ಶ್ರೀ ಗಂಗಾಧರೇಶ್ವರಸ್ವಾಮಿ ರಥೋತ್ಸವದ ವೈಭವ


Team Udayavani, Mar 29, 2021, 2:05 PM IST

ಶ್ರೀ ಗಂಗಾಧರೇಶ್ವರಸ್ವಾಮಿ ರಥೋತ್ಸವದ ವೈಭವ

ನಾಗಮಂಗಲ: ಆದಿಚುಂಚನಗಿರಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಶ್ರೀಗಂಗಾಧರೇಶ್ವರಸ್ವಾಮಿ ರಥೋತ್ಸವ ಸಹಸ್ರಾರು ಭಕ್ತಾದಿಗಳ ನಡುವೆ ವೈಭವದಿಂದ ನಡೆಯಿತು.

ಹೋಳಿ ಹುಣ್ಣಿಮೆಯ ಹಿಂದಿನ ರಾತ್ರಿ ಅಂದರೆ ಮಾ.27ರಂದು ಶ್ರೀ ಕ್ಷೇತ್ರದ ಶ್ರೀ ಕಾಲ ಭೈರವೇಶ್ವರ ಪುಷ್ಕರಣಿಯಲ್ಲಿ ತೆಪ್ಪೋತ್ಸವ ಮುಗಿದು ಮಧ್ಯರಾತ್ರಿಕಳೆಯುತ್ತಿದ್ದಂತೆಯೇ ಗಂಗಾಧರೇಶ್ವರ ರಥೋ ತ್ಸವಕ್ಕೆಕ್ಷಣಗಣನೆ ಪ್ರಾರಂಭವಾಯಿತು. ಬೆಳಗಿನಜಾವ ಬ್ರಾಹ್ಮೀ ಮುಹೂರ್ತದಲ್ಲಿ ನಡೆಯುವ ಗಂಗಾಧರೇಶ್ವರಸ್ವಾಮಿ ಮಹಾ ರಥೋತ್ಸವ ಮತ್ತು ಶ್ರೀ ಡಾ|| ನಿರ್ಮಲಾನಂದನಾಥ ಮಹಾಸ್ವಾಮಿ ಗಳವರ ಅಡ್ಡಪಲ್ಲಕ್ಕಿ ಉತ್ಸವ ಭಕ್ತಸಾಗರದ ನಡುವೆ ವಿಜೃಂಭಣೆಯಿಂದ ಜರುಗಿತು.

ಜೈಕಾರ: ಭಾನುವಾರ ಬೆಳಗಿನ ಜಾವ (ಶನಿವಾರ ರಾತ್ರಿ) ಬ್ರಾಹ್ಮೀ ಮುಹೂರ್ತ ಪ್ರಾರಂಭ ವಾಗುತ್ತಿದ್ದಂತೆಯೇ ಶ್ರೀಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅವರುಸರ್ವಾಲಂಕಾರ ಭೂಷಿತರಾಗಿ, ಸುವರ್ಣಕಿರೀಟಧಾರಿಗಳಾಗಿ ಭಕ್ತರಿಗೆ ದರ್ಶನ ನೀಡುತ್ತಾವಟುಗಳ ವೇಧ ಘೋಷ, ಮಂತ್ರ ಪಠಣ,ವಿದ್ವಾಂಸರ ವೇದಘೋಷ ಹಾಗೂ ಮಂಗಳವಾದ್ಯಗಳ ಸಮೇತ ಅಡ್ಡಪಾಲಕಿಯಲ್ಲಿ ವಿರಾಜಮಾನ ರಾಗಿ ಗಿರಿಯ ಕೆಳಗಿರುವ ರಥಬೀದಿಗೆಬಿಜಯಂಗೈಯ್ಯುತ್ತಿದ್ದಂತೆಯೇ ಎಲ್ಲೆಲ್ಲೂಜೈಕಾರಗಳು ಮೊಳಗಿದವು. ಶ್ರೀ ಭೈರವೇಶ್ವರ, ಶ್ರೀಗಂಗಾಧರೇಶ್ವರ ಮತ್ತು ಚುಂಚಶ್ರೀಗಳಿಗೆ ಮೊಳಗಿಸಿದಜಯಕಾರಗಳು ಮುಗಿಲು ಮುಟ್ಟಿದವು. ಹೋಳಿ ಹುಣ್ಣಿಮೆಯ ತುಂಬು ಚಂದ್ರನ ಹಾಲುಬೆಳದಿಂಗಳಲ್ಲಿ ಭಕ್ತರಿಂದ ತುಂಬಿ ತುಳುಕುತ್ತಿದ್ದವಿಶಾಲವಾದ ರಥಬೀದಿ ಭಕ್ತಸಾಗರದಲ್ಲಿತೇಲಾಡುತ್ತಿದೆಯೇನೋ ಎನ್ನುವಂತೆ ಭಾಸವಾಗುತ್ತಿತ್ತು.

