ಬೆಳೆ ಹಾನಿ: ಪ್ರಾಣಿಗಳ ನಿಯಂತ್ರಣದ ಬಗ್ಗೆ ಅರಿವು ಅಗತ್ಯ


Team Udayavani, Sep 27, 2021, 3:06 PM IST

ಬೆಳೆ ಹಾನಿ: ಪ್ರಾಣಿಗಳ ನಿಯಂತ್ರಣದ ಬಗ್ಗೆ ಅರಿವು ಅಗತ್ಯ

ದೊಡ್ಡಬಳ್ಳಾಪುರ: ರೈತರು ಬೆಳೆದ ಬೆಳೆಗಳನ್ನು ಇಲಿ, ಮೊದಲಾದ ಪ್ರಾಣಿ ಪೀಡೆಗಳು ನಾಶಪಡಿಸುವುದರೊಂದಿಗೆ ಹಲವಾರು ಆರೋಗ್ಯ ಸಮಸ್ಯೆ ತಂದೊಡ್ಡುತ್ತವೆ. ಈ ರೀತಿಯ ಪೀಡಕ ಪ್ರಾಣಿಗಳ ನಿಯಂತ್ರಣದ ಬಗ್ಗೆ ರೈತರು ಅರಿವು ಮೂಡಿಸಿಕೊಂಡು ವಿವಿಧ ತಂತ್ರಗಳ ಮೂಲಕ ಪ್ರಾಣಿಗಳ ಹಾವಳಿ ನಿಯಂತ್ರಿಸಿಕೊಳ್ಳಬೇಕಿದೆ ಎಂದು ಜಿಕೆವಿಕೆ ಪ್ರಾಧ್ಯಾಪಕ ಡಾ.ಮೋಹನ ನಾಯಕ್‌ ತಿಳಿಸಿದರು.

ತಾಲೂಕಿನ ವಡ್ಡರಹಳ್ಳಿಯಲ್ಲಿ ಬೆಂಗಳೂರು ಕೃಷಿ ವಿವಿಯ ಬಿಎಸ್ಸಿ(ಕೃಷಿ) ಅಂತಿಮ ವರ್ಷದವಿದ್ಯಾರ್ಥಿಗಳ ಸ್ಟೂಡೆಂಟ್‌ ರೆಡಿ ಕಾರ್ಯಕ್ರಮದಡಿ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಿಗೆ ಕಶೇರುಕಪ್ರಾಣಿ ಪೀಡೆಗಳ ನಿರ್ವಹಣೆ ವಿಷಯ ಕುರಿತುಮಾತನಾಡಿದ ಅವರು, ರೈತರಿಗೆ ಪ್ರಮುಖ ಸಮಸ್ಯೆ ಎಂದರೆ ಬೆಳೆಗಳಿಗೆ ಇಲಿ ಕಾಟ. ಬಿತ್ತನೆಯಿಂದಕೊಯ್ಲಿನವರೆಗೆ, ಕೊಯ್ಲಿನಿಂದ ಮಾರುಕಟ್ಟೆಗೆ ಬೆಳೆ ಕೊಂಡೊಯ್ಯುವವರೆಗೆ ಪ್ರತಿ ಹಂತದಲ್ಲಿಯೂ ಇಲಿ ಕಾಟ ರೈತರಿಗೆ ತಪ್ಪಿದ್ದಲ್ಲ. ಒಮ್ಮೊಮ್ಮೆ ಅವು ಮಾಡುವ ನಷ್ಟ ಬಲು ದುಬಾರಿ. ಹೀಗಾಗಿ ಇಲಿಗಳಿಂದ ರೈತರ ಆದಾಯವೂ ಕುಂಠಿತವಾಗುತ್ತಿದೆ ಎಂದರು.

ಇಲಿಗಳು ಮನೆ, ಹೊಲ, ಗದ್ದೆ, ತೋಟ, ಮೈದಾನ ಹೀಗೆ ಎಲ್ಲ ಕಡೆ ವಾಸಿಸುತ್ತವೆ. ಇವುಗಳು ಪುಟ್ಟ ಜೀವಿಗಳಾಗಿದ್ದರೂ ಸಹ ರಾಷ್ಟ್ರದ ಆಹಾರಮತ್ತು ಆರ್ಥಿಕ ಪರಿಸ್ಥಿತಿಗಳ ಮೇಲೆ ಪರಿಣಾಮಬೀರುವುದರಿಂದ ಮನುಷ್ಯನಿಗೆ ಅನೇಕ ರೋಗಉಂಟು ಮಾಡುತ್ತವೆ. ಮುಖ್ಯವಾಗಿ ಆಮಶಂಕೆ, ಕಾಮಾಲೆ, ರಿಕೆಟ್ಸೆಯಾ, ಪ್ಲೇಗ್‌ ಮೊದಲಾದರೋಗಗಳನ್ನು ಹರಡುತ್ತವೆ. ಇಲಿಗಳಲ್ಲಿ ಹಲವಾರು ಪ್ರಬೇಧಗಳಿದ್ದು, ಅವುಗಳ ನಿಯಂತ್ರಣಕ್ಕೆ ಬೇರೆ ವಿಧಾನಗಳನ್ನು ಅನುಸರಿಸಬೇಕಾಗುತ್ತದೆ ಎಂದರು.

