಳ ಮೇಲೆ ಮೂಡುತ್ತಿದೆ ಬಣ್ಣ ಬಣ್ಣದ ಚಿತ್ತಾರ. ಬಿಬಿಎಂಪಿಯನ್ನು ಫ್ಲೆಕ್ಸ್‌ ಹಾಗೂ ಬ್ಯಾನರ್‌ ಮುಕ್ತ ಮಾಡಲು ಆರಂಭಿಸಿರುವ ಕಾರ್ಯಾಚರಣೆಯಿಂದಾಗಿ ರಾಜಧಾನಿ ಬೆಂಗಳೂರು  ಹೊಸ ರೂಪ ಪಡೆಯುತ್ತಿದೆ.ನಗರದಲ್ಲಿ ಕಳೆದೊಂದು ತಿಂಗಳಲ್ಲಿ ನಡೆದ ಕ್ಷಿಪ್ರ ಫ್ಲೆಕ್ಸ್‌ ತೆರವು ಕಾರ್ಯಾಚರಣೆ ಫ‌ಲವಾಗಿ ನಗರದೆಲ್ಲೆಡೆ ಕಂಡು ಬರುತ್ತಿರುವ ದೃಶ್ಯಗಳಿವು.

ಫ್ಲೆಕ್ಸ್‌, ಬ್ಯಾನರ್‌ ಹಾಗೂ ಬಂಟಿಂಗ್ಸ್‌ ಮುಕ್ತ ಕಾರ್ಯಾಚರಣೆಯಿಂದ ನಗರದ ಅಂದ ಹೆಚ್ಚಾಗುತ್ತಿದ್ದು, ನಗರದ ಜನರಿಗೆ ಹೊಸ ಅನುಭವ ಎದುರಾಗುತ್ತಿದೆ. ಮತ್ತೂಂದೆಡೆ ಆಡಳಿತ ವ್ಯವಸ್ಥೆ ತನ್ನ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಿದರೆ ಯಾವುದೂ ಅಸಾಧ್ಯವಲ್ಲ ಎಂದು ಹೇಳುತ್ತಿದ್ದ ಹೈಕೋರ್ಟ್‌, ನಗರದಲ್ಲಿನ ಫ್ಲೆಕ್ಸ್‌ಗಳನ್ನು ಸಂಪೂರ್ಣವಾಗಿ ಬಿಬಿಎಂಪಿಯಿಂದ ತೆರವುಗೊಳಿಸುವ ಮೂಲಕ ಅದನ್ನು ಸಾಬೀತುಪಡಿಸಿದೆ. ನಗರದ ಅಂದ ಕೆಡಿಸುತ್ತಿದ್ದ ಫ್ಲೆಕ್ಸ್‌ಗಳ ವಿರುದ್ಧ ಹೈಕೋರ್ಟ್‌ ತಳೆದಿರುವ ದಿಟ್ಟ ನಿಲುವಿಗೆ ಎಲ್ಲೆಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. 

ಭಿತ್ತಿಪತ್ರಗಳಿಗೆ ಬಿತ್ತು ಬ್ರೇಕ್‌: ಕೇಂದ್ರ ಭಾಗದ ಅರಮನೆ ರಸ್ತೆ, ಮೆಜೆಸ್ಟಿಕ್‌, ಗಾಂಧಿನಗರ, ಕಾರ್ಪೊರೇಷನ್‌, ಚಿಕ್ಕಪೇಟೆ ಹೀಗೆ ಹತ್ತಾರು ಭಾಗಗಳಲ್ಲಿ ಗೋಡೆಗಳ ಮೇಲೆ ಅಂಟಿಸಲಾಗುತ್ತಿದ್ದ ಭಿತ್ತಿಪತ್ರಗಳು ಹಾಗೂ ಗೋಡೆ ಬರಹಗಳಿಂದ ಆ ಪ್ರದೇಶ ಅಸಹ್ಯ ಮೂಡಿಸುವಂತಿತ್ತು. ಮೊದಲಿಗೆ ಫ್ಲೆಕ್ಸ್‌, ಬ್ಯಾನರ್‌ ತೆರವು ಕಾರ್ಯಾಚರಣೆ ಆರಂಭಿಸಿದ್ದ ಪಾಲಿಕೆ, ನಂತರದಲ್ಲಿ ಭಿತ್ತಿಪತ್ರ ತೆರವು ಹಾಗೂ ಗೋಡೆ ಬರಹಗಳಿಗೆ ಬಣ್ಣ ಬಳಿಯುವ ಕೆಲಸ ಮಾಡಲಾಗುತ್ತಿದೆ. ಇದರಿಂದಾಗಿ ಕೇಂದ್ರ ಭಾಗದ ಗೋಡೆಗಳು ಸ್ವತ್ಛ ಹಾಗೂ ಸುಂದರವಾಗಿ ಕಾಣುತ್ತಿವೆ. 

ಪಾಲಿಕೆಗೆ ಸಂಘ-ಸಂಸ್ಥೆಗಳು ಸಾಥ್‌: ಭಿತ್ತಿಪತ್ರಗಳ ತೆರವು ಕಾರ್ಯಾಚರಣೆಯಲ್ಲಿ ತೊಡಗಿರುವ ಪಾಲಿಕೆಯ ಸಿಬ್ಬಂದಿಯೊಂದಿಗೆ ಹಲವು ಸಂಘ-ಸಂಸ್ಥೆಗಳು ಕೈಜೋಡಿಸಲು ಮುಂದಾಗಿವೆ. ಅದರಂತೆ ಪಾಲಿಕೆಯ ಸಿಬ್ಬಂದಿ ಭಿತ್ತಿಪತ್ರ ತೆರವುಗೊಳಿಸಿದ ಗೋಡೆಗಳ ಮೇಲೆ ಸುಂದರವಾದ ಚಿತ್ತಾರಗಳನ್ನು ಬಿಡಿಸಲು ಅಗ್ಲಿ ಇಂಡಿಯನ್‌ ಸಂಸ್ಥೆಯು ಸಹಕಾರ ನೀಡಲು ಒಪ್ಪಿದೆ ಎನ್ನಲಾಗಿದ್ದು, ವಲಯ ಮಟ್ಟದಲ್ಲಿ ಹಲವು ಸಂಸ್ಥೆಗಳು ಸ್ವಯಂ ಪ್ರೇರಿತವಾಗಿ ಭಿತ್ತಿಪತ್ರ ತೆರವು ಅಭಿಯಾನದಲ್ಲಿ ಭಾಗಿಯಾಗುತ್ತಿವೆ. 

ಬೆದರಿದ ಏಜೆನ್ಸಿಗಳು: ಪಾಲಿಕೆ ಈ ಹಿಂದೆ ಹಲವು ಬಾರಿ ಅನಧಿಕೃತ ಜಾಹೀರಾತು ಫ‌ಲಕಗಳ ವಿರುದ್ಧ ಕಾರ್ಯಾಚರಣೆಗೆ ಮುಂದಾದರೂ, ಯಾವುದೇ ಪ್ರಾಯೋಜನ ಆಗಿರಲಿಲ್ಲ. ಜತೆಗೆ ಪಾಲಿಕೆ ತೆರವು ಆದೇಶಗಳಿಗೆ ಜಾಹೀರಾತು ಏಜೆನ್ಸಿಗಳು ಕ್ಯಾರೆ ಎನ್ನುತ್ತಿರಲಿಲ್ಲ. ಇದೀಗ ಫ್ಲೆಕ್ಸ್‌, ಜಾಹೀರಾತು ವಿರುದ್ಧ ಹೈಕೋರ್ಟ್‌ ಗರಂ ಆಗಿರುವ ಹಿನ್ನೆಲೆಯಲ್ಲಿ ಪಾಲಿಕೆಯು ಕ್ಷಿಪ್ರ ಕಾರ್ಯಾಚರಣೆ ಮೂಲಕ ಜಾಹೀರಾತು ಫ‌ಲಕಗಳ ವಿರುದ್ಧ ಸಮರ ಸಾರಿದ್ದು, ಇದಕ್ಕೆ ಬೆದರಿದ ಏಜೆನ್ಸಿಗಳು ತಾವು ಅಳವಡಿಸಿದ ಫ‌ಲಕಗಳ ತೆರವಿಗೆ ಮುಂದಾಗಿವೆ. 

