ಉದಯಸೂರ್ಯನಿಗೆ ಯೋಗ ನಮಸ್ಕಾರ


Team Udayavani, Jun 22, 2019, 3:10 AM IST

udayava

ಚಿತ್ರ: ಫ‌ಕ್ರುದ್ದೀನ್‌ ಎಚ್‌.

5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಶುಕ್ರವಾರ ಸಿಲಿಕಾನ್‌ ಸಿಟಿ ಬೆಂಗಳೂರು ಯೋಗಮಯವಾಗಿತ್ತು. ಮಾಣೆಕ್‌ ಶಾ ಪರೇಡ್‌ ಮೈದಾನ, ಕಂಠೀರವ ಕ್ರೀಡಾಂಗಣ ಸೇರಿದಂತೆ ರಾಜಧಾನಿಯ ಮೂಲೆ ಮೂಲೆಗಳಲ್ಲಿ ಯೋಗ ದಿನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕಂಠೀರವ ಕ್ರೀಡಾಂಗಣದಲ್ಲಿ ಸೂರ್ಯೋದಯದ ವೇಳೆಗೆ ಸುಮಾರು 10 ಸಾವಿರ ಮಂದಿ ಸಾಮೂಹಿಕ ಸೂರ್ಯ ನಮಸ್ಕಾರ ಮಾಡುವ ಮೂಲಕ ಉದಯಭಾನುವನ್ನು ಸ್ವಾಗತಿಸಿದರು. ಶಾಲೆ, ಆಟದ ಮೈದಾನಗಳಲ್ಲಿ ಸಾಮೂಹಿಕ ಯೋಗ ಪ್ರದರ್ಶನ ಮಾಡಿದ್ದು ಕಂಡುಬಂತು. ವಿಶ್ವೇಶ್ವರಯ್ಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಯೋಗ ಕುರಿತ ವಸ್ತು ಪ್ರದರ್ಶನ ಗಮನಸೆಳೆಯಿತು.

ಬೆಂಗಳೂರು: ಒಂದೆಡೆ ಸೂರ್ಯೋದಯ, ಇನ್ನೊಂದೆಡೆ ಜಾತಿ, ಧರ್ಮ, ವಯಸ್ಸಿನ ಭೇದವಿಲ್ಲದೆ ಆ ಸೂರ್ಯನಿಗೆ ನಮಸ್ಕರಿಸಿದ ಸಾವಿರಾರು ಮಂದಿ. ಬಳಿಕ ಯೋಗದ ವಿವಿಧ ಆಸನಗಳ ಪ್ರದರ್ಶನ, ಪ್ರಾಣಾಯಾಮ, ಧ್ಯಾನ… ಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ಸಾಮೂಹಿಕ ಯೋಗ ಪ್ರದರ್ಶನದ ವೇಳೆ ಕಂಡು ಬಂದ ದೃಶ್ಯಗಳಿವು.

