8 ಲಕ್ಷಕ್ಕೆ ಮಾರಾಟವಾದ ಕಿಲಾರಿ ಜೋಡೆತ್ತು
Team Udayavani, Sep 29, 2021, 1:33 PM IST
ಗೋಕಾಕ: ಹೊಳಿ ಬೆನಚಿನ ಮರ್ಡಿ ಗ್ರಾಮದ ಮಾಜಿ ಸೈನಿಕರೊಬ್ಬರು ತಾವು ಸಾಕಿ ಬೆಳೆಸಿದ ಕಿಲಾರಿ ತಳಿಯ ಜೋಡೆತ್ತುಗಳನ್ನು ಎಂಟು ಲಕ್ಷ ರೂ.ಗಳಿಗೆ ಮಾರುವ ಮೂಲಕ ಗಮನ ಸೆಳೆದಿದ್ದಾರೆ.
ಮಾಜಿ ಸೈನಿಕ ಯಮನಪ್ಪ ರಾಮೋಜಿ ಮಾಳಗಿ ಅವರು ಎರಡು ವರ್ಷಗಳ ಹಿಂದೆ ಎರಡು ಎತ್ತಿನ ಕರುಗಳನ್ನು ಎರಡು ಲಕ್ಷ ರೂ.ಗಳಿಗೆ ಖರೀದಿಸಿ, ಸಾಕಿದ್ದರು. ಎತ್ತುಗಳಿಗೆ ಮೇವು ಹಾಗೂ ಇನ್ನಿತರೆ ಖರ್ಚಿಗಾಗಿ ಪ್ರತಿದಿನ 500 ರಿಂದ 600 ರೂ. ಖರ್ಚು ಮಾಡುತ್ತಿದ್ದರು. ಈಗ ಈ ಎತ್ತುಗಳನ್ನು ಮಹಾರಾಷ್ಟ್ರದ ಸತಾರಾ ಮೂಲದ ವ್ಯಕ್ತಿಯೊಬ್ಬರಿಗೆ 8 ಲಕ್ಷ ರೂ.ಗೆ ಮಾರಿದ್ದಾರೆ.
ಎತ್ತುಗಳನ್ನು ಅತ್ಯಂತ ಪ್ರೀತಿ, ಅಭಿಮಾನದಿಂದ ಸಾಕಿ ಬೆಳೆಸಿದ್ದೆ. ದೇವಸ್ಥಾನ ಕಾರ್ಯಗಳಿಗೆ ಬಳಸಿಕೊಳ್ಳುವುದಕ್ಕಾಗಿ ಈ ಎತ್ತುಗಳನ್ನು ಖರೀದಿಸಿದ್ದಾರೆ. ಹೀಗಾಗಿ ಮಾರಿದ್ದೇನೆ ಎಂದು ಯಮನಪ್ಪ ತಿಳಿಸಿದ್ದಾರೆ.
ಈ ನಡುವೆ ಎತ್ತುಗಳ ಮೇಲೆ ಅಪಾರ ಪ್ರೀತಿ-ಅಭಿಮಾನ ಹೊಂದಿದ್ದ ಯಮನಪ್ಪ ಅವರು, ಮಾರಾಟಕ್ಕೂ ಮುನ್ನ ಗ್ರಾಮದಲ್ಲಿ ಎತ್ತುಗಳ ಅದ್ಧೂರಿ ಮೆರವಣಿಗೆ ನಡೆಸಿದರು. ಗ್ರಾಮದ ನೂರಾರು ಜನರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
MUST WATCH
ಹೊಸ ಸೇರ್ಪಡೆ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು