ಪೊಲೀಸರು ಒತ್ತಡಕ್ಕೆ ಮಣಿಯಬಾರದು
Team Udayavani, Feb 22, 2018, 11:09 AM IST
ಬೆಂಗಳೂರು: ಪೊಲೀಸ್ ಅಧಿಕಾರಿಗಳು ಯಾವುದೇ ರೀತಿಯಲ್ಲೂ ಒತ್ತಡಕ್ಕೆ ಮಣಿದು ಕಾರ್ಯ ನಿರ್ವಹಿಸಬಾರದು
ಎಂದು ನಿವೃತ್ತ ಐಪಿಎಸ್ ಅಧಿಕಾರಿ ಗರುಡಾಚಾರ್ ಅವರು ಸಲಹೆ ನೀಡಿದ್ದಾರೆ.
ಮಣಿಪಾಲ್ ಸೆಂಟರ್ನಲ್ಲಿ ಇರುವ “ಉದಯವಾಣಿ’ ಕಚೇರಿಗೆ ಬುಧವಾರ ಭೇಟಿ ನೀಡಿ ಮಾತನಾಡಿ, ಪೊಲೀಸ್ ಅಧಿಕಾರಿಗಳು ಭಾರತೀಯ ದಂಡ ಸಂಹಿತೆ, ಸಿಆರ್ಪಿಸಿ, ಪೊಲೀಸ್ ಕಾಯ್ದೆ, ಪೊಲೀಸ್ ಮ್ಯಾನ್ಯುವಲ್, ಹೈಕೋರ್ಟ್,
ಸುಪ್ರೀಂ ಕೋರ್ಟ್ನ ಪ್ರಮುಖ ಆದೇಶಗಳನ್ನು ಓದಿಕೊಂಡಿರಬೇಕು. ಕಾನೂನಿನ ಅರಿವಿದ್ದಾಗ ಯಾರ ಒತ್ತಡಕ್ಕೂ ಮಣಿಯುವ ಅಗತ್ಯ ವಿರುವುದಿಲ್ಲ ಎಂದು ಹೇಳಿದರು.
ಡಿಮೋಷನ್ಗೆ ಸೂಕ್ತ ಕಾರಣ: ಹೆಚ್ಚೆಂದರೆ ವರ್ಗಾವಣೆ, ಡಿಮೋಷನ್ ಮಾಡಿಸಬಹುದು. ಇದಕ್ಕೂ ಕಾರಣ ಕೊಡಲೇಬೇಕು ಇದನ್ನರಿತು ಸೇವೆ ಸಲ್ಲಿಸಬೇಕು ಎಂದರು.
ಭಾರತ ನಂ.1: ಕಷ್ಟ ಹೇಳಿ ಬರುವವರನ್ನು ಗೌರವರಿಂದ ನೋಡುವ ಮನೋಭಾವ ಬಂದಾಗ ಭಾರತ ಪ್ರಪಂಚದಲ್ಲೇ ನಂ.1 ಆಗಲಿದೆ ಎಂದರು. ನಿವೃತ್ತ ಡಿಸಿಪಿ ರಮೇಶ್ ಬಾಬು ಉಪಸ್ಥಿತರಿದ್ದರು. ಅಪರಾಧಿಗಳಿಗೆ ಪೊಲೀಸ್ ವ್ಯವಸ್ಥೆ,
ಕಾನೂನಿನ ಹಿನ್ನೆಲೆ, ನ್ಯಾಯಾಲಯ ಹಾಗೂ ಶಿಕ್ಷೆಯ ಬಗ್ಗೆ ಅರಿವಿರುವುದಿಲ್ಲ. ಆದರೆ, ಪೊಲೀಸ್ ಅಧಿಕಾರಿಗಳಿಗೆ ಎಲ್ಲಾ
ರೀತಿಯ ಕಟ್ಟುಪಾಡುಗಳು ಇರುತ್ತದೆ. ಪರಿಸ್ಥಿತಿ ನಿರ್ವಹಣೆ, ಸೂಕ್ಷ್ಮಾತಿ ಸೂಕ್ಷ್ಮ ಪ್ರಕರಣಗಳನ್ನು ಹೇಗೆ ಭೇದಿಸುತ್ತೇವೆ
ಎನ್ನುವುದು ಮುಖ್ಯ.
ಗರುಡಾಚಾರ್, ನಿವೃತ್ತ ಐಪಿಎಸ್ ಅಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
MUST WATCH
ಹೊಸ ಸೇರ್ಪಡೆ
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