5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಆಯುಷ್‌ ಇಲಾಖೆ, ರಾಜ್ಯ ಒಲಿಂಪಿಕ್‌ ಅಸೋಸಿಯೇಷನ್‌ ಸಹಯೋಗದಲ್ಲಿ ನಗರದ ಕಂಠೀರವರ ಕ್ರೀಡಾಂಗಣದಲ್ಲಿ ಸಾಮಾಮೂಹಿಕ ಯೋಗ ಕಾರ್ಯಕ್ರಮ ಆಯೋಜಿಸಿತ್ತು. ಇಲ್ಲಿ ಬೆಂಗಳೂರಿನ ವಿವಿಧ ಯೋಗ ಸಂಸ್ಥೆಗಳ 10 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡು ಬೃಹತ್‌ಮಟ್ಟದಲ್ಲಿ ಯೋಗಾಭ್ಯಾಸ ನಡೆಸಿದರು. “ಹೃದಯಕ್ಕಾಗಿ ಯೋಗ’ ಎಂಬ ಘೋಷವಾಕ್ಯದೊಂದಿಗೆ ಈ ಬಾರಿಯ ಯೋಗದಿನವನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಎಸ್‌.ಪಾಟೀಲ್‌, ಯುವ ಸಬಲೀಕರಣ ಮತ್ತು ಕ್ರೀಡಾಸಚಿವ ರಹೀಂಖಾನ್‌, ಮೇಯರ್‌ ಗಂಗಾಬಿಕೆ, ವಿಧಾನ ಪರಿಷತ್‌ ಸದಸ್ಯರಾದ ಟಿ.ಎ.ಶರವಣ, ಕೆ.ಗೋವಿಂದರಾಜು, ಬಿಬಿಎಂಪಿ ಸದಸ್ಯ ಆರ್‌.ವಸಂತ್‌ಕುಮಾರ್‌, ಆರೋಗ್ಯ ಇಲಾಖೆ ಆಯುಕ್ತ ಪಂಕಜ್‌ಕುಮಾರ್‌ ಪಾಂಡೆ, ಆಯುಷ್‌ ಇಲಾಖೆ ಆಯುಕ್ತೆ ಮೀನಾಕ್ಷಿ ನೇಗಿ ಸೇರಿದಂತೆ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

ಪತಂಜಲಿ ಯೋಗ ಟ್ರಸ್ಟ್‌, ಪತಂಜಲಿ ಯೋಗ ಶಿಕ್ಷಣ ಸಂಸ್ಥೆ, ರಕ್ಷಾ ಯೋಗ ಟ್ರಸ್ಟ್‌, ಯೋಗ ಗಂಗೋತ್ರಿ ಟ್ರಸ್ಟ್‌, ಗಂಗಾ ಯೋಗಾ ಟ್ರಸ್ಟ್‌, ಕುವೆಂಪು ಯೋಗ, ಶ್ವಾಸ ಸಂಸ್ಥೆ ಸೇರಿದಂತೆ ವಿವಿಧ ಯೋಗ ಸಂಸ್ಥೆಗಳ ಸದಸ್ಯರು ಬೆಳಗ್ಗೆ 5.50ಕ್ಕೆ ಕ್ರೀಡಾಂಗಣಕ್ಕೆ ಆಗಮಿಸಿದ್ದರು. 6.05ಕ್ಕೆ ಯೋಗ ಚಟುವಟಿಕೆಗಳು ಆರಂಭವಾದವು. 6.10ಕ್ಕೆ ಯೋಗ ಗಂಗೋತ್ರಿ ಟ್ರಸ್ಟ್‌ ವತಿಯಿಂದ ಯೋಗ ಗುತ್ಛ ಮತ್ತು ಪೇರ್‌ ಯೋಗ ನಡೆಯಿತು. 6.30ಕ್ಕೆ ಪ್ರಕಾಶ್‌ ಗುರೂಜಿಯವರಿಂದ ಷಟ್‌ಕರ್ಮ ವಿಧಿ, 6.45ಕ್ಕೆ ಶ್ವಾಸ ಸಂಸ್ಥೆಯ ಸ್ವಾಮಿ ವಚನಾನಂದರು ಲಾಫಿಂಗ್‌ ಯೋಗ ನಡೆಸಿಕೊಟ್ಟರು. ಬಳಿಕ 7ರಿಂದ 7.36ರವರೆಗೆ ಸರ್ಕಾರದ ಯೋಗ ಶಿಷ್ಟಾಚಾರದಂತೆ ಯೋಗಾಭ್ಯಾಸ ನಡೆದವು.

