ಈಜುಕೊಳದಲ್ಲಿ ಜಲಯೋಗ
Team Udayavani, Jun 22, 2019, 1:16 PM IST
ಬೆಳಗಾವಿ: ನಗರದ ಜೆಎನ್ ಎಂ.ಸಿ ಆವರಣದಲ್ಲಿರುವ ಸುವರ್ಣ ಈಜುಕೊಳದಲ್ಲಿ ಜಲಯೋಗ ಕಾರ್ಯಕ್ರಮ ನಡೆಯಿತು.
ಬೆಳಗಾವಿ: ನಗರದ ಜೆಎನ್ಎಂಸಿ ಆವರಣದಲ್ಲಿರುವ ಸುವರ್ಣ ಈಜುಕೊಳದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ, ಜಿಲ್ಲಾ ಆಯುಷ್ ಇಲಾಖೆ ಹಾಗೂ ಕೆಎಲ್ಇ ವಿಶ್ವವಿದ್ಯಾಲಯ ಸಹಯೋಗದಲ್ಲಿ ಯೋಗ ದಿನಾಚರಣೆ ನಿಮಿತ್ತ ಶುಕ್ರವಾರ ಜಲಯೋಗ ಕಾರ್ಯಕ್ರಮ ನಡೆಯಿತು.
ಕೆಎಲ್ಇ ಈಜು ತರಬೇತುದಾರ ಉಮೇಶ ಕಲಘಟಗಿ ಜಲಯೋಗದಲ್ಲಿ ವಜ್ರಾಸನ, ಉಷ್ಟ್ರಾಸನ, ಪವನಮುಕ್ತಾಸನ, ಭುಜಂಗಾಸನ, ಉತ್ಥಾನ ಪಾದಾಸನ, ಶವಾಸನ, ಕಾಳಾಸನ, ತಾರಾಸನ, ಹನುಮಾನಾಸನ, ಪದ್ಮಾಸನ, ಜ್ಞಾನ ಯೋಗ, ನಿತ್ಯಾಸನ, ಧನುರಾಸನ, ಕೃಷ್ಣಾಸನ, ಮಚ್ಚಾಸನ, ಹಂಸಾಸನ, ಅರ್ಧ ಜಲಾಸನ, ಬಾಲಾಸನ, ಭದ್ರಾಸನಗಳನ್ನು ಪ್ರದರ್ಶಿಸಿದರು.
ಮಾಹೇಶ್ವರಿ ಅಂಧ ಮಕ್ಕಳ ಶಾಲಾ ವಿದ್ಯಾರ್ಥಿಗಳು ಸೂರ್ಯ ನಮಸ್ಕಾರ, ವಿರಾಸನ, ವೃಕ್ಷಾಸನ, ಅರ್ಧ ಚಕ್ರಾಸನ, ಸೂಕ್ತ ವೀರಾಸನಾ, ಉಷ್ಟ್ರಾಸನ, ಪಶ್ಚಿಮೋತ್ಥಾಸನ, ಧನುರಾಸನ, ಚಕ್ರಾಸನ ಪ್ರದರ್ಶಿಸಿದರು.
28 ಅಂತಾರಾಷ್ಟ್ರೀಯ ಪದಕ ಪಡೆದ ರಾಘವೇಂದ್ರ ಅನ್ವೇಕರ ಹಾಗೂ ಮೊಯಿನ್ ಜುನೇದಿ, 3 ಅಂತಾರಾಷ್ಟ್ರೀಯ ಪದಕ ಪಡೆದ ಸಿಮ್ರಾನ ಗೌಂಡಾಲ್ಕರ ಹಾಗೂ ರೋಹನ್ ತಾರಿಹಾಳಕರ, ಸಂಜಯ ಹಂಚಿನಮನಿ ಅವರು ಈಜು ಕೊಳದಲ್ಲಿ ವಿವಿಧ ಪ್ರಕಾರದ ಜಲಯೋಗ ಪ್ರದರ್ಶನ ಮಾಡಿದರು.
ಉತ್ತಮ ಜಲಯೋಗ ಮಾಡಿದವರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಕೆಎಲ್ಇ ವಿವಿ ಕುಲಪತಿ ವಿವೇಕ ಸಾವೋಜಿ, ಜಿಲ್ಲಾ ಆಯುಷ ಅಧಿಕಾರಿ ಡಾ| ಸುರೇಶ ದೊಡವಾಡ, ಶ್ರೀಕಾಂತ ಸುನಧೋಳಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಕೆಎಲ್ಇ ಈಜು ಕೊಳದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