ಮಣ್ಣಿಗೂ ರೈತರಿಗೂ ಅವಿನಾಭಾವ ಸಂಬಂಧ: ಕನೇರಿ ಶ್ರೀ
ಮಣ್ಣಿನೊಂದಿಗೆ ಸಂವಾದ ಮಾಡುವುದನ್ನು ರೈತ ಮರೆತಿದ್ದಾನೆ
Team Udayavani, Feb 28, 2024, 4:54 PM IST
ಉದಯವಾಣಿ ಸಮಾಚಾರ
ನೇಸರಗಿ: ಮಣ್ಣಿಗೂ ರೈತರಿಗೂ ಅವಿನಾಭಾವ ಸಂಬಂಧವಿದೆ. ಮಣ್ಣಿನ ಸತ್ವವನ್ನು ಕಾಪಾಡಿಕೊಂಡು ಉತ್ತಮ ಬೆಳೆ ಬೆಳೆಯಬೇಕೆಂದು ಕೊಲ್ಲಾಪೂರ ಸಿದ್ದಗಿರಿ ಮಹಾಸಂಸ್ಥಾನ ಕನೇರಿಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಸಮೀಪದ ಕೆ.ಎನ್.ಮಲ್ಲಾಪೂರ ಗ್ರಾಮದ ಗಾಳೇಶ್ವರಮಠದಲ್ಲಿ ಜಾತ್ರೆ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ,
ಮಣ್ಣಿನೊಂದಿಗೆ ಸಂವಾದ ಮಾಡುವುದನ್ನು ರೈತ ಮರೆತಿದ್ದಾನೆ. ಅಂದು ಮಣ್ಣನ್ನು ದೈವದತ್ತ ಫಲ ಎನ್ನುತ್ತಿದ್ದ ರೈತರು ಈಗ ಅದಕ್ಕೆ ರಾಸಾಯನಿಕ ಬೆರೆಸಿ ಕಲಬೆರಕೆ ಮಾಡುತ್ತಿದ್ದಾರೆ. ಇದರಿಂದ ಮಣ್ಣಿನ ಜೀವ ಸರಪಳಿ ಹಾಳಾಗುತ್ತಿದೆ ಎಂದರು.
ಸರಕಾರ ಸಹ ಮಣ್ಣನ್ನು ಉಳಿಸುವ ಬದಲಿಗೆ ಸಾವಿರಾರು ಕೋಟಿ ಖರ್ಚು ಮಾಡಿ ಮಣ್ಣನ್ನು ಕೊಲ್ಲುವ ಕಾರ್ಯ ಮಾಡುತ್ತಿದೆ. ಮಳೆ ಸಹ ಇಂದು ತಿಳಿದಾಗ ಬರುತ್ತಿದೆ. ಮಳೆ ಬರಲು ಒಂದು ನಿರ್ದಿಷ್ಟ ವೇಳೆ ಇಲ್ಲದಂತಾಗಿದೆ. ಮನುಷ್ಯರ ಕಾರ್ಯದಿಂದ ಪ್ರಕೃತಿ ಮುನಿದು ಬೇಕಾದಾಗ ಮಳೆಯಾಗುತ್ತಿದೆ. ಸರಕಾರ ಅಥವಾ ವಿಜ್ಞಾನಿಗಳು ನಮ್ಮ ಉದ್ಧಾರ ಮಾಡುತ್ತಾರೆಂದು ರೈತ ನಂಬಿದ್ದಾನೆ. ನಮ್ಮ ಉದ್ಧಾರ ನಾವೇ ಮಾಡಿಕೊಳ್ಳಬೇಕು. ಸಾವಯವ ಬೆಳೆಗೆ ಮಹತ್ವ ನೀಡಿ ಸಾವಯವ ಬೆಳೆಯಿಂದ ನಮ್ಮ ಆರೋಗ್ಯ ರಕ್ಷಣೆ ಮಾಡಿಕೊಳ್ಳಬೇಕೆಂದರು.
ಹಂಪಿ ವಿದ್ಯಾನಂದ ಭಾರತಿ ಸ್ವಾಮೀಜಿ, ಹುಣಶ್ಯಾಳ ನಿಜಗುಣ ದೇವರು, ಚಿದಾನಂದ ಸ್ವಾಮೀಜಿ, ಕುಳ್ಳೂರ ಬಸವಾನಂದ ಭಾರತಿ ಸ್ವಾಮೀಜಿ, ತೊಂಡಿಕಟ್ಟಿ ಅಭಿನವ ವೆಂಕಟೇಶ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ರಾಜು ಪವಾರ, ರಾಜ್ಯಾಧ್ಯಕ್ಷ ಚುನಪ್ಪ ಪೂಜೇರಿ, ಉಪಾಧ್ಯಕ್ಷ ಸುರೇಶ ಪರವನ್ನವರ, ಈರನಗೌಡ ಪಾಟೀಲ, ಜಯಶಂಕರ ವಣ್ಣೂರ, ದ್ಯಾಮನಗೌಡ ಪಾಟೀಲ, ಮಹಾಂತೇಶ ತೋಟಗಿ, ಮಹಾಂತೇಶ ಹಿರೇಮಠ, ಇನ್ನಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!
ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್ಕಮ್ ಹೊಟೇಲ್ನಲ್ಲಿ ವ್ಯವಸ್ಥೆ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
ಚನ್ನಮ್ಮನ ಕಿತ್ತೂರು: ಮಹಾನ್ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