ರಥಕ್ಕೆ ವಿಶೇಷ ಪೂಜೆ: ವಿಧ ವಿಧ ಪುಷ್ಪಗಳಿಂದಹಾಗೂ ವಿದ್ಯುತ್‌ ದೀಪಮಾಲೆಗಳಿಂದ ಅಲಂಕೃತ ಗೊಂಡಿದ್ದ ಗಂಗಾಧರೇಶ್ವರಸ್ವಾಮಿ ರಥದ ಸನಿಹಕ್ಕೆಆಗಮಿಸಿದ ಮಹಾಸ್ವಾಮಿಗಳವರು ಪಾಲಕಿಯಿಂದ ಇಳಿದು ರಥಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ರಥವನ್ನುಮುಂದೆ ಚಲಿಸಲು ಪ್ರಾರ್ಥಿಸಿ ಪಾಲಕಿಯಲ್ಲಿ ಆಸೀನರಾಗುತ್ತಿದ್ದಂತೆಯೇ ರಥವುನಿಧಾನವಾಗಿ ಮುಂದಕ್ಕೆ ಚಲಿಸುತ್ತಿದ್ದಂತೆನೆರೆದಿದ್ದ ಭಕ್ತಸಾಗರ ಗಂಗಾಧರೇಶ್ವರನಿಗೂ, ಭೈರವೇಶ್ವರನಿಗೂ, ಶ್ರೀ ಗುರುಗಳಿಗೂ ಕೂಗಿದ ಜೈಕಾರ ಇಡೀ ಗಿರಿಯ ತುಂಬೆಲ್ಲ ಪ್ರತಿಧ್ವನಿಸಿತ್ತು.

ಭಕ್ತಿ ಸಮರ್ಪಣೆ: ಮಹಾರಥದಮುಂದೆ ಮುಂದೆ ಶ್ರೀಗಳವರಪಾಲಕಿಯೂ, ಪಾಲಕಿಯ ಹಿಂದೆ ಮಹಾರಥವೂ ಸಾಗುತ್ತಿದ್ದಂತೆ ಭಕ್ತರ ಭಕ್ತಿಯಪರಾಕಾಷ್ಠೆ ಮೇರೆ ಮೀರಿತ್ತು. ನೆರೆದಿದ್ದ ಸಹಸ್ರ ಸಹಸ್ರಸಂಖ್ಯೆಯಲ್ಲಿ ಭಕ್ತಗಣ ರಥವನ್ನು ಎಳೆಯುವ ಮೂಲಕ ಭಕ್ತಿ ಸಮರ್ಪಿಸಿದರು.

