60 ವರ್ಷ ದೇಶ ಆಳಿ ಅಧೋಗತಿಗೆ ತಂದ ಕಾಂಗ್ರೆಸ್
Team Udayavani, Apr 14, 2021, 3:28 PM IST
ಬೈಲಹೊಂಗಲ: ಭಾರತವನ್ನು ಬಲಿಷ್ಟ ರಾಷ್ಟ್ರವನ್ನಾಗಿ ರೂಪಿಸಲು ಪ್ರಜ್ಞಾವಂತಮತದಾರರು ಲೋಕಸಭೆ ಉಪಚುನಾಣೆಯಲ್ಲಿಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಅವರಿಗೆಆಶೀರ್ವದಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕೈ ಬಲ ಪಡಿಸಬೇಕು ಎಂದು ವಿಧಾನಪರಿಷತ್ ಸದಸ್ಯೆ ತೇಜಸ್ವಿನಿಗೌಡ ರಮೇಶ ಹೇಳಿದರು.
ಪಟ್ಟಣದ ನ್ಯಾಯಾಲಯ ಆವರಣದಲ್ಲಿ ರಾಜ್ಯ ಬಿಜೆಪಿ ಕಾನೂನು ಪ್ರಕೋಷ್ಠದಿಂದ ಸೋಮವಾರ ನಡೆದ ಚುನಾವಣೆ ಪ್ರಚಾರದಲ್ಲಿ ಅವರು ಮಾತನಾಡಿ, 60 ವರ್ಷ ದೇಶವನ್ನಾಳಿದ ಕಾಂಗ್ರೆಸ್ ಪಕ್ಷ ದೇಶವನ್ನು ಅಧೋಗತಿಗೆ ತಂದುಅನ್ಯ ರಾಷ್ಟ್ರಗಳೆದರು ಸಾಲಗಾರರನ್ನಾಗಿಸಿಭಾರತಕ್ಕೆ ಮಸಿ ಬಳಿದಿದ್ದರು. ಆದರೆ ಈಗಿನ ಪ್ರಧಾನಿ ಇಡೀ ವಿಶ್ವವೇ ಬೇರರಾಗುವ ರೀತಿಯಲ್ಲಿ ದೇಶವನ್ನು ಮುನ್ನಡೆಸುತ್ತಿದ್ದಾರೆ.
ಇದನ್ನು ಅರಗಿಸಿಕೊಳ್ಳಲಾಗದ ಕಾಂಗ್ರೆಸ್ನವರು ವಿನಾಕಾರಣ ಕೇಂದ್ರ, ರಾಜ್ಯ ಸರ್ಕಾರ ವಿರುದ್ಧಗೂಬೆ ಕೂರಿಸುತ್ತಿದ್ದಾರೆ. ಸತತ ನಾಲ್ಕು ಬಾರಿ ಚುನಾಯಿತರಾಗಿ ರೈಲ್ವೆ ಸಚಿವರಾಗಿದ್ದ ಸುರೇಶಅಂಗಡಿ ಅವರು ಹಲವು ಯೋಜನೆ ಜಾರಿಗೆತಂದಿದ್ದಾರೆ. ಅವರ ಕನಸು ನನಸು ಮಾಡುವನಿಟ್ಟಿನಲ್ಲಿ ಮಂಗಲಾ ಅವರು ಕಾರ್ಯೋನ್ಮಕರಾಗಿಕೆಲಸ ಮಾಡಲು ಚುನಾವಣೆಯಲ್ಲಿ ಪ್ರಚಂಡಬಹುಮತದಿಂದ ಗೆಲ್ಲಿಸಬೇಕು. ಈ ನಿಟ್ಟಿನಲ್ಲಿಬಿಜೆಪಿ ಕಾನೂನು ಘಟಕ ಕೆಲಸ ಮಾಡಬೇಕು ಎಂದರು.
ಬೆಳಗಾವಿ ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ, ಬಿಜೆಪಿ ಕಾನೂನು ಪ್ರಕೋಷ್ಠರಾಜ್ಯ ಸಂಚಾಲಕ ಎಸ್.ಎಸ್. ಮಿತ್ತಲಕೋಡಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಶಿವಾನಂದ ಆನಿಗೋಳ ಅಧ್ಯಕ್ಷತೆ ವಹಿಸಿದ್ದರು.ಸದಸ್ಯರಾದ ದೇವರಾಜ ಬಸ್ತವಾಡೆ,ಬಿ.ಟಿ.ದಯಾನಂದ, ಜಿಲ್ಲಾ ಸಂಚಾಲಕ ವಿನೋದಪಾಟೀಲ, ವಕೀಲರಾದ ಅಶೋಕ ಮೂಗಿ, ಶಶಿಧರ ದೇವಶೆಟ್ಟಿ, ರಾಜೇಂದ್ರ ದರೆಗೌಡ, ಮಂಜುನಾಥ ಸೋಮಣ್ಣವರ, ಪೂರ್ಣಿಮಾ,ವಕೀಲರಾದ ದುಂಡೇಶ ಗರದಗ, ಡಿ.ಎಸ್.ಸಂಗೊಳ್ಳಿ, ವಿ.ಸಿ.ಪೂಜೇರ, ಬಿ.ಎಂ.ಮೂಲಿಮನಿ,ಈರಣ್ಣಾ ಮೇಟಿ, ಬಸವರಾಜ ಧೋತರದ,ಜಗದೀಶ ಚಿಕ್ಕೊಪ್ಪ, ಜಯಶ್ರೀ ಬೂದಿಹಾಳ,ಗಿರಿಜಾ ಆಲದಕಟ್ಟಿ, ಅಶ್ವಿನಿ ಪಿರಗೋಜಿ ಇದ್ದರು.ಸಂತೋಷ ಭಾಂವಿ ಸ್ವಾಗತಿಸಿದರು. ಐ.ಎಫ್. ತಡಸಲ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್ಕಮ್ ಹೊಟೇಲ್ನಲ್ಲಿ ವ್ಯವಸ್ಥೆ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
ಚನ್ನಮ್ಮನ ಕಿತ್ತೂರು: ಮಹಾನ್ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ
MUST WATCH
ಹೊಸ ಸೇರ್ಪಡೆ
Devotion: ಭಕ್ತಿಯ ಅರ್ಥವಾದರೂ ಏನು?
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು