ಸಂತ್ರಸ್ತರಿಗೆ ಅನ್ನಪೂರ್ಣೆ ಈ ಕನೇರಿಮಠ
| ಎನ್ಎಚ್ 4ರಲ್ಲಿ ಸಿಲುಕಿದ್ದ ಪ್ರಯಾಣಿಕರಿಗೂ ನೆರವು | ಬದುಕು ನಿರ್ವಹಣೆಗೆ ಅಗತ್ಯ ಸಾಮಗ್ರಿ ಕಿಟ್ ವಿತರಣೆ
Team Udayavani, Aug 14, 2019, 10:28 AM IST
ಕನೇರಿ: ನೇಪಾಳ, ಕೇರಳದಲ್ಲಿ ಕಂಡು ಬಂದಿದ್ದ ಪ್ರಕೃತಿ ವಿಪತ್ತು ಸಂದರ್ಭ ಸಂತ್ರಸ್ತರ ನೆರವಿಗೆ ಧಾವಿಸಿದ್ದ ಮಹಾರಾಷ್ಟ್ರ ಕೊಲ್ಲಾಪುರದ ಕನೇರಿಮಠ, ಕೊಲ್ಲಾಪುರ ಜಿಲ್ಲೆಯ ಪ್ರವಾಹ ಸಂತ್ರಸ್ತರು ಹಾಗೂ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಿಲುಕಿದ್ದ ಸಾವಿರಾರು ಪ್ರಯಾಣಿಕರಿಗೂ ನೆರವಾಗುವ ಮೂಲಕ ಸಾರ್ಥಕತೆ ಮೆರೆದಿದೆ.
ಶ್ರಿ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಮಾರ್ಗದರ್ಶನದಲ್ಲಿ ಊಟ-ಉಪಹಾರ ಹಾಗೂ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಪ್ರವಾಹದಿಂದಾಗಿ ಕೊಲ್ಲಾಪುರ ನಗರ, ಆ ಜಿಲ್ಲೆಯ ನೂರಾರು ಗ್ರಾಮಗಳು ಹಾಗೂ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಕರ್ನಾಟಕದ ಅನೇಕ ಗ್ರಾಮಗಳೂ ಜಲಾವೃತಗೊಂಡಿದ್ದವು. ಅಲ್ಲದೇ ರಸ್ತೆ ಕುಸಿತದಿಂದಾಗಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಾಲು ಸಾಲು ವಾಹನಗಳು ನಿಂತಿದ್ದು, ಊಟ, ನೀರು ಇಲ್ಲದೆ ಸುಮಾರು ಐದು ಸಾವಿರಕ್ಕೂ ಅಧಿಕ ಪ್ರಯಾಣಿಕರು ಪರದಾಡುವಂತಾಗಿತ್ತು.
ಕನೇರಿಯ ಶ್ರೀ ಕಾಡಸಿದ್ದೇಶ್ವರ ಮಠದಿಂದ ಊಟದ ಪಾಕೆಟ್ಗಳನ್ನು ಸಿದ್ಧಪಡಿಸಿ, ಹೆದ್ದಾರಿಯಲ್ಲಿದ್ದ ಸಾವಿರಾರು ಪ್ರಯಾಣಿಕರಿಗೆ ಊಟ, ನೀರು ಹಾಗೂ ಅಗತ್ಯ ಇದ್ದವರಿಗೆ ಔಷಧಿ ಹಾಗೂ ವೈದ್ಯಕೀಯ ತಾತ್ಕಾಲಿಕ ನೆರವು ನೀಡಲಾಯಿತು. ಇನ್ನೊಂದೆಡೆ ಪ್ರವಾಹ ಸಂಕಷ್ಟಕ್ಕೆ ಸಿಲುಕಿದವರಿಗೆ ತಾತ್ಕಾಲಿಕ ಬದುಕು ನಿರ್ವಹಣೆಗೆ ಪೂರಕವಾಗಿ ಆಹಾರ ಸಾಮಗ್ರಿ, ಅಗತ್ಯ ವಸ್ತುಗಳು ಹಾಗೂ ಕೊಬ್ಬರಿ ಎಣ್ಣೆ, ಬಿಸ್ಕಿಟ್ ಸೇರಿದಂತೆ ಒಟ್ಟು 25 ಪದಾರ್ಥ-ವಸ್ತುಗಳ 25 ಕೆ.ಜಿ.ತೂಕದ ಕಿಟ್ ನೀಡಲಾಗುತ್ತದೆ. ಒಂದು ಕಿಟ್ಗೆ ಅಂದಾಜು 1,500ರೂ.ವೆಚ್ಚ ತಗುಲಲಿದೆ.
