ಸಾಧನೆಗಳಿಂದ ವ್ಯಕ್ತಿಯ ನೆನಪು ನಿರಂತರ: ಶ್ರೀ
ಹಿರಿಯ ಸಹಕಾರಿ ದಿ| ಮಲ್ಲಯ್ಯಸ್ವಾಮಿ ಕವಟಗಿ ಮಠ ಅವರ 25ನೇ ಪುಣ್ಯಸ್ಮರಣೆ ಸಮಾರಂಭ
Team Udayavani, Apr 8, 2022, 1:23 PM IST
ಚಿಕ್ಕೋಡಿ: ನಮ್ಮ ಹಿಂದಿನ ತಲೆಮಾರಿನ ಹಿರಿಯರ ಅನುಭವ ಹಾಗೂ ಇತಿಹಾಸವನ್ನು ಇಂದಿನ ಪೀಳಿಗೆ ತಿಳಿದುಕೊಂಡರೆ ಮಾತ್ರ ಹೊಸ ಇತಿಹಾಸ ಸೃಷ್ಟಿಸಲು ಸಾಧ್ಯ ಎಂದು ನಿಡಸೋಸಿ ಸಿದ್ಧ ಸಂಸ್ಥಾನ ಮಠದ ಜಗದ್ಗುರು ಪಂಚಮ ಶ್ರೀ ಶಿವಲಿಂಗೇಶ್ವರ ಸ್ವಾಮಿಗಳು ಹೇಳಿದರು.
ಅವರು ಗುರುವಾರ ಪಟ್ಟಣದ ಹಾಲಟ್ಟಿಯ ಕವಟಗಿಮಠ ಫಾರ್ಮ್ ಹೌಸ್ನಲ್ಲಿ ಆಯೋಜಿಸಿದ್ದ ಹಿರಿಯ ಸಹಕಾರಿ ದಿ| ಮಲ್ಲಯ್ಯಸ್ವಾಮಿ ಕವಟಗಿ ಮಠ ಅವರ 25ನೇ ಪುಣ್ಯಸ್ಮರಣೆ ಸಮಾರಂಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇತಿಹಾಸ ತಿಳಿದುಕೊಂಡವರಲ್ಲಿ ದೇಶದಲ್ಲಿ ಧರ್ಮ ಉಳಿಸುವ ಚಿಂತನೆಗಳು ನೆಲೆಸುತ್ತವೆ. ಹೀಗಾಗಿ ಈ ಹಿಂದಿನ ತಲೆಮಾರಿನ ಯೋಚನೆ-ಆಲೋಚನೆಗಳಲ್ಲಿ ಸಮಾಜ ಮುಖೀ ಧೋರಣೆಗಳು ಇಂದಿಗೂ ಅವರ ಜೀವಂತಿಕೆ ಉಳಿಸಿವೆ ಎಂದರು. ಅಲ್ಲದೇ ಸಮಾಜದಲ್ಲಿ ಓರ್ವ ವ್ಯಕ್ತಿಯ ಹೆಸರು ಅಚ್ಚಳಿಯದೇ ಉಳಿಯಬೇಕಾದರೆ ಆತ ಮಾಡಿದ ಕಾರ್ಯಗಳಿಂದ ಮಾತ್ರ ಸಾಧ್ಯವೆಂದರು.
