ಯರಗಟ್ಟಿ ತಾಲೂಕು ರಚನೆಗೆ ವ್ಯಾಪಕ ಹರ್ಷ
Team Udayavani, Feb 28, 2019, 10:19 AM IST
ಯರಗಟ್ಟಿ: ದಶಕಗಳ ಹೋರಾಟದ ಫಲವಾಗಿ ಬುಧವಾರ ಯರಗಟ್ಟಿಯನ್ನು ತಾಲೂಕನ್ನಾಗಿ ಘೋಷಣೆ ಮಾಡುತ್ತಿದ್ದಂತೆ ಸ್ಥಳೀಯ ಕರವೇ, ರೈತಸೇನೆ, ದಲಿತ ಸಂಘರ್ಷ ಸೇರಿದಂತೆ ಇತರೆ ಸಂಘಟನೆಗಳು ಮತ್ತು ಮುಖಂಡರು ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಈ ವೇಳೆ ಹೊರಾಟಗಾರರು ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸಿದರು. ಹಲವು ದಶಕಗಳಿಂದ ಕರವೇ, ರೈತ ಸೇನೆ ಮತ್ತು ಸಂಘಟನೆಗಳು ನಿರಂತರ ಹೋರಾಟ ಮಾಡುವುದರ ಜೊತೆಗೆ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಹೋರಾಟದ ವೇದಿಕೆಗೆ ರಮೇಶ ಜಾರಕಿಹೊಳಿ, ಬಸವರಾಜ ಹೊರಟ್ಟಿ, ಆರ್.ವ್ಹಿ. ದೇಶಪಾಂಡೆ, ಸುರೇಶ ಅಂಗಡಿ, ಆರ್.ಬಿ. ತಮ್ಮಾಪುರ ಮುಂತಾದವರು ಆಗಮಿಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು.
ಕಳೆದ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಸ್ಥಳೀಯ ಶಾಸಕ ಆನಂದ ಮಾಮನಿ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮನವರಿಕೆ ಮಾಡಿದ ನಿಮಿತ್ತ ಈಗ ಯರಗಟ್ಟಿ ತಾಲೂಕನ್ನಾಗಿ ಘೋಷಿಸಲಾಗಿದೆ ಎಂದು ಹೋರಾಟಗಾರರು ಹೇಳಿದರು.
ರಾಜರಾಜೇಶ್ವರಿ ಆಶ್ರಮದ ಗನಪತಿ ಮಹಾರಾಜರು, ಚಿಕ್ಕೊಪ್ಪದ ಶಿವಾಚಾರ್ಯ ಸ್ವಾಮೀಜಿ, ಜಿಪಂ ಸದಸ್ಯ ಅಜಿಕುಮಾರ ದೇಸಾಯಿ, ವ್ಹಿ.ಜಿ. ಕೊಪ್ಪದ, ಎಚ್.ಎಸ್. ಗಂಗರಡ್ಡಿ, ಸದಾನಂದ ಹನಬರ, ಇಮಾಮಸಾಬ ಹುಸೆನಾಯ್ಕರ, ಡಿ.ಕೆ. ರಫಿಕ, ಸೋಮು ರ್ಯಾನಾಪುರ, ಪ್ರವೀಣ ಪಠಾತ, ಸಂಜೀವ ಚನ್ನಮೇತ್ರಿ, ಸಮೀರ ಜಮಾದಾರ, ಕುಮಾರ ಜಕಾತಿ, ರತ್ನಾಕರ ಶೆಟ್ಟಿ, ಸಂಘನಗೌಡ ದ್ಯಾಮನಗೌಡರ, ವಿವಿಧ ಗ್ರಾಮಗಳ ಮುಖಂಡರು ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
ಚನ್ನಮ್ಮನ ಕಿತ್ತೂರು: ಮಹಾನ್ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ
Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