ಗೋಕಾಕ ಸ್ತಬ್ಧ
Team Udayavani, Apr 25, 2021, 5:47 PM IST
ಗೋಕಾಕ: ವಾರಾಂತ್ಯದ ಕರ್ಫ್ಯೂ ಪಟ್ಟಣದಲ್ಲಿಸಂಪೂರ್ಣ ಯಶಸ್ವಿಯಾಯಿತು. ಬೆಳಗಿನಜಾವದಿಂದ 10 ಗಂಟೆವರೆಗೆ ದಿನನಿತ್ಯದ ಅವಶ್ಯಕವಸ್ತುಗಳನ್ನು ಖರೀದಿಸಿ, ಜನರು ಸ್ವಯಂಪ್ರೇರಿತರಾಗಿ ಮನೆಯಲ್ಲೇ ಉಳಿದುಕೊಂಡುತಮ್ಮ ಬೆಂಬಲವನ್ನು ಸೂಚಿಸಿದರು.
ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದನಗರದ ಬಸವೇಶ್ವರ ವೃತ್ತ, ಸಂಗೋಳ್ಳಿರಾಯಣ್ಣ ವೃತ್ತ, ಬಾಫನಾ ಖೂಟ, ತಂಬಾಕಖೂಟ, ತರಕಾರಿ ಮಾರುಕಟ್ಟೆ, ನಾಕಾ ನಂ.1ರ ಚನ್ನಮ್ಮ ವೃತ್ತ ಸೇರಿದಂತೆ ಇತರ ಎಲ್ಲೆಡೆರಸ್ತೆಗಳು ಬಿಕೋ ಎನ್ನುತ್ತಿದ್ದವು.
ಹಾಲಿನ ಅಂಗಡಿ,ಔಷಧ, ಪೆಟ್ರೋಲ್ ಬಂಕ್ಗಳು ತೆರೆದಿದ್ದರೂಸಹ ಜನರು ಮನೆಯಿಂದ ರಸ್ತೆಗೆ ಇಳಿಯಲೇಇಲ್ಲ. ಆಟೋಗಳು ರಸ್ತೆಗೆ ಬರಲಿಲ್ಲ.
ರಸ್ತೆ ಸಾರಿಗೆಸಂಸ್ಥೆಯ ಶೇ.25 ರಷ್ಟು ಬಸ್ಗಳು ಸಂಚಾರನಡೆಸಿದರೂ ಕೂಡಾ ಪ್ರಯಾಣಿಕರು ಇರಲಿಲ್ಲ.ಕಾರಣವಿಲ್ಲದೇ ಸಂಚರಿಸುತ್ತಿದ್ದ ಬೈಕ್ಗಳನ್ನುಪೊಲೀಸರು ಸೀಜ್ ಮಾಡಿದರು.
ಅಗತ್ಯ ಸೇವೆಗಳಲ್ಲಿ ಒಂದಾದ ಆಸ್ಪತ್ರೆಗಳುಕಾರ್ಯ ನಿರ್ವಹಿಸಿದರೂ ಅಷ್ಟೊಂದುಪ್ರಮಾಣದಲ್ಲಿ ಜನರು ಆಸ್ಪತ್ರೆಗಳತ್ತಸುಳಿಯಲಿಲ್ಲ. ಕಾರ್ಯ ನಿರ್ವಹಿಸಿದಆಸ್ಪತ್ರೆಗಗಳು ಒಳರೋಗಿಗಳ ಚಿಕಿತ್ಸೆಗಳಿಗೆ ಮಾತ್ರಸೀಮಿತವಾದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
ಚನ್ನಮ್ಮನ ಕಿತ್ತೂರು: ಮಹಾನ್ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ
Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