ರಮೇಶ್ ಅವಕಾಶವಾದಿ ರಾಜಕಾರಣಿ: ಸತೀಶ್
Team Udayavani, Nov 15, 2019, 6:43 PM IST
ಬೆಳಗಾವಿ: ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಕುತಂತ್ರಕ್ಕೆ ಬೆಳಗಾವಿ ಜಿಲ್ಲೆ ಬಲಿಯಾಗಿದೆ. ಅವನೊಬ್ಬ ಅವಕಾಶವಾದಿ ರಾಜಕಾರಣಿ ಎಂದು ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ಟೀಕಿಸಿದರು.
ಪತ್ರಕರ್ತರ ಜತೆ ಮಾತನಾಡಿದ ಅವರು, ರಮೇಶ್ನನ್ನು ಸೋಲಿಸಬೇಕೆಂದು ಮೊದಲಿನಿಂದಲೂ ಪ್ರಚಾರ ಮಾಡುತ್ತಿದ್ದೇವೆ. ರಮೇಶ್ನನ್ನು ಸೋಲಿಸಿ ಕ್ಷೇತ್ರವನ್ನು ಭ್ರಷ್ಟಾಚಾರ ಮುಕ್ತ ಮಾಡಲಾಗುವುದು. ಲಖನ್ಗೆ ಕಾಂಗ್ರೆಸ್ ಟಿಕೆಟ್ ಫೈನಲ್ ಆಗಿದೆ. ಎಚ್.ವಿಶ್ವನಾಥ್ ನಮ್ಮ ಗುರು ಎನ್ನುವ ರಮೇಶ್, ಮೊದಲು ಎಸ್.ಎಂ. ಕೃಷ್ಣ, ಸೋನಿಯಾ ಗಾಂಧಿ ಹೀಗೆ ನಲವತ್ತು ಜನರ ಹೆಸರು ಹೇಳುತ್ತಿದ್ದ. ಅವನೊಬ್ಬ ಅವಕಾಶವಾದಿ. ಇಪ್ಪತ್ತು ವರ್ಷ ಹಿಂದೆ ನೋಡಿದರೆ ಇವರಿಗೆ ಎಷ್ಟು ಜನ ಗುರುಗಳಿದ್ದಾರೆ ಎಂಬುದು ಗೊತ್ತಾಗುತ್ತದೆ. ಜನರು ನಮ್ಮ ಪರವಾಗಿ ಇದ್ದಾರೆ. ರಮೇಶ್ ನಡೆಸುವ ಸಮಾವೇಶಕ್ಕೆ ಒಂದು ಲಕ್ಷ ಜನರನ್ನು ಸೇರಿಸಲು ನಾಲ್ಕು ಜಿಲ್ಲೆಯ ಜನರನ್ನು ಕರೆ ತರುತ್ತಾರೆ. ಗೆಲುವೊಂದೇ ನಮ್ಮ ಗುರಿ ಎಂದರು.