ಜಾಹೀರಾತು ಫ‌ಲಕ ಶಾಶ್ವತ ಬ್ಯಾನ್‌: ಈವರೆಗೆ 25 ಸಾವಿರಕ್ಕೂ ಹೆಚ್ಚಿನ ಫ್ಲೆಕ್ಸ್‌, ಬ್ಯಾನರ್‌ ಹಾಗೂ ಬಂಟಿಂಗ್ಸ್‌ಗಳನ್ನು ತೆರವುಗೊಳಿಸಿರುವ ಪಾಲಿಕೆ, ನಗರದಲ್ಲಿ ಒಂದು ವರ್ಷದ ಮಟ್ಟಿಗೆ ಎಲ್ಲ ರೀತಿಯ ಜಾಹೀರಾತು ಪ್ರದರ್ಶನ ನಿಷೇಧಿಸಿ ನಿರ್ಣಯ ಕೈಗೊಂಡಿದೆ. ಇದೀಗ ಸರ್ಕಾರಿ ಜಾಹೀರಾತು ಫ‌ಲಕಗಳನ್ನು ಹೊರತುಪಡಿಸಿ ಉಳಿದೆಲ್ಲ ರೀತಿಯ ಜಾಹೀರಾತು ಫ‌ಲಕಗಳಿಗ ಶಾಶ್ವತವಾಗಿ ಮುಕ್ತಿ ನೀಡಲು ನಿರ್ಧರಿಸಿದೆ. ಜತೆಗೆ ಏಜೆನ್ಸಿಗಳಿಂದ ಹಲವು ವರ್ಷಗಳಿಂದ ಬರಬೇಕಾದ ಜಾಹೀರಾತು ಬಾಕಿ ಶುಲ್ಕ ವಸೂಲಾತಿಗೂ ಕಠಿಣ ಕ್ರಮ ಕೈಗೊಳ್ಳಲು ಚಿಂತನೆ ನಡೆಸಿದೆ. 

ತಲೆನೋವಾಗಿರುವ ಸ್ಟ್ರಕ್ಚರ್‌ ತೆರವು: ಪಾಲಿಕೆಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚಿನ ಜಾಹೀರಾತು ಫ‌ಲಕಗಳಿದ್ದು (ಕಬ್ಬಿಣದ ಸ್ಟ್ರಕ್ಚರ್‌), ಅವುಗಳ ತೆರವು ಕಾರ್ಯ ಪಾಲಿಕೆಗೆ ತಲೆನೋವಾಗಿದೆ. ಖಾಸಗಿ ಸ್ಥಳಗಳಲ್ಲಿ ಹಾಕಿರುವ ಫ‌ಲಕಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಆ.30ರೊಳಗೆ ಏಜೆನ್ಸಿಗಳು ಪಾಲಿಕೆಗೆ ಸಲ್ಲಿಸಬೇಕು ಇಲ್ಲವೆ, ಫ‌ಲಕಗಳನ್ನು ತೆರವುಗೊಳಿಸಬೇಕು. ಒಂದೊಮ್ಮೆ ಅವರೇ ಫ‌ಲಕ ತರೆವಿಗೆ ಮುಂದಾಗಿದ್ದರೆ, ಪಾಲಿಕೆಯಿಂದಲೇ ಖುದ್ದು ಅಂತಹ ಫ‌ಲಕಗಳನ್ನು ತೆರವು ಕಾರ್ಯ ಕೈಗೊಂಡು ಅದರ ವೆಚ್ಚ ಏಜೆನ್ಸಿಗಳಿಂದ ವಸೂಲಿ ಮಾಡಲಾಗತ್ತದೆ. 

