ಬಸವನಗುಡಿಯಲ್ಲಿ ವಿಕಾಸ ಯಾತ್ರೆ
Team Udayavani, May 11, 2018, 12:09 PM IST
ಬೆಂಗಳೂರು: ಬಸವನಗುಡಿ ವಿಧಾನಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯ ಕಸನು ಕಂಡಿರುವ ತಮ್ಮನ್ನು ಈ ಬಾರಿ ಶಾಸಕನಾಗಿ ಆರಿಸುವಂತೆ ಜೆಡಿಎಸ್ ಅಭ್ಯರ್ಥಿ ಕೆ. ಬಾಗೇಗೌಡ ಮತಯಾಚಿಸಿದರು.
ಗುರುವಾರ ಬಸವನಗುಡಿ ಮುಖ್ಯರಸ್ತೆಯಲ್ಲಿ “ವಿಕಾಸ ರಥಯಾತ್ರೆ’ ನಡೆಸಿ ಬಿರುಸಿನ ಮತಯಾಚನೆ ನಡೆಸಿದ ಅವರು, ಕ್ಷೇತ್ರದ ಅಭಿವೃದ್ಧಿಗೆ ಹಲವು ನಿರ್ದಿಷ್ಟ ಗುರಿಯ ಯೋಜನೆಗಳನ್ನು ಹಮ್ಮಿಕೊಂಡಿದ್ದೇನೆ. ಜನರ ಅಪೇಕ್ಷೆಯಿಂದ ಮೂಲಸೌಕರ್ಯಗಳು, ರಸ್ತೆಗಳು, ಕುಡಿಯುವ ನೀರು ಸೇರಿದಂತೆ ಅವರ ಅಗತ್ಯಗಳಿಗೆ ಕೂಡಲೇ ಸ್ಪಂದಿಸಿ ಕಾರ್ಯನಿರ್ವಹಿಸುವ ಭರವಸೆ ನೀಡುತ್ತೇನೆ.
ಹೀಗಾಗಿ ಅಭಿವೃದ್ಧಿಯ ಬದಲಾವಣೆಗಾಗಿ ಶಾಸಕನಾಗಿ ಆಯ್ಕೆ ಮಾಡುವಂತೆ ಕೋರಿದರು. ಈ ಹಿಂದೆ ಜೆಡಿಎಸ್ ಸರ್ಕಾರ ನೀಡಿದ ಕೊಡುಗೆಗಳು ಇನ್ನೂ ಜನರ ಮನಸಿಂದ ದೂರವಾಗಿಲ್ಲ. ಅದೇ ರೀತಿ ಪಾರದರ್ಶಕ ಹಾಗೂ ಅಭಿವೃದ್ಧಿಯ ಆಡಳಿತದ ಗುರಿಯೇ ತಮ್ಮ ಮೂಲಧ್ಯೇಯವಾಗಿದೆ. ಈಗಾಗಲೇ ಕ್ಷೇತ್ರದಲ್ಲಿ ಉತ್ತಮ ಬೆಂಬಲವ್ಯಕ್ತವಾಗುತ್ತಿದ್ದು,
ಗೆಲುವು ಸಾಧಿಸುವ ಭರವಸೆಯಿದೆ. ಹೀಗಾಗಿ ಈ ಬಾರಿ ಶಾಸಕನಾಗಿ ಸೇವೆ ಮಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ವಿಧಾನಪರಿಷತ್ ಸದಸ್ಯ ಟಿ.ಎ ಶರವಣ, ಪಕ್ಷದ ಮುಖಂಡರಾದ ಎಂ. ರಾಜು, ಲಲಿತಾ ಶ್ರೀನಿವಾಸ ಅವರು ಬಾಗೇಗೌಡ ಅವರ ಮತಯಾಚನೆಗೆ ಸಾಥ್ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