ಸೂರ್ಯೋದಯಕ್ಕೂ ಮುನ್ನ ಮೂಲ ಸ್ಥಾನಕ್ಕೆ: ರಥಕ್ಕೆ ಹೂವು, ದವನ ಹಾಗೂ ಬಾಳೆಹಣ್ಣನ್ನು ಅರ್ಪಿಸಿ ತಮ್ಮ ಹರಕೆ ತೀರಿಸಿದರು. ವಿದ್ಯುತ್‌ ದೀಪಗಳ ಕಣ್ಣುಕೋರೈಸುವ ಬೆಳಕಿನ ನಡುವೆ ಭಕ್ತರ ಜಯಘೋಷಗಳ ನಡುವೆ, ಶ್ರೀ ಗಂಗಾಧರೇಶ್ವರನರಥವನ್ನು ಎಳೆದು ಭಕ್ತಿ ಪರವಶ ರಾದರು. ಮಹಾಸ್ವಾಮಿ ಗಳವರ ಅಡ್ಡಪಾಲಕಿ ಉತ್ಸವವನ್ನುಹೊತ್ತು ಮೆರೆಸಿ ಧನ್ಯತಾಭಾವ ಹೊಂದಿದರು. ಬ್ರಾಹ್ಮೀ ಮುಹೂರ್ತ ದಲ್ಲಿ ಪ್ರಾರಂಭವಾಗುವರಥೋತ್ಸವವು ರಥ ಬೀದಿಯಲ್ಲಿ ಚಲಿಸಿ ಅಪಾರಭಕ್ತರಿಗೆ ದರ್ಶನ ನೀಡಿ ಸೂರ್ಯೋದಯಕ್ಕೂ ಮುನ್ನ ವಾಪಸ್‌ ಮೂಲ ಸ್ಥಾನಕ್ಕೆ ಬಂದು ನಿಂತಿತು.

ಟಾಪ್ ನ್ಯೂಸ್

6-

Pregnancy: ಗರ್ಭಧಾರಣೆಯ ಭಾವನಾತ್ಮಕ ಅಂಶಗಳು

5-

Neuromodulation therapy : ಮಾನಸಿಕ ಕಾಯಿಲೆಗಳಿಗೆ ನ್ಯೂರೋಮಾಡ್ಯುಲೇಷನ್‌ ಚಿಕಿತ್ಸೆ

RCBvsCSK; ಧೋನಿಯ 110 ಮೀ ಸಿಕ್ಸ್ ಕಾರಣದಿಂದ ನಾವು ಗೆದ್ದೆವು..: ದಿ.ಕಾರ್ತಿಕ್ ಹೇಳಿದ್ದೇನು

RCBvsCSK; ಧೋನಿಯ 110 ಮೀ ಸಿಕ್ಸ್ ಕಾರಣದಿಂದ ನಾವು ಗೆದ್ದೆವು..: ಕಾರ್ತಿಕ್ ಹೇಳಿದ್ದೇನು

Man finds Rs 9,900 crore in his bank account

Bhadohi; ಯು.ಪಿ ವ್ಯಕ್ತಿಯ ಖಾತೆಗೆ ಬರೋಬ್ಬರಿ 9,900 ಕೋಟಿ ರೂ ಜಮೆ! ಆಗಿದ್ದೇನು?

Udupi Gitanjali Silk, Shantisagar Hotel founder Neere Bailur Govinda Naik passes away