ಈ ವೇಳೆ ತಾಡಾಸನ, ವೃಕ್ಷಾಸನ, ಅರ್ಧಚಕ್ರಾಸನ, ತ್ರಿಕೋನಾಸನ, ವಜ್ರಾಸನ, ಸುಖಾಸನ, ಮಕರಾಸನ, ಭುಜಂಗಾಸನ, ಪವನಮುಕ್ತಾಸನ, ಕಪಾಲಬಾತಿ, ನಾಡಿಶೋಧ ಸೇರಿ ಯೋಗದ ವಿಭಿನ್ನ ಕ್ರಿಯೆಗಳನ್ನು ಮಾಡಲಾಯಿತು. ಅಂತಿಮವಾಗಿ ಬೆಳಿಗ್ಗೆ 7.40ಕ್ಕೆ ಶ್ರೀ ಪ್ರಕಾಶ್‌ ಗುರೂಜಿಯಿಂದ ಶಾಂತಿ ಮಂತ್ರ ಮತ್ತು ಸಂಕಲ್ಪ ಹಾಗೂ 7.50ಕ್ಕೆ ಶ್ರೀ ಯೋಗರವರಿಂದ ಪ್ರಜ್ಞಾ ಯೋಗ ನೆರವೇರಿತು.

ವಿಶ್ವದ ಹಿರಿಯ ವ್ಯಕ್ತಿಯಿಂದ ಯೋಗ: ಜಗತ್ತಿನ ಹಿರಿಯ ವ್ಯಕ್ತಿ ಮತ್ತು ಯೋಗ ಸಾಧಕ, 123 ವರ್ಷದ ಸ್ವಾಮಿ ಶಿವಾನಂದ ಅವರು ಈ ಬಾರಿ ಪ್ರದರ್ಶನದ ಕೇಂದ್ರ ಬಿಂದುವಾಗಿದ್ದರು. ಮೂಲತಃ ಪಶ್ಚಿಮ ಬಂಗಾಳದ ಸ್ವಾಮಿ ಶಿವಾನಂದರು, ಇಂದಿಗೂ ಅದ್ಭುತವಾಗಿ ಯೋಗಾಸನ ಮಾಡುತ್ತಾರೆ. ಸಭಾ ಕಾರ್ಯಕ್ರಮದ ನಂತರ ವಿವಿಧ ಯೋಗ ಭಂಗಿಗಳನ್ನು ಪ್ರದರ್ಶಿಸಿದರು. “ಸಮತೋಲನ ಆಹಾರ ಮತ್ತು ಯೋಗ ಒಳಗೊಂಡ ಜೀವನಶೈಲಿ ಆರೋಗ್ಯದ ಗುಟ್ಟು’ ಎಂದು ಅವರು ತಿಳಿಸಿದರು.

ಭಾಗವಹಿಸಿದ್ದ ಸಾಧಕರು: ಸಾಮೂಹಿಕ ಯೋಗ ಪ್ರದರ್ಶನಲ್ಲಿ ಶ್ವಾಸ ಸಂಸ್ಥೆಯ ವಚನಾನಂದ ಗುರುಜೀ, ಪತಂಜಲಿ ಯೋಗ ಟ್ರಸ್ಟ್‌ನ ಪ್ರಕಾಶ್‌ ಗುರುಜೀ, ಯೋಗ ಗಂಗೋತ್ರಿಯ ಎನ್‌.ಆರಾಧ್ಯ, ಅರ್ಜಂಟೈನಾದ ಏಕಾರಾ ದೇವಿನಾಥ, ಬಾಗಲಕೋಟೆ ಜಿಲ್ಲೆಯ ಶಿರೂರಿನ “ವಿಜಯ ಮಹಾಂತ ತೀರ್ಥ ಯೋಗ ಮತ್ತು ನಿಸರ್ಗ ಚಿಕಿತ್ಸಾ ಕೇಂದ್ರ’ದ ಡಾ.ಬಸವಲಿಂಗ ಸ್ವಾಮೀಜಿ, ಸ್ವಾಮಿ ಪ್ರಣವಾನಂದ ಬ್ರಹ್ಮೇಂದ್ರ ಅವಧೂತರು ಭಾಗವಹಿಸಿದ್ದರು.
ಆಕರ್ಷಿಸಿದ ಪೇರ್‌ ಯೋಗ