ಒಂದು ಫ‌ಲಕ ನೂರಾರು ಟನ್‌ ತೂಕವಿರುವುದರಿಂದ ಅದನ್ನು ತೆರವುಗೊಳಿಸಲು ಕ್ರೇನ್‌ಗಳ ಅವಶ್ಯಕತೆ ಇದೆ. ಪ್ರಸ್ತುತ ಪಾಲಿಕೆ ಬಳಿ 10 ಸಾವಿರ ಫ‌ಲಕಗಳನ್ನು ತೆರವುಗೊಳಿಸಲು ಅವಶ್ಯಕವಾಗಿರುವ ಕ್ರೇನ್‌, ಕಟ್ಟರ್‌ ಸೇರಿದಂತೆ ಸಿಬ್ಬಂದಿಗಳ ಕೊರತೆ ಇದ್ದು, ಪಾಲಿಕೆ ಇದು ತಲೆ ನೋವಾಗಿ ಪರಿಣಮಿಸಿದೆ. ಹೀಗಾಗಿಯೇ ಗಡುವು ಮುಗಿದ ನಂತರ ಫ‌ಲಕಗಳ ತೆರವು ಕಾರ್ಯವನ್ನು ಗುತ್ತಿಗೆ ನೀಡಲು ಪಾಲಿಕೆ ನಿರ್ಧರಿಸಿದೆ. 

ಯಾರಿಗೂ ಮುಲಾಜಿಲ್ಲ: ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಜಾಹೀರಾತು ಫ‌ಲಕ ಹಾಗೂ ಭಿತ್ತಿಪತ್ರ ಅಳವಡಿಸಿರುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ಆಯುಕ್ತರು ಈಗಾಗಲೇ ಆದೇಶಿಸಿದ್ದಾರೆ. ಅದರಂತೆ ಇತ್ತೀಚೆಗೆ ಬಿಜೆಪಿ ಮುಖಂಡ ಚಿ.ನಾ.ರಾಮು ಹಾಗೂ ಆರ್‌.ಆರ್‌.ನಗರ ಪಾಲಿಕೆ ಸದಸ್ಯರ ಬೆಂಬಲಿಗರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗಿದೆ. 

ಫ್ಲೆಕ್ಸ್‌ ಮುಕ್ತಿಗೆ ಮೂಹೂರ್ತ ಫಿಕ್ಸ್‌ ಆಗಿದ್ದು ಹೇಗೆ?: ನಗರದಲ್ಲಿ ಫ್ಲೆಕ್ಸ್‌ ಹಾವಳಿ ಎಷ್ಟರ ಮಟ್ಟಿಗೆ ಹೆಚ್ಚಾಗಿತ್ತೆಂದರೆ ಸಚಿವರೊಬ್ಬರ ಹುಟ್ಟುಹಬ್ಬಕ್ಕೆ ಶುಭ ಕೋರುವ ಫ್ಲೆಕ್ಸ್‌ಗಳನ್ನು ಜಾಹೀರಾತು ನಿಷೇಧಿತ ವಲಯವಾದ ವಿಧಾನಸೌಧ ಹಾಗೂ ಹೈಕೋರ್ಟ್‌ ಸಮೀಪವೂ ಅಳವಡಿಸಲಾಗಿತ್ತು. ಇದರಿಂದ ಗರಂ ಆದ ಹೈಕೋರ್ಟ್‌ ಆಗಸ್ಟ್‌ 1 ರಂದು ಹೈಕೋರ್ಟ್‌ ಪಾಲಿಕೆ ಆಯುಕ್ತರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಸಂಜೆ ವೇಳೆಗೆ ನಗರದಲ್ಲಿರುವ ಎಲ್ಲ ಫ್ಲೆಕ್ಸ್‌ಗಳನ್ನು ತೆರವುಗೊಳಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿತ್ತು. 

ಆ ಹಿನ್ನೆಲೆಯಲ್ಲಿ ಪಾಲಿಕೆ ತನ್ನೆಲ್ಲ ಕೆಲಸಗಳನ್ನು ಬದಿಗೊತ್ತಿ ಫ್ಲೆಕ್ಸ್‌ ತೆರವಿಗೆ ಮುಂದಾಯಿತು. ಅದರ ಆ ನಂತರವೂ ಹೈಕೋರ್ಟ್‌ ಪಾಲಿಕೆಗೆ ಚಾಟಿ ಬೀಸಿ ನೀವು ಫ್ಲೆಕ್ಸ್‌ ತೆರವುಗೊಳಿಸುವವರೆಗೆ ನಿಮ್ಮನ್ನು ಬಿಡುವುದಿಲ್ಲ ಎಂದು ಕಟು ಮಾತುಗಳಿಂದ ಎಚ್ಚರಿಸಿದರಿಂದ ಎರಡು ದಿನಗಳಲ್ಲಿ ಸಾವಿರಾರು ಫ್ಲೆಕ್ಸ್‌ ತೆರವುಗೊಳಿಸಿತ್ತು. 