Udupi ಗೀತಾಂಜಲಿ ಸಿಲ್ಕ್, ಶಾಂತಿಸಾಗರ್ ಹೊಟೇಲ್ ಸಂಸ್ಥಾಪಕ ನೀರೆ ಬೈಲೂರು ಗೋವಿಂದ ನಾಯಕ್ ನಿಧನ

Vijayapura ಎಪಿಎಂಸಿ ಮಾರುಕಟ್ಟೆಯಲ್ಲಿ ಯುವಕನ‌ ಹತ್ಯೆ; ಆಪ್ತರ ಮೇಲೆ ಶಂಕೆ

Vijayapura ಎಪಿಎಂಸಿ ಮಾರುಕಟ್ಟೆಯಲ್ಲಿ ಯುವಕನ‌ ಹತ್ಯೆ; ಆಪ್ತರ ಮೇಲೆ ಶಂಕೆ

twin terror attacks in Jammu and Kashmir

Jammu and Kashmir ಉಗ್ರ ದಾಳಿ; ಮಾಜಿ ಸರಪಂಚ್ ಸಾವು, ಇಬ್ಬರು ಪ್ರವಾಸಿಗರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಕ್ಕರೆ ಕಾರ್ಖಾನೆಗಳಿಗೆ ಈಗ ಕಬ್ಬು “ಬರ’! ನೀರಿನ ಕೊರತೆಯಿಂದ ಬೆಳೆಯದ ಕಬ್ಬು

Sugar ಕಾರ್ಖಾನೆಗಳಿಗೆ ಈಗ ಕಬ್ಬು “ಬರ’! ನೀರಿನ ಕೊರತೆಯಿಂದ ಬೆಳೆಯದ ಕಬ್ಬು

Ambulance ಸಕಾಲಕ್ಕೆ ಬಂದಿದ್ದರೆ ನಟಿ ಬದುಕುತ್ತಿದ್ದರು: ಸ್ನೇಹಿತ

Ambulance ಸಕಾಲಕ್ಕೆ ಬಂದಿದ್ದರೆ ನಟಿ ಬದುಕುತ್ತಿದ್ದರು: ಸ್ನೇಹಿತ

ಕುಮಾರಸ್ವಾಮಿಗೂ ರೇವಣ್ಣ ಸ್ಥಿತಿಯೇ ಬರಲಿದೆ: ಕಾಂಗ್ರೆಸ್‌ ಶಾಸಕ ಉದಯ್‌

HD ಕುಮಾರಸ್ವಾಮಿಗೂ ರೇವಣ್ಣ ಸ್ಥಿತಿಯೇ ಬರಲಿದೆ: ಕಾಂಗ್ರೆಸ್‌ ಶಾಸಕ ಉದಯ್‌

11-mandya

Protest: ಕೆರಗೋಡು ಹನುಮ ಧ್ವಜ ವಿವಾದ; ಜೆಡಿಎಸ್, ಭಜರಂಗದಳ, ವಿ.ಹಿಂ.ಪ. ಪ್ರತಿಭಟನೆ

foeticide

Mandya: ಮತ್ತೆ ಹೆಣ್ಣುಭ್ರೂಣ ಹತ್ಯೆ ಜಾಲ ಪತ್ತೆ; ನಾಲ್ವರ ಬಂಧನ

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

6-

Pregnancy: ಗರ್ಭಧಾರಣೆಯ ಭಾವನಾತ್ಮಕ ಅಂಶಗಳು

swati maliwal

AAP; ಸಂತ್ರಸ್ತೆಯಾದ ಸ್ವಾತಿ ಮಲಿವಾಲ್

5-

Neuromodulation therapy : ಮಾನಸಿಕ ಕಾಯಿಲೆಗಳಿಗೆ ನ್ಯೂರೋಮಾಡ್ಯುಲೇಷನ್‌ ಚಿಕಿತ್ಸೆ

RCBvsCSK; ಧೋನಿಯ 110 ಮೀ ಸಿಕ್ಸ್ ಕಾರಣದಿಂದ ನಾವು ಗೆದ್ದೆವು..: ದಿ.ಕಾರ್ತಿಕ್ ಹೇಳಿದ್ದೇನು

RCBvsCSK; ಧೋನಿಯ 110 ಮೀ ಸಿಕ್ಸ್ ಕಾರಣದಿಂದ ನಾವು ಗೆದ್ದೆವು..: ಕಾರ್ತಿಕ್ ಹೇಳಿದ್ದೇನು

4-mother

Mother: ತಾಯಿಯ ವೃತ್ತಿಗಳು; ಆಕ್ಯುಪೇಷನಲ್‌ ಥೆರಪಿಯ ಒಳನೋಟಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.