ಯೋಗ ಗಂಗೋತ್ರಿ ಸಂಸ್ಥೆಯಿಂದ ಈ ಬಾರಿ ವಿಶೇಷವಾಗಿ “ಪೇರ್‌ ಯೋಗ’ ನಡೆಯಿತು. ಒಬ್ಬ ಜತೆಗಾರರೊಟ್ಟಿಗೆ ಮಾಡುವ ಯೋಗ ಇದಾಗಿದ್ದು, ಸ್ನೇಹಿತರು, ಕುಟುಂಬ ಸದಸ್ಯರು ಜತೆಗೂಡಿ ಮಾಡುತ್ತಾರೆ. ಒಂಟಿಯಾಗಿ ಮಾಡುವ ಯೋಗಕ್ಕಿಂತ ಭಿನ್ನವಾಗಿದ್ದು, ಪ್ರಮುಖವಾಗಿ ತ್ರಿಕೋನಾಸನ, ಅರ್ಧಚಕ್ರಸಾನಗಳನ್ನು ಮಾಡುತ್ತಾರೆ. ವೇದಿಕೆ ಮೇಲೆ 10 ಜೋಡಿಗಳಿಂದ ಪೇರ್‌ ಯೋಗ ಪ್ರದರ್ಶನ ನಡೆಯಿತು.

ಕೇಳದ ಶಾಲಾ ಮಕ್ಕಳ ಕಲರವ: ಈ ಹಿಂದೆಲ್ಲಾ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಶಾಲಾ ಮಕ್ಕಳ ಸಂಖ್ಯೆ ಹೆಚ್ಚಿರುತ್ತಿತ್ತು. ನಗರದ ವಿವಿಧ ಶಾಲೆಗಳ ಸಾವಿರಾರು ಮಕ್ಕಳನ್ನು ಆಯುಷ್‌ ಇಲಾಖೆಯೇ ಆಹ್ವಾನಿಸಿ ಅವರಿಗೆ ಸಾರಿಗೆ ವ್ಯವಸ್ಥೆ ಮಾಡುತ್ತಿತ್ತು. ಆದರೆ, ಈ ಬಾರಿ ಯೋಗ ದಿನ ಕಾರ್ಯಕ್ರಮಕ್ಕೆ ಶಾಲಾ ಮಕ್ಕಳಿಗೆ ಆಹ್ವಾನವಿರಲಿಲ್ಲ. ಹೀಗಾಗಿ, ಮಕ್ಕಳಿಲ್ಲದೇ ಕ್ರೀಡಾಂಗಣ ಬಣಗುಡುತ್ತಿತ್ತು.

ಆರೋಗ್ಯ ಸೂತ್ರ ಬಿಡುಗಡೆ: ಈ ವೇಳೆ ಉತ್ತಮ ಆರೋಗ್ಯಕ್ಕಾಗಿ 642211 ಆರೋಗ್ಯ ಸೂತ್ರ ಬಿಡುಗಡೆ ಮಾಡಲಾಯಿತು. ಇದರ ವಿಸ್ತೃತರೂಪ; ಮನುಷ್ಯ ನಿತ್ಯ 6 ಗಂಟೆ ನಿದ್ರೆ, 4 ಲೀ. ನೀರು, 2 ಬಾರಿ ಆಹಾರ ಸೇವನೆ, 2 ಬಾರಿ ಪ್ರಾರ್ಥನೆ, ಒಂದು ಗಂಟೆ ಯೋಗಾಭ್ಯಾಸ, ವಾರಕ್ಕೆ ಒಂದು ದಿನ ಉಪವಾಸ ಮಾಡಬೇಕು ಎಂಬುದಾಗಿದೆ.

