ಮುಂಗಾರು ಬಿತ್ತನೆಗೆ ಸಕಲ ಸಿದ್ಧತೆ

|17,000 ಕ್ವಿಂಟಲ್‌ ಸೋಯಾಬಿನ್‌ ಬೀಜ ಸಂಗ್ರಹ

Team Udayavani, May 30, 2020, 12:13 PM IST

ಮುಂಗಾರು ಬಿತ್ತನೆಗೆ ಸಕಲ ಸಿದ್ಧತೆ

ಸಾಂದರ್ಭಿಕ ಚಿತ್ರ

ಬೈಲಹೊಂಗಲ: ಮುಂಗಾರು ಮಳೆ ಬೇಗ ಸುರಿದರೆ ತನ್ನ ಬದುಕು ಹಸನಾದಿತು ಎಂದು ತಾಲೂಕಿನ ಅನ್ನದಾತರು ಕಾಯುತ್ತಿದ್ದಾರೆ. ಜತೆಗೆಬಿತ್ತನೆಗೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇಂದು, ನಾಳೆ ಮಳೆಯಾದರೆ ಭೂಮಿಗೆ ಬೀಜ ಹಾಕಿ ಉತ್ತಮ ಬೆಳೆ ತೆಗೆಯಬೇಕೆಂದು ಕಳೆದ ತಿಂಗಳಿನಿಂದ ಹೊಲಗಳನ್ನು ಉಳುಮೆ ಮಾಡಿ ಬಿತ್ತನೆಗೆ ಸಜ್ಜುಗೊಳಿಸಿದ್ದಾರೆ.

ಕಳೆದ ಬಾರಿ ಮುಂಗಾರು ಹಾಗೂ ಹಿಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಬಂದಿತ್ತು. ಈ ಬಾರಿ ಕೂಡಾ ರೈತರು ರೋಹಿಣಿ ಮಳೆ ಪ್ರಾರಂಭವಾದರೆ ಹೊಲ ಹದವಾಗಿರಬೇಕೆನ್ನುವ ನಿಟ್ಟಿನಲ್ಲಿ ಟ್ರಾಕ್ಟರ್‌, ಎತ್ತಿನಿಂದ ಹದಗೊಳಿಸಿದ್ದಾರೆ. ತಾಲೂಕಿನಲ್ಲಿ ಒಟ್ಟಾರೆ ಸೋಯಾಬಿನ್‌ ಮುಖ್ಯ ಬೆಳೆಯಾಗಿದ್ದು, ಇದರೊಂದಿಗೆ ತೊಗರಿ, ಹೆಸರು, ಉದ್ದು ಕೂಡಾ ಬೆಳೆಯಲಾಗುತ್ತದೆ. ಇನ್ನು ಬೈಲಹೊಂಗಲ ಮತ್ತು ಕಿತ್ತೂರ ತಾಲೂಕಿನಲ್ಲಿ ಹೆಚ್ಚು ಸೋಯಾಬಿನ್‌ ಬಿತ್ತನೆಗೆ ರೈತರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಬೀಜ ಸಂಗ್ರಹಣೆ ವ್ಯವಸ್ಥೆ: ಕೃಷಿ ಇಲಾಖೆ ಹೇಳುತ್ತಿದ್ದರೂ ಸಕಾಲದಲ್ಲಿ ಮಳೆಯಾದರೆ ಬೀಜಮತ್ತು ಗೊಬ್ಬರದ ಅಭಾವ ಉಂಟಾಗುತ್ತದೆ. ಹೀಗಾಗದಂತೆ ಮುಂಚಿತವಾಗಿಯೇ ಶೀಘ್ರ ಸುವ್ಯವಸ್ಥೆ ಮಾಡಬೇಕಾಗಿರುವುದು ತಮ್ಮ ಕರ್ತವ್ಯವಾಗಿದೆ ಎಂದು ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಎಸ್‌.ಎಫ್‌. ದೊಡಗೌಡರ ಹೇಳುತ್ತಾರೆ.