ಕಾರ್ಯಾಚರಣೆ ವೇಳೆ ಅಧಿಕಾರಿಗಳ ಮೇಲೆ ಕಿಡಿಕೇಡಿಗಳು ಹಲ್ಲೆ ಮಾಡಿದ್ದಕ್ಕೆ ಮತ್ತಷ್ಟು ಗರಂ ಆದ ಹೈಕೋರ್ಟ್‌, ಪೊಲೀಸ್‌ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡು, ಅಗತ್ಯ ಭದ್ರತೆ ನೀಡಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು. ಇದರಿಂದಾಗಿ ಹತ್ತಾರು ವರ್ಷಗಳಿಂದ ಬಗೆಹರಿಯದ ಫ್ಲೆಕ್ಸ್‌ ಸಮಸ್ಯೆ ಕೇವಲ 25 ದಿನಗಳಲ್ಲಿ ಹತೋಟಿಗೆ ಬಂದಿದ್ದು, 25 ಸಾವಿರಕ್ಕೂ ಹೆಚ್ಚು ಫ್ಲೆಕ್ಸ್‌ ತೆರವುಗೊಳಿಸಲಾಗಿದೆ. 

ತೆರವಾದ ಫ್ಲೆಕ್ಸ್‌ ಸಿಮೆಂಟ್‌ ಕಾರ್ಖಾನೆ: ಬಿಬಿಎಂಪಿ ವತಿಯಿಂದ ನಗರದಾದ್ಯಂತ ನಡೆಸಿದ ಫ್ಲೆಕ್ಸ್‌ ತೆರವು ಕಾರ್ಯಾಚರಣೆಯಲ್ಲಿ ಸಂಗ್ರಹವಾದ ಫ್ಲೆಕ್ಸ್‌ ತ್ಯಾಜ್ಯವನ್ನು ಬಿಬಿಎಂಪಿ ವೈಜ್ಞಾನಿಕ ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ರವಾನೆ ಮಾಡಲಾಗಿದ್ದು, ಅದನ್ನು ಆರ್‌ಡಿಎಫ್ ಆಗಿ ಪರಿವರ್ತಿಸಲಾಗಿದೆ. ಹೀಗೆ ಪರಿವರ್ತನೆಯಾದ ಆರ್‌ಡಿಎಫ್ನ್ನು ಸಿಮೆಂಟ್‌ ಕಾರ್ಖಾನೆಗಳಿಗೆ ಕಳುಹಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

ಕಾಯ್ದೆ ಏನು ಹೇಳುತ್ತದೆ?: ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಫ್ಲೆಕ್ಸ್‌, ಬ್ಯಾನರ್‌, ಬಂಟಿಂಗ್ಸ್‌ ಹಾಗೂ ಬಾವುಟನ್ನು ಅಳವಡಿಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಬಿಬಿಎಂಪಿ ಮುಂದಾಗಿದೆ. ಅದರಂತೆ ತಪ್ಪಿತಸ್ಥರ ವಿರುದ್ಧ ಕೆಎಂಸಿ ಕಾಯ್ದೆ 1976ರ ಮತ್ತು ಕರ್ನಾಟಕ ಮುಕ್ತ ಪ್ರದೇಶಗಳ (ಸಂರಕ್ಷಣೆ) ಕಾಯ್ದೆ 1981ರ ಅನ್ವಯ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುತ್ತದೆ. ಕಾಯ್ದೆಯಂತೆ ತಪ್ಪಿತಸ್ಥರಿಗೆ 6 ತಿಂಗಳವರೆಗೆ ಜೈಲುವಾಸ ಅಥವಾ 1 ಲಕ್ಷ ರೂ. ದಂಡ ಅಥವಾ ದಂಡದೊಂದಿಗೆ ಜೈಲುವಾಸ ವಿಧಿಸಲಾಗುತ್ತದೆ. 

ತೆರವುಗೊಳಿಬೇಕು ಇಲ್ಲವೆ, ಜೈಲಿಗೆ ಹೋಗಬೇಕು: ಪಾಲಿಕೆಯ ವ್ಯಾಪ್ತಿಯ ಪಾದಚಾರಿ ಮಾರ್ಗ, ರಾಜಕಾಲುವೆ ಹಾಗೂ ಉದ್ಯಾನಗಳಲ್ಲಿ ಅಳವಡಿಸಿರುವ ಜಾಹೀರಾತು ಫ‌ಲಕಗಳನ್ನು ಪಾಲಿಕೆಯಿಂದಲೇ ತೆರವುಗೊಳಿಸುತ್ತೇವೆ. ಇನ್ನು ಖಾಸಗಿ ಜಾಗದಲ್ಲಿ ಅಳವಡಿಸಿರುವ ಜಾಹೀರಾತು ಫ‌ಲಕಗಳನ್ನು ಜಾಗದ ಮಾಲೀಕರೇ ಆ.30ರೊಳಗೆ ತೆರವುಗೊಳಿಸಬೇಕು. ಇಲ್ಲವೆ ಅಗತ್ಯ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡಬೇಕು. ಒಂದೊಮ್ಮೆ ತೆರವುಗೊಳಿಸಲು ಮುಂದಾಗದಿದ್ದರೆ ಫ‌ಲಕವಿರುವ ಆಸ್ತಿಯ ಮಾಲೀಕರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ ಜೈಲಿಗೆ ಕಳುಹಿಸಲಾಗುವುದು ಎಂದು ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಎಚ್ಚರಿಕೆ ನೀಡಿದ್ದಾರೆ. 

ಜಾಹೀರಾತು ತೆರವಿಗೆ ಆ್ಯಪ್‌: ನಗರದ ಖಾಸಗಿ ಆಸ್ತಿಗಳಲ್ಲಿರುವ ಅನಧಿಕೃತ ಜಾಹೀರಾತು ಫ‌ಲಕಗಳ ಪತ್ತೆಗೆ ವಿಶೇಷ ಆ್ಯಪ್‌ ಅಭಿವೃದ್ಧಿಪಡಿಸಿದ್ದು, ಈಗಾಗಲೇ ಅಧಿಕಾರಿಗಳು ಅನಧಿಕೃತ ಫ‌ಲಕಗಳ ಮಾಹಿತಿಯನ್ನು ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಅದರಂತೆ ಜಾಹೀರಾತು ಫ‌ಲಕವಿರುವ ಜಾಗ, ಜಾಗದ ಮಾಲೀಕರು, ಆಸ್ತಿ ತೆರಿಗೆ ಪಾವತಿ ವಿವರ ಸೇರಿದಂತೆ ವಿವಿಧ ಮಾಹಿತಿ ಕಲೆ ಹಾಕಿದ್ದು, ಅದನ್ನು ಆಧರಿಸಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಲಿದ್ದಾರೆ. 
 
ಅನಧಿಕೃತ ಜಾಹೀರಾತು ಫ‌ಲಕಗಳ ವಿವರ
ವಲಯ                     ಫ‌ಲಕಗಳ ಸಂಖ್ಯೆ    

-ಯಲಹಂಕ                      536               
-ಮಹದೇವಪುರ               1,327             
-ದಾಸರಹಳ್ಳಿ                      198               
-ಆರ್‌.ಆರ್‌.ನಗರ              186                
-ಬೊಮ್ಮನಹಳ್ಳಿ                   481               
-ದಕ್ಷಿಣ                          2,293               
-ಪಶ್ಚಿಮ                         1,244               
-ಪೂರ್ವ                        3,907                
-ಒಟ್ಟು                         10,172

* ವೆಂ.ಸುನೀಲ್‌ಕುಮಾರ್‌ 

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.