ಯೋಗ ವ್ಯಾಪಾರಿಕರಣಕ್ಕೆ ತಡೆಯೊಡ್ಡಿ – ಸಚಿವ: ಯೋಗವು ನಮ್ಮ ದೇಶದ ಕೊಡುಗೆಯಾಗಿದೆ. ಆದರೆ, ಕೆಲವು ಸಂಘ ಸಂಸ್ಥೆಗಳು ಯೋಗವನ್ನು ವ್ಯಾಪಾರಿಕರಣಗೊಳಿಸುತ್ತಿದ್ದು, ಅದಕ್ಕೆ ಸ್ವಯಂ ಪ್ರೇರಣೆಯಿಂದ ತಡೆಯೊಡ್ಡಬೇಕಾದ ಅವಶ್ಯತೆ ಇದೆ ಎಂದು ಆರೋಗ್ಯ ಸಚಿವ ಶಿವಾನಂದ ಎಸ್‌ ಪಾಟೀಲ ಕರೆ ನೀಡಿದರು. ಯೋಗ ಇಂದು ವಿಶ್ವದ ಆರೋಗ್ಯ ಸಾಧನವಾಗಿದ್ದು, ಅದನ್ನು ಜಗತ್ತಿಗೆ ಪರಿಚಯಿಸಿದ ಹೆಮ್ಮೆ ಭಾರತೀಯರದ್ದಾಗಿದೆ. ಬೆಂಗಳೂರಿನ ಎಸ್‌.ವ್ಯಾಸ ವಿಶ್ವವಿದ್ಯಾಲಯ ಜಗತ್ತಿನ ಪ್ರಥಮ ಯೋಗ ವಿವಿ ಆಗಿದೆ.

ಆಯುಷ್‌ ಇಲಾಖೆಯು ರಾಜ್ಯದ ಮೂರು ಕಡೆ ಸರ್ಕಾರಿ ಪ್ರಕೃತಿ ಯೋಗ ಚಿಕಿತ್ಸಾ ಕೇಂದ್ರ ಆರಂಭಿಸಿದೆ ಎಂದರು. 2011ರಲ್ಲಿ ಭಾರತ ಕ್ರಿಕೆಟ್‌ ತಂಡ “ವಿಶ್ವಕಪ್‌’ ಗೆಲ್ಲುವಲ್ಲೂ ಯೋಗದ ಕೊಡುಗೆ ಇತ್ತು. ಈ ಬಾರಿಯೂ ಅದೇ ರೀತಿಯಲ್ಲಿ ಭಾರತ ವಿಶ್ವಕಪ್‌ ಗೆಲ್ಲಲಿ ಎಂದು ಆಶಿಸುತ್ತೇನೆ. ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ ಸಂತೃಪ್ತ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಕುಸಿತ ಕಾಣುತ್ತಿದೆ. ಈ ನಿಟ್ಟಿನಲ್ಲಿ ಉತ್ಸಾಹ, ನೆಮ್ಮದಿ ಹಾಗೂ ಉತ್ತಮ ಆರೋಗ್ಯಕ್ಕೆ ನಿತ್ಯಯೋಗಾಭ್ಯಾಸ ಅವಶ್ಯಕ ಎಂದರು.

ಯೋಗದಿಂದ ಸರ್ವ ರೋಗ ನಿವಾರಣೆಯಾಗಲಿದೆ. ಯೋಗವನ್ನು ಶಿಕ್ಷಣದಲ್ಲಿ ಕಡ್ಡಾಯವಾಗಿ ಅಳವಡಿಸಿದರೆ ಆರಂಭದಿಂದಲೇ ಯೋಗ ಮಕ್ಕಳ ಜೀವನದ ಭಾಗವಾಗಲಿದೆ.
-ಶರವಣ, ವಿಧಾನ ಪರಿಷತ್‌ ಸದಸ್ಯ

ಯೋಗ ಭಾರತದಲ್ಲಿ ಹುಟ್ಟಿದರೂ ಇಂದು ಅದರಿಂದ ವಿದೇಶಿಗರು ಹೆಚ್ಚು ಲಾಭ ಪಡೆಯುತ್ತಿದ್ದಾರೆ. ಯುವಜನತೆ ಕಡ್ಡಾಯವಾಗಿ ಯೋಗಾಭ್ಯಾಸ ಮಾಡಿ ದೈಹಿಕ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು.
-ರಹೀಂ ಖಾನ್‌, ಯುವಜ ಸಬಲೀಕರಣ ಮತ್ತು ಕ್ರೀಡಾ ಸಚಿವ

ಟಾಪ್ ನ್ಯೂಸ್

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.