ಮಲ್ಲಯ್ನಾಸ್ವಾಮಿ ಕವಟಗಿಮಠ ಅವರು ಜಾತಿ-ಮತ-ಪಂಥಗಳನ್ನು ಮೀರಿ ನಿಂತು ಕಾರ್ಯಸಾಧನೆ ಮಾಡಿದ್ದಾರೆ. ಸ್ವಾತಂತ್ರ್ಯ ನಂತರ ನಾಡನ್ನಾಳಿದ ಗಾಂಧಿವಾದಿಗಳಲ್ಲಿ ಮಲ್ಲಯ್ಯ ಸ್ವಾಮಿಗಳು ಸಹ ಒಬ್ಬರು. ಅವರ ಹೆಸರಿನಲ್ಲಿ ಸಮಾಜಿ ಮುಖೀ ಕೆಲಸಗಳನ್ನು ಕವಟಗಿಮಠ ಸಹೋದರರು ಮಾಡಬೇಕೆಂದರು. ಗಡಿಭಾಗದಲ್ಲಿ ಸಹಕಾರ ಹಾಗೂ ಶಿಕ್ಷಣ ರಂಗ ಬಲವರ್ಧನೆ ಮೂಲಕ ಗ್ರಾಮೀಣ ಪ್ರದೇಶದ ರೈತರ ಪ್ರಗತಿಗೆ ಅತ್ಯಮೂಲ್ಯ ಕೊಡುಗೆ ನೀಡಿದ ಕೀರ್ತಿ ಎಂಕೆ ಅವರಿಗೆ ಸೇರುತ್ತದೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ಓರ್ವ ವ್ಯಕ್ತಿ ತನ್ನ ಜೀವನದಲ್ಲಿ ಹುಟ್ಟು-ಸಾವಿನ ನಡುವೆ ಮಾಡುವ ಸಾಧನೆಗಳು ಆತನ ಜೀವಂತಿಕೆಯನ್ನು ಚಿರಕಾಲ ನೆನಪಿಡುವಂತೆ ಮಾಡುವುದೇ ಸಾಧನೆ. ನನ್ನ ತಂದೆ ಎಂ.ಕೆ. ಕವಟಗಿಮಠ ಅವರ ಸಾಧನೆಗಳು ಮುಂದಿನ ಪೀಳಿಗೆಗೂ ತಲುಪಬೇಕೆನ್ನುವ ಸದಾಶಯ ನಮ್ಮದಾಗಿದೆ ಎಂದರು.
ಬೆಳಗ್ಗೆ ಎಂ.ಕೆ. ಕವಟಗಿಮಠ ಸಮಾಧಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಪ್ರಸಾದ ವ್ಯವಸ್ಥೆಗೆ ನೀಡಸೋಸಿ ಪೂಜ್ಯರು ಪೂಜೆ ನೆರವೇರಿಸಿ ಚಾಲನೆ ನೀಡಿದರು.
ನಿಪ್ಪಾಣಿ ಹಾಲಶುಗರ್ ಚೇರಮನ್ ಚಂದ್ರಕಾಂತ ಕೋಟಿವಾಲೆ, ಸಹಕಾರಿ ಧುರೀಣ ಡಿ.ಟಿ.ಪಾಟೀಲ, ಸಿ.ಬಿ.ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಚೇರಮನ್ ಭರತ ಬನವನೆ, ಎಸ್.ಎಸ್. ಕವಲಾಪೂರೆ, ಹೆಸ್ಕಾಂ ನಿರ್ದೇಶಕ ಮಹೇಶ ಭಾತೆ, ಸಹಕಾರ ಮಹಾಮಂಡಳದ ಉಪಾಧ್ಯಕ್ಷ ಜಗದೀಶ ಕವಟಗಿಮಠ, ಪುರಸಭೆ ಅಧ್ಯಕ್ಷ ಪ್ರವೀಣ ಕಾಂಬಳೆ, ಪುರಸಭೆ ಮಾಜಿ ಅಧ್ಯಕ್ಷ ಪ್ರಕಾಶ ಪಾಟೀಲ, ರಾಮಾ ಮಾನೆ, ಸತೀಶ ಅಪ್ಪಾಜಿಗೋಳ, ಚಿಕ್ಕೋಡಿ ಪುರಸಭೆ, ಸಾಯಿ ಸೇವಾ ಪರಿವಾರ, ಸಿಎಲ್ಇ ಹಾಗೂ ಸಾಹಿ ಸೌಹಾರ್ದ ಸಹಕಾರಿಯ ಎಲ್ಲ ಆಡಳಿತ ಮಂಡಳಿ ಸದಸ್ಯರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್ಕಮ್ ಹೊಟೇಲ್ನಲ್ಲಿ ವ್ಯವಸ್ಥೆ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
ಚನ್ನಮ್ಮನ ಕಿತ್ತೂರು: ಮಹಾನ್ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ
MUST WATCH
ಹೊಸ ಸೇರ್ಪಡೆ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