ನಿಸರ್ಗ ರಕ್ಷಣೆ ದೇಶದ ಆರೋಗ್ಯದ ಅಡಿಪಾಯ- ಡಾ.ದಯಾನಂದ ನೂಲಿ ಅಭಿಮತ
Team Udayavani, Jan 29, 2022, 7:16 PM IST
ಚಿಕ್ಕೋಡಿ: ನಿಸರ್ಗ ರಕ್ಷಣೆ ದೇಶದ ಆರೋಗ್ಯದ ಅಡಿಪಾಯ. ಹೀಗಾಗಿ ಎಲ್ಲರೂ ನಿಸರ್ಗವನ್ನು ಪ್ರೀತಿಸಿ ಉಳಿಸಬೇಕೆಂದು ಖ್ಯಾತ ವೈಧ್ಯರು ಮತ್ತು ಸಾಹಿತಿ ಡಾ.ದಯಾನಂದ ನೂಲಿ ಹೇಳಿದರು.
ಚಿಕ್ಕೋಡಿ ನಗರದ ಹಂಜಿ ತೋಟದ ಮನೆಯಲ್ಲಿ ಉಪನ್ಯಾಸಕ ಅಜೀತ ಕರಿಗಾರ ರಚಿಸಿದ ಟೈಮ್ಸ್ ಟೂ ಎಕ್ಸಪ್ಲೋರ್ ಗ್ರಂಥ ಲೋಕಾರ್ಪಣೆ ಮಾಡಿ ಮಾತನಾಡಿದರು.
ನೈಸರ್ಗಿಕ ಲೋಕದ ಮೇಲಿನ ಪ್ರೀತಿಯನ್ನು ಮುಖ್ಯವಾಗಿ ಬನ್ನಿಸುವ ಟೈಮ್ ಟೂ ಎಕ್ಸಪ್ಲೋರ್ ರಚನೆ ಇಂದಿನ ಸಮಾಜಕ್ಕೆ ಅತ್ಯಾವಶ್ಯಕ ವಾಗಿತ್ತು. ಸತ್ತಕ್ಕೆ ಅತಿ ಸಮೀಪವಾದ ವಿಷಯ ಈ ಕವನದಲ್ಲಿ ಅಡಕವಾಗಿದೆ.ಭಾರತಿಯ ಸಂಸ್ಕೃತಿಯನ್ನು ಬಿಂಬಿಸುತ್ತಿದೆ ಎಂದರು.
ಎಲ್ಲರು ವಿವಿಧ ತೆರನಾಗಿ ಅರಿವು ಮೂಡಿಸುವ ನಿಸರ್ಗ ರಕ್ಷಣೆ ಕವನ ಮೂಲಕ ಜನರಿಗೆ ಮನವರಿಕೆ ಮಾಡುವ ಕೆಲಸ ನಡೆಯಬೇಕಿದೆ ಎಂದರು.
ಹಿರಿಯ ಸಾಹಿತಿ ಹಾಗು ಜಾಗತಿಕ ಲಿಂಗಾಯತ ಮಹಾಸಭಾ ಚಿಕ್ಕೋಡಿ ಜಿಲ್ಲಾ ಅಧ್ಯಕ್ಷ ಪ್ರೋ. ಎಸ್ ವಾಯ್ ಹಂಜಿ ಮಾತನಾಡಿ. ಸಾಂಸ್ಕೃತಿಕ ಸಾಹಿತಿಕ ಸಮಾರಂಭದ ಇತ್ತಿಚಿನ ದಿನಗಳಲ್ಲಿ ಕೊರತೆಯಾಗಿದೆ. ಇದಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಯುವ ಕವಿ ಅಜೀತ ಅವರ ಕಾರ್ಯ ಶ್ಲಾಘನೀಯ. ಇಂದಿನ ತಂತ್ರಜ್ಞಾನ ಯುಗದಲ್ಲಿ ಕವಿ ಕೊರತೆ ಇದೆ. ಕವಿಯಾಗುವುದು ಆ ನೆಲದ ಪುಣ್ಯ ಕಾವ್ಯಕ್ಕೆ ಮಾತ್ರ ಭುಮಿಮೇಲೆ ಶಾಶ್ವತ ನೆಲೆ ಇದೆ. ಯುವ ಪೀಳಿಗೆಗೆ ಈ ಗ್ರಂಥ ಪ್ರೋತ್ಸಾಹ ನೀಡುವ ಗ್ರಂಥ ಇದಾಗಿದೆ.
ಉಪನ್ಯಾಸಕ ಅಜಿತ ಕರಿಗಾರ ಮಾತನಾಡಿ,ನನ್ನ ದಿನದ ಕಾರ್ಯದ ಸಮಯದಲ್ಲಿ ನಾನು ಕಂಡ ನಿಸರ್ಗದ ಉಲ್ಲೇಖ ಈ ಪುಸ್ತಕದಲ್ಲಿದೆ. ಯಾವದೇ ಪ್ರಾಣಿ, ಪಕ್ಕಿಗಳ ಬಂಧನದ ನಂತರದ ಬಿಡುವು ಅವುಗಳ ಸ್ವಾತಂತ್ರ್ಯ ನಮ್ಮ ಮನದುಂಬಿಸುತ್ತದೆ.ಮನುಷ್ಯ ನಿಸರ್ಗ ಪ್ರಿತಿಯಿಂದ ಕಾನುವದರೊಂದಿಗೆ ಅದರ ರಕ್ಷಣೆ ಹಾಗು ಸ್ವಚ್ಛತೆ ಅತ್ಯವಶ್ಯಕ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ಶಿವಮೂರ್ತಿ ಪಡ್ಲಾಳೆ ವಹಿಸಿ ಮಾತನಾಡಿದರು, ಲಕ್ಷ್ಮಿ ಹಂಜಿ ಪ್ರಾರ್ಥನಾ ಗೀತೆ ಹಾಡಿದರು.
ಈ ಸಂಧರ್ಭದಲ್ಲಿ ರವಿ ಹಂಪನ್ನವರ, ದೈವಿಕ ಅಡಕೆ,ಲಕ್ಷ್ಮಿ ಕರಿಗಾರ, ನಂದಿನಿ ಬಾವಚೆ,ತುಕಾರಾಮ ಕೋಳಿ, ರುದ್ರಪ್ಪ ಸಂಗಪ್ಪಗೋಳ ಸೇರಿ ಹಲವಾರು ಇದ್ದರು.
ಸಿದ್ದು ಪಾಟೀಲ ನಿರೂಪಿಸಿದರು, ಸ್ವಾಗತಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್ಕಮ್ ಹೊಟೇಲ್ನಲ್ಲಿ ವ್ಯವಸ್ಥೆ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
ಚನ್ನಮ್ಮನ ಕಿತ್ತೂರು: ಮಹಾನ್ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ
MUST WATCH
ಹೊಸ ಸೇರ್ಪಡೆ
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ
Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು
Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು
IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್