ಸೂಕ್ತ ಮಾರುಕಟ್ಟೆ ಅಲಭ್ಯ; ಕೊಳೆತ ಎಲೆಕೋಸು!
ಕೈ ಸುಟ್ಟುಕೊಂಡ ಬೆಳೆಗಾರರುರೈತರಿಗೆ ಬೇಕಿದೆ ಸರ್ಕಾರದ ಸಹಾಯಹಸ್ತ
Team Udayavani, Apr 8, 2020, 4:30 PM IST
ಬೈಲಹೊಂಗಲ: ಯರಗುದ್ದಿ ಗ್ರಾಮದ ರೈತ ನಾಗಪ್ಪ ಬೆಳೆದ ಎಲೆಕೋಸು ಕೊಳೆತಿರುವುದು.
ಬೈಲಹೊಂಗಲ: ತಾಲೂಕಿನ ವಿವಿಧ ಗ್ರಾಮದಲ್ಲಿ ರೈತರು ಬೆಳೆದ ಎಲೆಕೋಸು (ಕೋಬಿಜ್) ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದ ಕಾರಣ ಕೊಳೆತು ಹೋಗುವ ಸ್ಥಿತಿ ತಲುಪಿದ್ದು, ಅನ್ನದಾತನ ಬೆಳೆಹಾನಿಗೆ ಕೊನೆಯೇ ಇಲ್ಲದಂತಾಗಿದೆ. ತಾಲೂಕಿನಲ್ಲಿ ಸುಮಾರು 268 ಹೆಕ್ಟೇರ್ ಪ್ರದೇಶದಲ್ಲಿ ಎಲೆಕೋಸು ಬೆಳೆಯಲಾಗುತ್ತಿದೆ.
ಸಮೀಪದ ಯರಗುದ್ದಿ ಗ್ರಾಮದ ರೈತ ನಾಗಪ್ಪ ಉಳವಪ್ಪ ಸುಣದೊಳ್ಳಿ ಅವರು ತಮ್ಮ ಒಂದೂವರೆ ಎಕರೆಯಲ್ಲಿ ಎಲೆಕೋಸು ಬೆಳೆದಿದ್ದು, ಇನ್ನೇನು ಮಾರುಕಟ್ಟೆಗೆ ಸಾಗಿಸಬೇಕು ಎನ್ನುವ ಹಂತದಲ್ಲಿದ್ದಾಗ ಮಹಾಮಾರಿ ಕೊರೊನಾ ರೋಗದ ಭೀತಿಯಿಂದ ಲಾಕ್ಡೌನ್ ಮಾಡಿದ್ದರಿಂದ ಸೂಕ್ತ ಮಾರುಕಟ್ಟೆ ಸಿಗಲಿಲ್ಲ. ಇದರಿಂದ ಫಸಲು ಬಿಡಿಸಲು ಆಳುಗಳು ಇಲ್ಲ. ಜೊತೆಗೆ ಸಾಗಾಣಿಕೆಗೆ ಸಾರಿಗೆ ಸೌಕರ್ಯಗಳಿಲ್ಲದ ಕಾರಣ ಎಲೆಕೋಸು ಜಮೀನಿನಲ್ಲೇ ಕೊಳೆಯುತ್ತಿದೆ.
ಸುಮಾರು ಐದು ಲಕ್ಷ ರೂ. ಹಾನಿಯಾಗುತ್ತದೆ ಎನ್ನಲಾಗಿದೆ. ಒಂದೆಡೆ ಕೃಷಿ ಸಚಿವ ಬಿ.ಸಿ. ಪಾಟೀಲರು ರೈತರು ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ ಒದಗಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇನ್ನೊಂದೆಡೆ ಸೂಕ್ತ ಮಾರುಕಟ್ಟೆ ಇಲ್ಲದ ಕಾರಣ ಬೈಲಹೊಂಗಲ ತಾಲೂಕಿನ ಅನೇಕ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಕಷ್ಟ ಪಟ್ಟು ಬೆಳೆದ ಬೆಳೆಯನ್ನು ರೈತರು ನಾಶಪಡಿಸುವ ಮುನ್ನ ಸರ್ಕಾರ ರೈತರ ಸಹಾಯಕ್ಕೆ ಬರಬೇಕಿದೆ.
ಕಾಯಿಪಲ್ಲೆ, ತರಕಾರಿ ಎಲ್ಲಿಯಾದರೂ ಮಾರುಕಟ್ಟೆ ಸಿಗದೆ ಹಾನಿಯಾಗುತ್ತಿದ್ದಲ್ಲಿ ಅದಕ್ಕೆ ಮಾರುಕಟ್ಟೆ ಒದಗಿಸಲು ಸರಕಾರ ವ್ಯವಸ್ಥೆ ಮಾಡುತ್ತದೆ. ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಿದರೆ ಮಾರುಕಟ್ಟೆ ಒದಗಿಸಲಾಗುವುದು. ತರಕಾರಿ ರೋಗದಿಂದ ಹಾನಿಯಾದಲ್ಲಿ ಸದ್ಯಕ್ಕೆ ಸರಕಾರದಿಂದ ಪರಿಹಾರದ ಬಗ್ಗೆ ಆದೇಶ ಬಂದಿಲ್ಲ.
ನವೀನ ಬಡಿಗೇರ, ತೋಟಗಾರಿಕೆ ಇಲಾಖೆ
ಸಹಾಯಕ ನಿರ್ದೇಶಕ, ಬೈಲಹೊಂಗಲ
ಸಿ.ವೈ. ಮೆಣಶಿನಕಾಯಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಚನ್ನಮ್ಮನ ಕಿತ್ತೂರು: ಮಹಾನ್ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ
Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ
I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್