ಮೊದಲ ಹಂತವಾಗಿ ಸುಮಾರು 5,000 ಕುಟುಂಬಗಳಿಗೆ ಈ ಕಿಟ್ಗಳನ್ನು ವಿತರಣೆ ಮಾಡಲಾಗುತ್ತಿದ್ದು, ನಂತರದಲ್ಲಿ ಸುಮಾರು 25 ಸಾವಿರ ಕುಟುಂಬಗಳಿಗೆ ಈ ಕಿಟ್ಗಳ ವಿತರಣೆಗೆ ಶ್ರೀಮಠ ಯೋಜಿಸಿದೆ. ಇನ್ನಷ್ಟು ಗ್ರಾಮಗಳು ನೀರಿನಿಂದ ಆವೃತಗೊಂಡಿದ್ದು, ಅಲ್ಲಿನ ಸಂಪರ್ಕ ಸಾಧ್ಯವಾದ ನಂತರ ಕಿಟ್ಗಳ ಬೇಡಿಕೆ ಇನ್ನಷ್ಟು ಹೆಚ್ಚಬಹುದಾಗಿದ್ದು, ಅದನ್ನು ವಿತರಿಸಲು ಶ್ರೀಮಠ ಸಿದ್ಧವಾಗಿದೆ. ಶ್ರೀಮಠದ ಸಿಬ್ಬಂದಿ, ವೈದ್ಯಕೀಯ ಸಿಬ್ಬಂದಿ ನೀರು ತಗ್ಗಿದ ವಿವಿಧ ಗ್ರಾಮ, ಪ್ರದೇಶಗಳಿಗೆ ತೆರಳಿದ್ದು, ಊಟ ಹಾಗೂ ವೈದ್ಯಕೀಯ ಸೇವೆ ನೀಡತೊಡಗಿದ್ದಾರೆ.
ಶ್ರೀಮಠದ ಪ್ರವಾಹ ಪರಿಹಾರ ಕಾರ್ಯಕ್ಕೆ ಮಹಾರಾಷ್ಟ್ರದ ಮೆನನ್ ಆ್ಯಂಡ್ ಮೆನನ್ ಕಂಪೆನಿ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಸುಮಾರು 25 ಲಕ್ಷ ರೂ. ದೇಣಿಗೆ ನೀಡಿದೆ. ಮುಂಬೈ, ಪುಣೆಯ ವಿವಿಧ ದೊಡ್ಡ ಕಂಪೆನಿಗಳವರೂ ದೇಣಿಗೆ ನೀಡಲು ಮುಂದಾಗಿದ್ದಾರೆ.
ಕೊಲ್ಲಾಪುರದ ಎನ್ಜಿಒಗಳ ಒಕ್ಕೂಟದವರು ದೇಣಿಗೆ ಹಾಗೂ ಸಂಗ್ರಹ ಪರಿಹಾರ ಸಾಮಗ್ರಿಗಳನ್ನು ಶ್ರೀಮಠಕ್ಕೆ ನೀಡಿ, ಶ್ರೀಮಠದ ಮಾರ್ಗದರ್ಶನದಲ್ಲೇ ವಿತರಣೆಗೆ ನಿರ್ಧರಿಸಿದ್ದಾರೆ. ಇನ್ನು ಸಂತ್ರಸ್ತ ರೈತರ ಬದುಕಿಗೆ ಪುನಶ್ಚೇತನಕ್ಕೆ ನೆರವಾಗುವ ಶ್ರೀಗಳ ಕಾರ್ಯಕ್ಕೂ ದೇಣಿಗೆಗಳು ಹರಿದುಬಂದಿದೆ.
ಕೊಲ್ಲಾಪುರ ಜಿಲ್ಲಾಡಳಿತವೂ ಸಂಗ್ರಹವಾಗಿರುವ ಪರಿಹಾರ ಸಾಮಗ್ರಿಗಳನ್ನು ಶ್ರೀಮಠದ ಮೂಲಕವೇ ಅರ್ಹ ಸಂತ್ರಸ್ತರಿಗೆ ತಲುಪಿಸಲು ನಿರ್ಧರಿಸಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕೂಡ ಶ್ರೀಮಠದ ಸೇವಾ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ
Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ
I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್
ಪ್ರಧಾನಿ ಮೋದಿಯಿಂದ ಮಾತ್ರ ದೇಶ ರಕ್ಷಣೆ ಸಾಧ್ಯ: ಕುಮಠಳ್ಳಿ
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್