ಗೋದಾಮುಗಳಲ್ಲಿ ಎಚ್ಚರವಹಿಸಿ: ಇಲಿಗಳನ್ನು ಜೀವಂತವಾಗಿ ಹಿಡಿಯಲು ಅಥವಾ ಕೊಲ್ಲಲು ಹಲವಾರು ಸಾಧನಗಳು ಈಗಾಗಲೇ ಮಾರುಕಟ್ಟೆ  ಯಲ್ಲಿ ಲಭ್ಯವಿದ್ದು, ಅವುಗಳನ್ನು ಬಳಸಿ ಇಲಿಗಳಹತೋಟಿ ಮಾಡಬಹುದು. ಬೋನ್‌ಗಳಲ್ಲಿ ಆಹಾರಇಟ್ಟು ಬೀಳಿಸಬಹುದು. ಆದರೆ, ಇಲಿಗಳು ಬಿದ್ದ ನಂತರ ಅವರನ್ನು ವಿಲೇವಾರಿ ಮಾಡಿ ನಂತರ ಬೋನ್‌ ಸೋಪು ನೀರಿನಿಂದ ಚೆನ್ನಾಗಿತೊಳೆಯಬೇಕು. ಇಲ್ಲವಾದಲ್ಲಿ ಇಲಿಗಳು ಹೊರಸೂಸಿದ್ದ ರಾಸಾಯನಿಕದ ವಾಸನೆಗೆ ಬೇರೆ ಇಲಿಗಳುಬೋನ್‌ಗಳಿಗೆ ಬೀಳುವುದಿಲ್ಲ. ಧಾನ್ಯಗಳನ್ನುಸಂಗ್ರಹಿಸುವ ಗೋದಾಮುಗಳಲ್ಲಿ ಇಲಿಗಳ ಪ್ರವೇಶ ಆಗದಂತೆ ಎಚ್ಚರ ವಹಿಸಬೇಕು ಎಂದರು.

ಕಾನೂನಿನ ನಿಯಂತ್ರಣವಿದೆ: ಬೆಳೆಗಳಿಗೆ ಹಾನಿ ಮಾಡುವ ಎಲ್ಲ ಪ್ರಾಣಿಗಳನ್ನು ಕೊಲ್ಲಲು ಕಾನೂನಿನ ನಿಯಂತ್ರಣವಿದೆ. ಉದಾಹರಣೆಗೆ ನವಿಲುಗಳು. ನವಿಲುಗಳು ಭಾರದಂತೆ ಸೆಣಬಿನ ದರವನ್ನು ಬೆಳೆ ಅಂತಿಮ ಹಂತಕ್ಕೆ ಬಂದಾಗ ಬೆಳೆಯ ಬೇಲಿ ಸುತ್ತಲೂ ಕಟ್ಟಬೇಕಿದೆ. ಬೆಳೆಗಳ ಹಾವಳಿ ಮಾಡುವ ಪ್ರಾಣಿಗಳ ನಿಯಂತ್ರಣದ ಬಗ್ಗೆ ಕೃಷಿ ಅಧಿಕಾರಿಗಳನ್ನು ಭೇಟಿ ಮಾಡಿ ಸಲಹೆಗಳನ್ನು ಪಡೆಯಬಹುದಾಗಿದೆ ಎಂದರು. ಜಿಕೆವಿಕೆ ಸಹಾಯಕ ಪ್ರಾಧ್ಯಾಪಕ ಡಾ.ಕೆ.ರವಿಕಿರಣ್‌, ಸಹಾಯಕ ಸಂಶೋಧಕ ಡಾ.ಬಸವ ದರ್ಶನ, ಸಿಬ್ಬಂದಿಚಂದ್ರಶೇಖರ್‌, ಕಂಟನಕುಂಟೆ ಗ್ರಾಪಂ ಅಧ್ಯಕ್ಷೆ ಶೋಭಾ, ಸದಸ್ಯ ರಾಮಚಂದ್ರ ರೆಡ್ಡಿ, ಶ್ರೀನಿವಾಸ ರೆಡ್ಡಿ, ಗ್ರಾಮಸ್ಥರು ಹಾಗೂ ವಿದ್ಯಾರ್ಥಿ ಇದ್ದರು.

ಟಾಪ್ ನ್ಯೂಸ್

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

Kohli IPL 2024

IPL; 10 ಸೀಸನ್‌, 400 ರನ್‌: ಕೊಹ್ಲಿ ಸಾಧನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

10

Electricity problem: ಬೇಸಿಗೆ ಬೆನ್ನಲ್ಲೇ ಕಾಡುತ್ತಿದೆ ವಿದ್ಯುತ್‌ ಸಮಸ್ಯೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.