ಮೊದಲ ಬಾರಿಗೆ ಮತದಾನ: ಸಸಿ ವಿತರಣೆ
Team Udayavani, Apr 19, 2019, 12:54 PM IST
ಕೆಂಗೇರಿ: ಕೆಂಗೇರಿ ಉಪನಗರದ ಶೇಷಾದ್ರಿಪುರಂ ಕಾಲೇಜಿನ ಮತಗಟ್ಟೆಯಲ್ಲಿ ಇದೇ ಮೊದಲ ಬಾರಿಗೆ ಮತದಾನ ಮಾಡಿದ ಯುವಜನತೆಗೆ ಜರ್ನಲಿಸ್ಟ್ಸ್ ಅಸೋಶಿಯೇಷನ್ ಆಫ್ ಕರ್ನಾಟಕ ಮತ್ತು ವಿಶ್ವ ಒಕ್ಕಲಿಗರ ವೇದಿಕೆಯಿಂದ ಉಚಿತ ಸಸಿ ವಿತರಿಸಿ ಅಭಿನಂದಿಸಲಾಯಿತು.
ವಿಶ್ವ ಒಕ್ಕಲಿಗರ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕನ್ನಡವೇ ಸತ್ಯ ರಂಗಣ್ಣ ಮಾತನಾಡಿ, ಮೊದಲ ಮತದಾನದ ಪುಳಕವೇ ಬೇರೆ. ಯುವಜನಾಂಗ ಅದನ್ನು ಅನುಭವಿಸುತ್ತಿದ್ದು, ಅದರ ಜತೆಗೆ ಸಸಿ ನೀಡುವುದು ಉತ್ತಮ ಬೆಳವಣಿಗೆ.
ಈ ನೆನಪು ನಿಮ್ಮ ಜೀವನದಲ್ಲಿ ಹಚ್ಚ ಹಸಿರಾಗಿರಲಿ ಎಂದು ಹಾರೈಸಿದ ಅವರು ನೀವು ಮತ ನೀಡಿದ ಅಭ್ಯರ್ಥಿ ಆಯ್ಕೆಗೊಂಡು ನಿಮಗೆ ನೆರಳಾಗಿ ನಿಲ್ಲುತ್ತಾರೋ ಇಲ್ಲವೋ ಗೊತ್ತಿಲ್ಲ ಆದರೆ ನೀವು ನೆಡುವ ಸಸಿಯಂತೂ ನಿಮಗೆ ನೆರಳಾಗಿ ನಿಲ್ಲುವುದು ಶತಸತ್ಯವೆಂದರು. ಪ್ರೊ. ಚೇತನಾ ಮಾತನಾಡಿ, ಉತ್ತಮ ನಾಯಕರ ಆಯ್ಕೆ ಎನ್ನುವುದು ತಂತಾನೇ ಸೃಷ್ಟಿಯಾಗುವುದಿಲ್ಲ. ಅದಕ್ಕೆ ಪ್ರಜಾಪ್ರಭುತ್ವದಲ್ಲಿ ಜನರ ಸಹಭಾಗಿತ್ವ ಬಹಳ ಮುಖ್ಯ.
ಎಲ್ಲರೂ ತಪ್ಪದೇ ಮತದಾನ ಮಾಡಿದಾಗ ಮಾತ್ರ ಅದಕ್ಕೆ ಅರ್ಥ ಬರುತ್ತೆ ಎಂದರು. ಜರ್ನಲಿಸ್ಟ್ಸ್ ಅಸೋಶಿಯೇಷನ್ ಆಫ್ ಕರ್ನಾಟಕ ಕಾರ್ಯಾಧ್ಯಕ್ಷ ಸುಧೀಂದ್ರ ರಾವ್. ಪ್ರಧಾನ ಕಾರ್ಯದರ್ಶಿ ವೀರಭದ್ರಪ್ಪ ಬಿಸ್ಲಳ್ಳಿ, ಯಶವಂತಪುರ ಕ್ಷೇತ್ರ ವಿಶ್ವ ಒಕ್ಕಲಿಗರ ವೇದಿಕೆ ಅಧ್ಯಕ್ಷ ಅಶೋಕ ರಾಮಸಂದ್ರ, ವಾಸುಪ್ರಸಾದ್ ಸೇರಿದಂತೆ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