ಬೀಜ ಸಂಗ್ರಹ: ಕೃಷಿ ಇಲಾಖೆಯು ರೈತರಿಗೆ ಅಗತ್ಯ ಬೀಜ ಪೂರೈಸುವುದಕ್ಕಾಗಿ ಸರಕಾರದ ಪರವಾನಗಿ ಹೊಂದಿರುವ ವಿವಿಧ ಕಂಪನಿ ಹಾಗೂ ಬೀಜ ನಿಗಮದೊಂದಿಗೆ ರೈತ ಸಂಪರ್ಕ ಕೇಂದ್ರಗಳಾದ ಬೈಲಹೊಂಗಲ, ನೇಸರಗಿ, ಕಿತ್ತೂರದಿಂದ ಪಿಕೆಪಿಎಸ್‌ದಲ್ಲಿ ಬೀಜ ವಿತರಣೆ ನಡೆದಿದೆ. ಬೈಲಹೊಂಗಲ ಆರ್‌ಎಸ್‌ಕೆ ಸಂಬಂಧಿಸಿದ ಬೈಲಹೊಂಗಲ ಟಿಎಪಿಎಂಸಿ, ಬೆಳವಡಿ, ಶಿಗಿಹಳ್ಳಿ, ಪಟ್ಟಿಹಾಳ, ದೊಡವಾಡ, ಸಾನಿಕೊಪ್ಪ, ಬುಡರಕಟ್ಟಿ, ಹೊಳಿನಾಗಲಾಪುರ, ನೇಸರಗಿ ಆರ್‌ಎಸ್‌ಕೆ ಸಂಬಂಧಿ ಸಿದ ನೇಸರಗಿ ಪಿಕೆಪಿಎಸ್‌, ಹಣ್ಣಿಕೇರಿ, ಸಂಪಗಾಂವ, ನೇಗಿನಹಾಳ, ಬಾವಿಹಾಳ, ನಾಗನೂರ,ದೇಶನೂರ, ತಿಗಡಿ, ಚಿಕ್ಕಬಾಗೇವಾಡಿ, ಮರಕಟ್ಟಿ, ಕಿತ್ತೂರ ಆರ್‌ಎಸ್‌ಕೆ ಸಂಬಂಧಿಸಿದ ಕಿತ್ತೂರ, ಎಂ.ಕೆ. ಹುಬ್ಬಳ್ಳಿ,ನಿಚ್ಚಣಕಿ, ಹಿರೆನಂದಿಹಳ್ಳಿ, ಕಾದ್ರೋಳ್ಳಿ, ಹುಣಸಿಕಟ್ಟಿ, ಅವರಾದಿ, ತುರಮರಿ, ಅಂಬಡಗಟ್ಟಿ, ಕಲಬಾಂವಿ, ಕೋದಾನಪುರ ಹೀಗೆ 31 ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಬೀಜ ವಿತರಣೆ ನಡೆದಿದೆ. ಹೆಚ್ಚುವರಿ ಕೇಂದ್ರಗಳಲ್ಲೂ ತಾಲೂಕಿನ ರೈತರಿಗೆ ಬೇಕಾಗುವಷ್ಟು ಬಿತ್ತನೆ ಬೀಜ ಸಂಗ್ರಹಿಸುವ ಕಾರ್ಯದಲ್ಲಿ ಕೃಷಿ ಇಲಾಖೆ ತೊಡಗಿದೆ.

ರೈತರ ಬೇಡಿಕೆಗೆ ಅನುಗುಣವಾಗಿ ಈಗಾಗಲೇ ಗೊಬ್ಬರ ಮತ್ತು ಬೀಜಗಳನ್ನು ತಾಲೂಕಿನಲ್ಲಿ ದಾಸ್ತಾನು ಮಾಡಲಾಗಿದ್ದು,
ಅನ್ನದಾತರು ಆತಂಕ ಪಡಬೇಕಾಗಿಲ್ಲ. ಮುಂಗಾರು ಪ್ರವೇಶಕ್ಕಾಗಿ ಕಾಯುತ್ತಿದ್ದೇವೆ. ಪ್ರತಿಭಾ ಹೂಗಾರ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ

 

– ಸಿ.ವೈ. ಮೆಣಶಿನಕಾಯಿ

ಟಾಪ್ ನ್ಯೂಸ್

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

ಪ್ರಧಾನಿ ಮೋದಿಯಿಂದ ಮಾತ್ರ ದೇಶ ರಕ್ಷಣೆ ಸಾಧ್ಯ: ಕುಮಠಳ್ಳಿ

ಪ್ರಧಾನಿ ಮೋದಿಯಿಂದ ಮಾತ್ರ ದೇಶ ರಕ್ಷಣೆ ಸಾಧ್ಯ: ಕುಮಠಳ್ಳಿ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.